<p><strong>ಗಂಗಾವತಿ</strong>:ನಗರದ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ನಡೆದ ಕವಿಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ನೀಲಮ್ಮ ಹಿರೇಮಠ ಅವರ ‘ಕರುಳಕಂಪನ’ ಕವನ ಸಂಕಲನದ ಪರಿಚಯ ಜರುಗಿತು.</p>.<p>ಕವಿಯತ್ರಿ ನೀಲಮ್ಮ ಹಿರೇಮಠ ಮಾತನಾಡಿ, ‘ಬದುಕಿನ ಗಾಢ ಅನುಭವಗಳೇ ಕಾವ್ಯಕ್ಕೆ ಸ್ಪೂರ್ತಿ. ಜೀವನಾನುಭವಗಳು ಕವಿತೆ ರಚಿಸಲು ಪ್ರೇರಣೆ ನೀಡುತ್ತವೆ. ಬಾಲ್ಯದ ಅನುಭವಗಳನ್ನು ಕಾವ್ಯದ ಮೂಲಕ ಹಂಚಿಕೊಂಡಿರುವೆ. ನಿಂದೆ, ಅಪಮಾನಗಳು ಬರುವುದು ಸಹಜ. ನಮ್ಮನ್ನು ಕುಗ್ಗಿಸುವ ವಿದ್ಯಮಾನಗಳು ನಡೆದರೂ ಹಿಂಜರಿಕೆಯಿಲ್ಲದೆ ಮುನ್ನಡೆಯಬೇಕು’ ಎಂದರು.</p>.<p>ಐಶ್ವರ್ಯ ಕೃತಿ ಪರಿಚಯಿಸಿದರು. ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಮುಮ್ತಾಜ್ ಬೇಗಂ ಮಾತನಾಡಿದರು.</p>.<p>ಶಿಕ್ಷಕ ಶಿವಪ್ರಸಾದ, ಸಹಾಯಕ ಪ್ರಾಧ್ಯಾಪಕ ರವಿ ಹಾದಿಮನಿ, ಉಪನ್ಯಾಸಕ ಬಸವರಾಜ ಗೌಡನ ಬಾವಿ, ಉಷಾರಾಣಿ, ಶಾಂತಮ್ಮ, ಗುಂಡೂರು ಪವನಕುಮಾರ, ಭಾಗ್ಯ, ಸುಧಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>:ನಗರದ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ನಡೆದ ಕವಿಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ನೀಲಮ್ಮ ಹಿರೇಮಠ ಅವರ ‘ಕರುಳಕಂಪನ’ ಕವನ ಸಂಕಲನದ ಪರಿಚಯ ಜರುಗಿತು.</p>.<p>ಕವಿಯತ್ರಿ ನೀಲಮ್ಮ ಹಿರೇಮಠ ಮಾತನಾಡಿ, ‘ಬದುಕಿನ ಗಾಢ ಅನುಭವಗಳೇ ಕಾವ್ಯಕ್ಕೆ ಸ್ಪೂರ್ತಿ. ಜೀವನಾನುಭವಗಳು ಕವಿತೆ ರಚಿಸಲು ಪ್ರೇರಣೆ ನೀಡುತ್ತವೆ. ಬಾಲ್ಯದ ಅನುಭವಗಳನ್ನು ಕಾವ್ಯದ ಮೂಲಕ ಹಂಚಿಕೊಂಡಿರುವೆ. ನಿಂದೆ, ಅಪಮಾನಗಳು ಬರುವುದು ಸಹಜ. ನಮ್ಮನ್ನು ಕುಗ್ಗಿಸುವ ವಿದ್ಯಮಾನಗಳು ನಡೆದರೂ ಹಿಂಜರಿಕೆಯಿಲ್ಲದೆ ಮುನ್ನಡೆಯಬೇಕು’ ಎಂದರು.</p>.<p>ಐಶ್ವರ್ಯ ಕೃತಿ ಪರಿಚಯಿಸಿದರು. ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಮುಮ್ತಾಜ್ ಬೇಗಂ ಮಾತನಾಡಿದರು.</p>.<p>ಶಿಕ್ಷಕ ಶಿವಪ್ರಸಾದ, ಸಹಾಯಕ ಪ್ರಾಧ್ಯಾಪಕ ರವಿ ಹಾದಿಮನಿ, ಉಪನ್ಯಾಸಕ ಬಸವರಾಜ ಗೌಡನ ಬಾವಿ, ಉಷಾರಾಣಿ, ಶಾಂತಮ್ಮ, ಗುಂಡೂರು ಪವನಕುಮಾರ, ಭಾಗ್ಯ, ಸುಧಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>