ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಗಳಿಗೆ ಲಾಭಾಂಶ ವಿತರಣೆ

Last Updated 11 ಜುಲೈ 2021, 5:45 IST
ಅಕ್ಷರ ಗಾತ್ರ

ಮುನಿರಾಬಾದ್: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ತಂಡಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ಕಂಪಸಾಗರ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

ಸಂಸ್ಥೆಯ ಹಿಟ್ನಾಳ ವಲಯ ಮೇಲ್ವಿಚಾರಕ ಎ.ಮಹಾಂತೇಶ ಮಾತನಾಡಿ, ‘ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 2,925 ಸಂಘಗಳಿದ್ದು, ₹ 4.89 ಕೋಟಿ ಲಾಭಾಂಶ ವಿತರಿಸಲಾಗುತ್ತಿದೆ. ಹಿಟ್ನಾಳ ವಲಯ ವ್ಯಾಪ್ತಿಯ ಕಂಪಸಾಗರ ಕಾರ್ಯಕ್ಷೇತ್ರದಲ್ಲಿ ಒಟ್ಟು 20 ತಂಡಗಳಿಗೆ ₹.3.41ಲಕ್ಷ ಲಾಭಾಂಶವನ್ನು ಘೋಷಿಸಲಾಗಿದೆ’ ಎಂದರು.

‘ಹಿಟ್ನಾಳ ವಲಯ ವ್ಯಾಪ್ತಿಯಲ್ಲಿ 157 ತಂಡಗಳಿಗೆ ₹. 27.42 ಲಕ್ಷ ಹಣವನ್ನು ಲಾಭಾಂಶವೆಂದು ತೆಗೆದಿರಿಸಲಾಗಿದೆ. ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿ, ಸಾಲ ಪಡೆದು ಮತ್ತು ಮರುಪಾವತಿಸಿ ಉತ್ತಮ ವ್ಯವಹಾರ ನಡೆಸಿದ ಸಂಘಗಳಿಗೆ ಲಾಭಾಂಶವನ್ನು ನೀಡಲಾಗುತ್ತಿದೆ’ ಎಂದರು.

ಕಂಪಸಾಗರ ಗ್ರಾಮದ ಶ್ರೀಅನ್ನಪೂರ್ಣೆಶ್ವರಿ, ಶ್ರೀ ದುರ್ಗಾ, ಬಸವೇಶ್ವರ ಗಂಗಾಪರಮೇಶ್ವರಿ, ಗಂಗಾಪರಮೇಶ್ವರಿ, ನವಶಕ್ತಿವೈಭವ, ಮಹಾವೀರ ಹಾಗೂ ಶ್ರೀರಾಮ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು. ಸೇವಾ ಪ್ರತಿನಿಧಿ ಕೆ.ಗೀತಾ ಮತ್ತು ಸಿಬ್ಬಂದಿ ಹುಚ್ಚಿರಪ್ಪ ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT