ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಡೆಂಗಿ: ಸಾಮೂಹಿಕ ಜ್ವರದ ಮೇಲೆ ಕಣ್ಗಾವಲು

ಕಳೆದ ವರ್ಷಕ್ಕಿಂತಲೂ ಜಿಲ್ಲೆಯಲ್ಲಿ ಶೇ. 60ರಷ್ಟು ಹೆಚ್ಚು ಡೆಂಗಿ ಪ್ರಕರಣ ಬಯಲಿಗೆ
Published : 4 ಜುಲೈ 2024, 6:09 IST
Last Updated : 4 ಜುಲೈ 2024, 6:09 IST
ಫಾಲೋ ಮಾಡಿ
Comments
ಡೆಂಗಿ ಪತ್ತೆಗೆ ಆರೋಗ್ಯ ಇಲಾಖೆಯಿಂದ ಲಾರಾ ಸರ್ವೆ ಆರು ತಿಂಗಳಲ್ಲಿ 92 ಪ್ರಕರಗಳು ದಾಖಲು ಕೊಪ್ಪಳ ತಾಲ್ಲೂಕು ಒಂದರಲ್ಲಿಯೇ 30 ಪ್ರಕರಣ ಬಯಲು
‘ನೀರು ಸಂಗ್ರಹಣೆ ಬಗ್ಗೆ ಎಚ್ಚರವಿರಲಿ’
ಕೊಪ್ಪಳ: ವಾರಗಟ್ಟಲೆ ನೀರು ಶೇಖರಣೆ ಮಾಡಿದಾಗ ಕೊಳಚೆ ನೀರು ಒಂದೇ ಕಡೆ ಸಂಗ್ರಹವಾದ ಸುತ್ತಮುತ್ತಲಿನ ಜನವಸತಿ ಪ್ರದೇಶದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಈ ಬಗ್ಗೆ ಜನ ಎಚ್ಚರಿಕೆ ವಹಿಸಬೇಕು ಎಂದು ಡಿಎಚ್‌ಒ ಡಾ. ಲಿಂಗರಾಜು ಟಿ. ಹೇಳಿದರು.   ‘ವಾತಾವರಣದ ಏರಿಳಿತ ಸೊಳ್ಳೆಗಳ ಉತ್ಪತ್ತಿ ಪ್ರಮಾಣ ಹೆಚ್ಚಿಸಿದೆ. ಸಂಜೆ ಸೊಳ್ಳೆಗಳು ಕಚ್ಚದ ಹಾಗೆ ನೋಡಿಕೊಳ್ಳಬೇಕು ನೀರು ನಿಲ್ಲದಂತೆ ಜಾಗೃತಿ ವಹಿಸಿ. ಹಲವು ಬಾರಿ ಜ್ವರದ ಡೆಂಗಿ ಲಕ್ಷಣಗಳನ್ನು ಹೊಂದಿದ್ದರು ಅನೇಕರಿಗೆ ರಕ್ತಪರೀಕ್ಷೆಯಲ್ಲಿ ಡೆಂಗಿ ಇರುವುದು ಖಚಿಪಟ್ಟಿರುವುದಿಲ್ಲ. ಇದಕ್ಕೂ ಡೆಂಗಿ ರೋಗಿಗೆ ನೀಡುವ ಚಿಕಿತ್ಸೆಯನ್ನೇ ಕೊಡಲಾಗುತ್ತದೆ. ಮೊದಲು ಡೆಂಗಿ ಪತ್ತೆಗೆ ಪ್ರತಿ ಲಾರಾ ಸರ್ವೆ ನಡೆಸಲಾಗುತ್ತಿದೆ’ ಎಂದರು.
ಶುಕ್ರವಾರ ಉತ್ಪತ್ತಿ ತಾಣ ನಾಶಮಾಡುವ ದಿನ
ರಾಜ್ಯದಾದ್ಯಂತ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನವೆಂದು ಘೋಷಣೆ ಮಾಡಿದೆ. ಈ ಕುರಿತು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದು ಶುಕ್ರವಾರ ಮನೆ ಶಾಲೆ ಕಾಲೇಜು ಅಂಗವನಾಡಿ ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಗಲಿನಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT