<p><strong>ಗಂಗಾವತಿ</strong>: ತಾಲ್ಲೂಕಿನ ಆನೆಗೊಂದಿ, ಕಡೆಬಾಗಿಲು, ಗೂಗಿಬಂಡಿ, ಗೂಗಿಬಂಡಿ ಕ್ಯಾಂಪ್, ಬಸವನದುರ್ಗಾ, ಬಂಡಿಬಸಪ್ಪ ಕ್ಯಾಂಪ್, ಸಾಯಿನಗರ, ರಾಯಲು ನಗರ, ನಾಗರಹಳ್ಳಿ, ವಡ್ಡರಹಟ್ಟಿ ಕ್ಯಾಂಪ್ ಗ್ರಾಮದಲ್ಲಿ ಮಂಗಳವಾರ ಕೆಆರ್ಪಿ ಪಕ್ಷದಿಂದ ಚುನಾವಣೆ ಮತ ಪ್ರಚಾರ ನಡೆಸಲಾಯಿತು.</p>.<p>ಕೆಆರ್ಪಿ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಅಧಿಕೃತವಾಗಿ ಫುಟ್ಬಾಲ್ (ಚೆಂಡು) ಚಿಹ್ನೆ ದೊರೆತ ನಂತರ ಮೊದಲ ಪ್ರಚಾರ ಕಾರ್ಯಕ್ರಮ ಇದಾಗಿದ್ದು, ಪಕ್ಷದ ಸಂಸ್ಥಾಪಕ ಜನಾರ್ದನರಡ್ಡಿ ಕೈಯಲ್ಲಿ ಫುಟ್ಬಾಲ್ ಹಿಡಿದು ಜನರಿಗೆ ಅಭಿವೃದ್ಧಿ ಭರವಸೆ ನೀಡಿದರು.</p>.<p>ನಂತರ ಮಾತನಾಡಿ, ಗ್ರಾಮಗಳಿಗೆ ಬೇಕಾದ ಅಗತ್ಯ ಸೌಕರ್ಯ, ಸಮಸ್ಯೆ, ಅಭಿವೃದ್ಧಿ ಕಾರ್ಯಗಳು ಮಾಡುತ್ತೇನೆ. ಒಂದೇ ಅವಕಾಶ ನೀಡಿ. ಗಂಗಾವತಿ ಚಿತ್ರಣವನ್ನೇ ಬದಲಿಸಿ, ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.</p>.<p>ನಂತರ ಪಕ್ಷದ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ, ಮತ ನೀಡುವಂತೆ ಜನರನ್ನು ಕೋರಿದರು.</p>.<p>ಸಂಗಾಪುರ ಗ್ರಾ.ಪಂ ಸದಸ್ಯರಾದ ಲಕ್ಷ್ಮವ್ವ ಹನುಮಂತಪ್ಪ ಗುಂಟೂರು, ಬಿ.ಗೋಪಿ ಸೇರಿ ತಾಳೂರು ಸತ್ಯನಾರಾಯಣ ಕೆಆರ್ಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.</p>.<p>ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ಗ್ರಾಮೀಣ ಘಟಕದ ಅಧ್ಯಕ್ಷ ದುರ್ಗಪ್ಪ ಆಗೋಲಿ, ಪಕ್ಷದ ಮುಖಂಡರಾದ ಸೈಯದ್ ಜಿಲಾನಿ ಪಾಷ, ಜೋಗದ ದುರ್ಗಪ್ಪ ನಾಯಕ, ಯಮನೂರು ಚೌಡ್ಕಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ತಾಲ್ಲೂಕಿನ ಆನೆಗೊಂದಿ, ಕಡೆಬಾಗಿಲು, ಗೂಗಿಬಂಡಿ, ಗೂಗಿಬಂಡಿ ಕ್ಯಾಂಪ್, ಬಸವನದುರ್ಗಾ, ಬಂಡಿಬಸಪ್ಪ ಕ್ಯಾಂಪ್, ಸಾಯಿನಗರ, ರಾಯಲು ನಗರ, ನಾಗರಹಳ್ಳಿ, ವಡ್ಡರಹಟ್ಟಿ ಕ್ಯಾಂಪ್ ಗ್ರಾಮದಲ್ಲಿ ಮಂಗಳವಾರ ಕೆಆರ್ಪಿ ಪಕ್ಷದಿಂದ ಚುನಾವಣೆ ಮತ ಪ್ರಚಾರ ನಡೆಸಲಾಯಿತು.</p>.<p>ಕೆಆರ್ಪಿ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಅಧಿಕೃತವಾಗಿ ಫುಟ್ಬಾಲ್ (ಚೆಂಡು) ಚಿಹ್ನೆ ದೊರೆತ ನಂತರ ಮೊದಲ ಪ್ರಚಾರ ಕಾರ್ಯಕ್ರಮ ಇದಾಗಿದ್ದು, ಪಕ್ಷದ ಸಂಸ್ಥಾಪಕ ಜನಾರ್ದನರಡ್ಡಿ ಕೈಯಲ್ಲಿ ಫುಟ್ಬಾಲ್ ಹಿಡಿದು ಜನರಿಗೆ ಅಭಿವೃದ್ಧಿ ಭರವಸೆ ನೀಡಿದರು.</p>.<p>ನಂತರ ಮಾತನಾಡಿ, ಗ್ರಾಮಗಳಿಗೆ ಬೇಕಾದ ಅಗತ್ಯ ಸೌಕರ್ಯ, ಸಮಸ್ಯೆ, ಅಭಿವೃದ್ಧಿ ಕಾರ್ಯಗಳು ಮಾಡುತ್ತೇನೆ. ಒಂದೇ ಅವಕಾಶ ನೀಡಿ. ಗಂಗಾವತಿ ಚಿತ್ರಣವನ್ನೇ ಬದಲಿಸಿ, ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.</p>.<p>ನಂತರ ಪಕ್ಷದ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ, ಮತ ನೀಡುವಂತೆ ಜನರನ್ನು ಕೋರಿದರು.</p>.<p>ಸಂಗಾಪುರ ಗ್ರಾ.ಪಂ ಸದಸ್ಯರಾದ ಲಕ್ಷ್ಮವ್ವ ಹನುಮಂತಪ್ಪ ಗುಂಟೂರು, ಬಿ.ಗೋಪಿ ಸೇರಿ ತಾಳೂರು ಸತ್ಯನಾರಾಯಣ ಕೆಆರ್ಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.</p>.<p>ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ಗ್ರಾಮೀಣ ಘಟಕದ ಅಧ್ಯಕ್ಷ ದುರ್ಗಪ್ಪ ಆಗೋಲಿ, ಪಕ್ಷದ ಮುಖಂಡರಾದ ಸೈಯದ್ ಜಿಲಾನಿ ಪಾಷ, ಜೋಗದ ದುರ್ಗಪ್ಪ ನಾಯಕ, ಯಮನೂರು ಚೌಡ್ಕಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>