<p><strong>ಗಂಗಾವತಿ</strong>:ನಗರದ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ನಡೆದ ಕವಿಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ನೀಲಮ್ಮ ಹಿರೇಮಠ ಅವರ ‘ಕರುಳಕಂಪನ’ ಕವನ ಸಂಕಲನದ ಪರಿಚಯ ಜರುಗಿತು.</p>.<p>ಕವಿಯತ್ರಿ ನೀಲಮ್ಮ ಹಿರೇಮಠ ಮಾತನಾಡಿ, ‘ಬದುಕಿನ ಗಾಢ ಅನುಭವಗಳೇ ಕಾವ್ಯಕ್ಕೆ ಸ್ಪೂರ್ತಿ. ಜೀವನಾನುಭವಗಳು ಕವಿತೆ ರಚಿಸಲು ಪ್ರೇರಣೆ ನೀಡುತ್ತವೆ. ಬಾಲ್ಯದ ಅನುಭವಗಳನ್ನು ಕಾವ್ಯದ ಮೂಲಕ ಹಂಚಿಕೊಂಡಿರುವೆ. ನಿಂದೆ, ಅಪಮಾನಗಳು ಬರುವುದು ಸಹಜ. ನಮ್ಮನ್ನು ಕುಗ್ಗಿಸುವ ವಿದ್ಯಮಾನಗಳು ನಡೆದರೂ ಹಿಂಜರಿಕೆಯಿಲ್ಲದೆ ಮುನ್ನಡೆಯಬೇಕು’ ಎಂದರು.</p>.<p>ಐಶ್ವರ್ಯ ಕೃತಿ ಪರಿಚಯಿಸಿದರು. ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಮುಮ್ತಾಜ್ ಬೇಗಂ ಮಾತನಾಡಿದರು.</p>.<p>ಶಿಕ್ಷಕ ಶಿವಪ್ರಸಾದ, ಸಹಾಯಕ ಪ್ರಾಧ್ಯಾಪಕ ರವಿ ಹಾದಿಮನಿ, ಉಪನ್ಯಾಸಕ ಬಸವರಾಜ ಗೌಡನ ಬಾವಿ, ಉಷಾರಾಣಿ, ಶಾಂತಮ್ಮ, ಗುಂಡೂರು ಪವನಕುಮಾರ, ಭಾಗ್ಯ, ಸುಧಾ ಉಪಸ್ಥಿತರಿದ್ದರು.</p>
<p><strong>ಗಂಗಾವತಿ</strong>:ನಗರದ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ನಡೆದ ಕವಿಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ನೀಲಮ್ಮ ಹಿರೇಮಠ ಅವರ ‘ಕರುಳಕಂಪನ’ ಕವನ ಸಂಕಲನದ ಪರಿಚಯ ಜರುಗಿತು.</p>.<p>ಕವಿಯತ್ರಿ ನೀಲಮ್ಮ ಹಿರೇಮಠ ಮಾತನಾಡಿ, ‘ಬದುಕಿನ ಗಾಢ ಅನುಭವಗಳೇ ಕಾವ್ಯಕ್ಕೆ ಸ್ಪೂರ್ತಿ. ಜೀವನಾನುಭವಗಳು ಕವಿತೆ ರಚಿಸಲು ಪ್ರೇರಣೆ ನೀಡುತ್ತವೆ. ಬಾಲ್ಯದ ಅನುಭವಗಳನ್ನು ಕಾವ್ಯದ ಮೂಲಕ ಹಂಚಿಕೊಂಡಿರುವೆ. ನಿಂದೆ, ಅಪಮಾನಗಳು ಬರುವುದು ಸಹಜ. ನಮ್ಮನ್ನು ಕುಗ್ಗಿಸುವ ವಿದ್ಯಮಾನಗಳು ನಡೆದರೂ ಹಿಂಜರಿಕೆಯಿಲ್ಲದೆ ಮುನ್ನಡೆಯಬೇಕು’ ಎಂದರು.</p>.<p>ಐಶ್ವರ್ಯ ಕೃತಿ ಪರಿಚಯಿಸಿದರು. ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಮುಮ್ತಾಜ್ ಬೇಗಂ ಮಾತನಾಡಿದರು.</p>.<p>ಶಿಕ್ಷಕ ಶಿವಪ್ರಸಾದ, ಸಹಾಯಕ ಪ್ರಾಧ್ಯಾಪಕ ರವಿ ಹಾದಿಮನಿ, ಉಪನ್ಯಾಸಕ ಬಸವರಾಜ ಗೌಡನ ಬಾವಿ, ಉಷಾರಾಣಿ, ಶಾಂತಮ್ಮ, ಗುಂಡೂರು ಪವನಕುಮಾರ, ಭಾಗ್ಯ, ಸುಧಾ ಉಪಸ್ಥಿತರಿದ್ದರು.</p>