<p><strong>ಮುನಿರಾಬಾದ್:</strong> ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ತಂಡಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ಕಂಪಸಾಗರ ಗ್ರಾಮದಲ್ಲಿ ಶುಕ್ರವಾರ ನಡೆಯಿತು.</p>.<p>ಸಂಸ್ಥೆಯ ಹಿಟ್ನಾಳ ವಲಯ ಮೇಲ್ವಿಚಾರಕ ಎ.ಮಹಾಂತೇಶ ಮಾತನಾಡಿ, ‘ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 2,925 ಸಂಘಗಳಿದ್ದು, ₹ 4.89 ಕೋಟಿ ಲಾಭಾಂಶ ವಿತರಿಸಲಾಗುತ್ತಿದೆ. ಹಿಟ್ನಾಳ ವಲಯ ವ್ಯಾಪ್ತಿಯ ಕಂಪಸಾಗರ ಕಾರ್ಯಕ್ಷೇತ್ರದಲ್ಲಿ ಒಟ್ಟು 20 ತಂಡಗಳಿಗೆ ₹.3.41ಲಕ್ಷ ಲಾಭಾಂಶವನ್ನು ಘೋಷಿಸಲಾಗಿದೆ’ ಎಂದರು.</p>.<p>‘ಹಿಟ್ನಾಳ ವಲಯ ವ್ಯಾಪ್ತಿಯಲ್ಲಿ 157 ತಂಡಗಳಿಗೆ ₹. 27.42 ಲಕ್ಷ ಹಣವನ್ನು ಲಾಭಾಂಶವೆಂದು ತೆಗೆದಿರಿಸಲಾಗಿದೆ. ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿ, ಸಾಲ ಪಡೆದು ಮತ್ತು ಮರುಪಾವತಿಸಿ ಉತ್ತಮ ವ್ಯವಹಾರ ನಡೆಸಿದ ಸಂಘಗಳಿಗೆ ಲಾಭಾಂಶವನ್ನು ನೀಡಲಾಗುತ್ತಿದೆ’ ಎಂದರು.</p>.<p>ಕಂಪಸಾಗರ ಗ್ರಾಮದ ಶ್ರೀಅನ್ನಪೂರ್ಣೆಶ್ವರಿ, ಶ್ರೀ ದುರ್ಗಾ, ಬಸವೇಶ್ವರ ಗಂಗಾಪರಮೇಶ್ವರಿ, ಗಂಗಾಪರಮೇಶ್ವರಿ, ನವಶಕ್ತಿವೈಭವ, ಮಹಾವೀರ ಹಾಗೂ ಶ್ರೀರಾಮ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು. ಸೇವಾ ಪ್ರತಿನಿಧಿ ಕೆ.ಗೀತಾ ಮತ್ತು ಸಿಬ್ಬಂದಿ ಹುಚ್ಚಿರಪ್ಪ ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನಿರಾಬಾದ್:</strong> ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ತಂಡಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ಕಂಪಸಾಗರ ಗ್ರಾಮದಲ್ಲಿ ಶುಕ್ರವಾರ ನಡೆಯಿತು.</p>.<p>ಸಂಸ್ಥೆಯ ಹಿಟ್ನಾಳ ವಲಯ ಮೇಲ್ವಿಚಾರಕ ಎ.ಮಹಾಂತೇಶ ಮಾತನಾಡಿ, ‘ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 2,925 ಸಂಘಗಳಿದ್ದು, ₹ 4.89 ಕೋಟಿ ಲಾಭಾಂಶ ವಿತರಿಸಲಾಗುತ್ತಿದೆ. ಹಿಟ್ನಾಳ ವಲಯ ವ್ಯಾಪ್ತಿಯ ಕಂಪಸಾಗರ ಕಾರ್ಯಕ್ಷೇತ್ರದಲ್ಲಿ ಒಟ್ಟು 20 ತಂಡಗಳಿಗೆ ₹.3.41ಲಕ್ಷ ಲಾಭಾಂಶವನ್ನು ಘೋಷಿಸಲಾಗಿದೆ’ ಎಂದರು.</p>.<p>‘ಹಿಟ್ನಾಳ ವಲಯ ವ್ಯಾಪ್ತಿಯಲ್ಲಿ 157 ತಂಡಗಳಿಗೆ ₹. 27.42 ಲಕ್ಷ ಹಣವನ್ನು ಲಾಭಾಂಶವೆಂದು ತೆಗೆದಿರಿಸಲಾಗಿದೆ. ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿ, ಸಾಲ ಪಡೆದು ಮತ್ತು ಮರುಪಾವತಿಸಿ ಉತ್ತಮ ವ್ಯವಹಾರ ನಡೆಸಿದ ಸಂಘಗಳಿಗೆ ಲಾಭಾಂಶವನ್ನು ನೀಡಲಾಗುತ್ತಿದೆ’ ಎಂದರು.</p>.<p>ಕಂಪಸಾಗರ ಗ್ರಾಮದ ಶ್ರೀಅನ್ನಪೂರ್ಣೆಶ್ವರಿ, ಶ್ರೀ ದುರ್ಗಾ, ಬಸವೇಶ್ವರ ಗಂಗಾಪರಮೇಶ್ವರಿ, ಗಂಗಾಪರಮೇಶ್ವರಿ, ನವಶಕ್ತಿವೈಭವ, ಮಹಾವೀರ ಹಾಗೂ ಶ್ರೀರಾಮ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು. ಸೇವಾ ಪ್ರತಿನಿಧಿ ಕೆ.ಗೀತಾ ಮತ್ತು ಸಿಬ್ಬಂದಿ ಹುಚ್ಚಿರಪ್ಪ ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>