ಈ ಬಗ್ಗೆ ಮಾತನಾಡಿದ ಗ್ರಾಮದ ಸಣ್ಣಪ್ಪ ಅರಳಿ, ಬಸವರಾಜ ಬೇವಿನಮಠ, ‘ಮಳೆ, ವಿಪರೀತ ಗಾಳಿ ಬೀಸುತ್ತಿದ್ದು, ಕಂಬ ದಿನದಿಂದ ದಿನಕ್ಕೆ ವಾಲುತ್ತಿದೆ. ದುರಸ್ತಿಗೀಡಾದಂತೆ ಕಾಣುವ ಈ ವಿದ್ಯುತ್ ಕಂಬ ಹಾಗೂ ತಂತಿಯಲ್ಲಿ ವಿದ್ಯುತ್ ಪ್ರವಾಹಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗಲಿದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದ್ದಾರೆ.