<p><strong>ಗಂಗಾವತಿ:</strong> ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಮನೆ ಮೇಲೆ ಗುಂಡಿನ ದಾಳಿ ಮಾಡಿಸಿದ ಬಳ್ಳಾರಿ ಶಾಸಕ ನಾರ ಭರತ್ ರೆಡ್ಡಿ, ಅವನ ಸಹಚರ ಸತೀಶ್ ರೆಡ್ಡಿ ಬಂಧನಕ್ಕೆ ಒ ತ್ತಾಯಿಸಿ, ಬಿಜೆಪಿ ಕಾರ್ಯಕರ್ತರು ನಗರದ ತಹಶೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿರು.</p>.<p>ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಹೀರೂರು ಮಾತನಾಡಿ, ಬಳ್ಳಾರಿ ನಗರದಲ್ಲಿ ಜ.3 ನಡೆಯಬೇಕಿದ್ದ ಮ ಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ವಿಚಾರಕ್ಕಾಗಿ ಬಳ್ಳಾ ರಿ ನಗರದಲ್ಲಿ ಬ್ಯಾನರ ಅಳವಡಿಕೆ ಮಾಡಲಾಗುತ್ತಿತ್ತು. ಜ.1 ರಂದು ಬಳ್ಳಾರಿ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಬಳ್ಳಾರಿ ಯಲ್ಲಿನ ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಮನೆ ಮುಂ ದೆ ಬ್ಯಾನರ್ ಅಳವಡಿಕೆ ಮಾಡಲು ಬಂದಿದ್ದಾರೆ.</p>.<p>ಆ ಸಮಯದಲ್ಲಿ ಭರತರೆಡ್ಡಿ ಸಹಚರ ಸತೀಶರೆಡ್ಡಿ ಹಾಗೂ ಬೆಂಬಲಿಗರು ದುರುದ್ದೇಶದಿದಂಲೇ ಗಲಾಟೆ ನಡೆಸಿ, ವಿಕೃತ ಮೆರೆದಿದ್ದಾರೆ.ಜಿ.ಜನಾರ್ದನರೆಡ್ಡಿ ಗಂಗಾವತಿಯಿಂದ ಬಳ್ಳಾ ರಿಗೆ ಹೋಗುವಷ್ಟರಲ್ಲಿ ಗಲಾಟೆ ವಿಕೋಪಕ್ಕೆ ಹೋಗಿದೆ. ಜ ನಾರ್ದನರೆಡ್ಡಿ ಬಳ್ಳಾರಿ ಮನೆಗೆ ಹೋಗುತ್ತಿದ್ದಂತೆ ಭರತರೆಡ್ಡಿ ಬೆಂಬಲಿಗರು ಗುರಿಯಾಗಿಸಿಕೊಂಡು ಗುಂಡು ಹಾರಿಸಿ, ಪೆ ಟ್ರೋಲ್ ಬಾಂಬ್ ಸಿಡಿಸಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಗುಂಡಿನ ದಾಳಿಯಿಂದ ರೆಡ್ಡಿ ಮನೆಯಲ್ಲಿ ನಾಲ್ಕೈದು ಗುಂ ಡುಗಳು ಬಿದ್ದಿವೆ. ಜನಾರ್ದನರೆಡ್ಡಿ ಹತ್ಯೆ ಮಾಡುವ ಉದ್ದೇಶ ದಿಂದಲೇ ಗಲಾಟೆ ನಡೆಸಿ, ಗುಂಡಿನ ದಾಳಿ ನಡೆಸಿದೆ. ಇದರಿಂ ದ ನೂರಾರು ಜನ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಗಾಯ ಗಳಾಗಿವೆ. ಕಾಂಗ್ರೆಸ್ ಪಕ್ಷದ ಓರ್ವ ಕಾರ್ಯಕರ್ತ ಸಹ ಮೃತ ಪಟ್ಟಿದ್ದಾನೆ. ಪ್ರಾಣಕ್ಕೆ ಬೆಲೆ ಇಲ್ಲದಂತೆ ಗಲಾಟೆ ನಡೆಸಿದ ಬ ಳ್ಳಾರಿ ಶಾಸಕ ಭರತರೆಡ್ಡಿಯನ್ನು ಗಲಾಟೆ ಪ್ರಕರಣದ ಪ್ರಮು ಖ ಆರೋಪಿ ಮಾಡಿ, ಸಹಚರ ಸತೀಶರೆಡ್ಡಿಯನ್ನು ಬಂಧಿಸ ಬೇಕೆಂದು ಒತ್ತಾಯಿಸಿ, ಮನವಿ ಸಲ್ಲಿಸಿದರು.</p>.<p>ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ದುರುಗಪ್ಪ ಆಗೋಲಿ ಬಿ ಜೆಪಿ ಪಕ್ಷದ ಕಾರ್ಯಕರ್ತ ವಿರುಪಾಕ್ಷಪ್ಪ ಸಿಂಗನಾಳ, ತಿಪ್ಪೇ ರುದ್ರಸ್ವಾಮಿ, ಮನೋಹರಗೌಡ, ವೀರೇಶ ಬಲಕುಂದಿ, ರಾ ಮನಾಯ್ಕ, ನಾಗರಾಜ ಚಳಗೇರಿ, ಪಂಪಣ್ಣ ನಾಯಕ, ವಿ ರುಪಾಕ್ಷಗೌಡ ನಾಯಕ, ಟಿ.ಜಿ.ಬಾಬು, ಪ್ರಸಾದ, ಬಸವಂ ತ ಪಾಟೀಲ, ಮಂಜುನಾಥ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಮನೆ ಮೇಲೆ ಗುಂಡಿನ ದಾಳಿ ಮಾಡಿಸಿದ ಬಳ್ಳಾರಿ ಶಾಸಕ ನಾರ ಭರತ್ ರೆಡ್ಡಿ, ಅವನ ಸಹಚರ ಸತೀಶ್ ರೆಡ್ಡಿ ಬಂಧನಕ್ಕೆ ಒ ತ್ತಾಯಿಸಿ, ಬಿಜೆಪಿ ಕಾರ್ಯಕರ್ತರು ನಗರದ ತಹಶೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿರು.</p>.<p>ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಹೀರೂರು ಮಾತನಾಡಿ, ಬಳ್ಳಾರಿ ನಗರದಲ್ಲಿ ಜ.3 ನಡೆಯಬೇಕಿದ್ದ ಮ ಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ವಿಚಾರಕ್ಕಾಗಿ ಬಳ್ಳಾ ರಿ ನಗರದಲ್ಲಿ ಬ್ಯಾನರ ಅಳವಡಿಕೆ ಮಾಡಲಾಗುತ್ತಿತ್ತು. ಜ.1 ರಂದು ಬಳ್ಳಾರಿ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಬಳ್ಳಾರಿ ಯಲ್ಲಿನ ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಮನೆ ಮುಂ ದೆ ಬ್ಯಾನರ್ ಅಳವಡಿಕೆ ಮಾಡಲು ಬಂದಿದ್ದಾರೆ.</p>.<p>ಆ ಸಮಯದಲ್ಲಿ ಭರತರೆಡ್ಡಿ ಸಹಚರ ಸತೀಶರೆಡ್ಡಿ ಹಾಗೂ ಬೆಂಬಲಿಗರು ದುರುದ್ದೇಶದಿದಂಲೇ ಗಲಾಟೆ ನಡೆಸಿ, ವಿಕೃತ ಮೆರೆದಿದ್ದಾರೆ.ಜಿ.ಜನಾರ್ದನರೆಡ್ಡಿ ಗಂಗಾವತಿಯಿಂದ ಬಳ್ಳಾ ರಿಗೆ ಹೋಗುವಷ್ಟರಲ್ಲಿ ಗಲಾಟೆ ವಿಕೋಪಕ್ಕೆ ಹೋಗಿದೆ. ಜ ನಾರ್ದನರೆಡ್ಡಿ ಬಳ್ಳಾರಿ ಮನೆಗೆ ಹೋಗುತ್ತಿದ್ದಂತೆ ಭರತರೆಡ್ಡಿ ಬೆಂಬಲಿಗರು ಗುರಿಯಾಗಿಸಿಕೊಂಡು ಗುಂಡು ಹಾರಿಸಿ, ಪೆ ಟ್ರೋಲ್ ಬಾಂಬ್ ಸಿಡಿಸಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಗುಂಡಿನ ದಾಳಿಯಿಂದ ರೆಡ್ಡಿ ಮನೆಯಲ್ಲಿ ನಾಲ್ಕೈದು ಗುಂ ಡುಗಳು ಬಿದ್ದಿವೆ. ಜನಾರ್ದನರೆಡ್ಡಿ ಹತ್ಯೆ ಮಾಡುವ ಉದ್ದೇಶ ದಿಂದಲೇ ಗಲಾಟೆ ನಡೆಸಿ, ಗುಂಡಿನ ದಾಳಿ ನಡೆಸಿದೆ. ಇದರಿಂ ದ ನೂರಾರು ಜನ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಗಾಯ ಗಳಾಗಿವೆ. ಕಾಂಗ್ರೆಸ್ ಪಕ್ಷದ ಓರ್ವ ಕಾರ್ಯಕರ್ತ ಸಹ ಮೃತ ಪಟ್ಟಿದ್ದಾನೆ. ಪ್ರಾಣಕ್ಕೆ ಬೆಲೆ ಇಲ್ಲದಂತೆ ಗಲಾಟೆ ನಡೆಸಿದ ಬ ಳ್ಳಾರಿ ಶಾಸಕ ಭರತರೆಡ್ಡಿಯನ್ನು ಗಲಾಟೆ ಪ್ರಕರಣದ ಪ್ರಮು ಖ ಆರೋಪಿ ಮಾಡಿ, ಸಹಚರ ಸತೀಶರೆಡ್ಡಿಯನ್ನು ಬಂಧಿಸ ಬೇಕೆಂದು ಒತ್ತಾಯಿಸಿ, ಮನವಿ ಸಲ್ಲಿಸಿದರು.</p>.<p>ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ದುರುಗಪ್ಪ ಆಗೋಲಿ ಬಿ ಜೆಪಿ ಪಕ್ಷದ ಕಾರ್ಯಕರ್ತ ವಿರುಪಾಕ್ಷಪ್ಪ ಸಿಂಗನಾಳ, ತಿಪ್ಪೇ ರುದ್ರಸ್ವಾಮಿ, ಮನೋಹರಗೌಡ, ವೀರೇಶ ಬಲಕುಂದಿ, ರಾ ಮನಾಯ್ಕ, ನಾಗರಾಜ ಚಳಗೇರಿ, ಪಂಪಣ್ಣ ನಾಯಕ, ವಿ ರುಪಾಕ್ಷಗೌಡ ನಾಯಕ, ಟಿ.ಜಿ.ಬಾಬು, ಪ್ರಸಾದ, ಬಸವಂ ತ ಪಾಟೀಲ, ಮಂಜುನಾಥ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>