<p><strong>ಗಂಗಾವತಿ:</strong> ತಾಲ್ಲೂಕಿನ ಆನೆಗುಂದಿ ರಸ್ತೆಯಲ್ಲಿನ ಗಣೇಶ ದೇವಸ್ಥಾನದಲ್ಲಿ ಭಾನುವಾರ ಆರ್ಯ ಈಡಿಗ ಸಮಾಜದ ವತಿಯಿಂದ ಗಣೇಶ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.</p>.<p>ಈಡಿಗ ಸಮಾಜದ ಮುಖಂಡ ಅಜಯ ಬಿಚ್ಚಾಲಿ ಮಾತನಾಡಿ, ಈಡಿಗ ಸಮಾಜದ ವತಿಯಿಂದ ಪ್ರತಿ ವರ್ಷ ಗಂಗಾವತಿ ನಗರದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಸಂಭ್ರಮ ಆಚರಿಸಲಾಗುತ್ತಿತ್ತು. ಆದರೆ, ಕೆಲ ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಆಗಲಿಲ್ಲ. ಈ ವರ್ಷ ಈಡಿಗ ಸಮಾಜದ ಯುವಕರೆಲ್ಲರೂ ಒಗ್ಗಟ್ಟಾಗಿ ಎಂದಿನಂತೆ ಗಣೇಶ ಚತುರ್ಥಿ ಆಚರಿಸಲು ಮುಂದಾಗಬೇಕು. ಜೊತೆಗೆ ಜಾತ್ಯತೀತವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಬೇಕು ಎಂದರು.</p>.<p>ಸಭೆಯಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕಿನ ಈಡಿಗ ಸಮಾಜದ ಯುವಕರು ಹಾಜರಾಗಿದ್ದರು.</p>.<p>ಸಮಾಜದ ಬಸವರಾಜ ಕಾರಟಗಿ, ಬಸವರಾಜ ವಡ್ಡರಹಟ್ಟಿ, ಮಾರ್ಕಂಡೇಯ ದಾಸನಾಳ, ಮದ್ದಾನಪ್ಪ ಬಸಾಪಟ್ಟಣ, ರುದ್ರೇಶ್ ಆರ್ಹಾಳ, ಸುಜೀತ್, ರಮೇಶ್, ಮದನ್, ಪುನಿತ್ ಮಧುಸೂದನ್, ಶರಣಪ್ಪ ಮರಕುಂಬಿ, ವೆಂಕಟೇಶ ಗುಂಡೂರು, ನಾಗರಾಜ್ ಚಿಕ್ಕಜಂತಕಲ್, ವಿನೋದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ತಾಲ್ಲೂಕಿನ ಆನೆಗುಂದಿ ರಸ್ತೆಯಲ್ಲಿನ ಗಣೇಶ ದೇವಸ್ಥಾನದಲ್ಲಿ ಭಾನುವಾರ ಆರ್ಯ ಈಡಿಗ ಸಮಾಜದ ವತಿಯಿಂದ ಗಣೇಶ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.</p>.<p>ಈಡಿಗ ಸಮಾಜದ ಮುಖಂಡ ಅಜಯ ಬಿಚ್ಚಾಲಿ ಮಾತನಾಡಿ, ಈಡಿಗ ಸಮಾಜದ ವತಿಯಿಂದ ಪ್ರತಿ ವರ್ಷ ಗಂಗಾವತಿ ನಗರದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಸಂಭ್ರಮ ಆಚರಿಸಲಾಗುತ್ತಿತ್ತು. ಆದರೆ, ಕೆಲ ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಆಗಲಿಲ್ಲ. ಈ ವರ್ಷ ಈಡಿಗ ಸಮಾಜದ ಯುವಕರೆಲ್ಲರೂ ಒಗ್ಗಟ್ಟಾಗಿ ಎಂದಿನಂತೆ ಗಣೇಶ ಚತುರ್ಥಿ ಆಚರಿಸಲು ಮುಂದಾಗಬೇಕು. ಜೊತೆಗೆ ಜಾತ್ಯತೀತವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಬೇಕು ಎಂದರು.</p>.<p>ಸಭೆಯಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕಿನ ಈಡಿಗ ಸಮಾಜದ ಯುವಕರು ಹಾಜರಾಗಿದ್ದರು.</p>.<p>ಸಮಾಜದ ಬಸವರಾಜ ಕಾರಟಗಿ, ಬಸವರಾಜ ವಡ್ಡರಹಟ್ಟಿ, ಮಾರ್ಕಂಡೇಯ ದಾಸನಾಳ, ಮದ್ದಾನಪ್ಪ ಬಸಾಪಟ್ಟಣ, ರುದ್ರೇಶ್ ಆರ್ಹಾಳ, ಸುಜೀತ್, ರಮೇಶ್, ಮದನ್, ಪುನಿತ್ ಮಧುಸೂದನ್, ಶರಣಪ್ಪ ಮರಕುಂಬಿ, ವೆಂಕಟೇಶ ಗುಂಡೂರು, ನಾಗರಾಜ್ ಚಿಕ್ಕಜಂತಕಲ್, ವಿನೋದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>