<p><strong>ಹನುಮಸಾಗರ</strong>: ಆರು ವರ್ಷಗಳ ಹಿಂದೆ ಕೆಕೆಆರ್ಡಿಬಿ ಅನುದಾನದಲ್ಲಿ ನಿರ್ಮಿಸಲಾದ ಇಲ್ಲಿಯ 14ನೇ ವಾರ್ಡಿನ ಸಾರ್ವಜನಿಕ ಗ್ರಂಥಾಲಯ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ.</p>.<p>2017–18ನೇ ಸಾಲಿನಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಗ್ರಂಥಾಲಯವು ಇಂದಿಗೂ ಬಾಗಿಲು ತೆರೆದೆ ನಿಂತಿದೆ.</p>.<p>ಕಟ್ಟಡದಲ್ಲಿ ಪುಸ್ತಕಗಳನ್ನು ಸರಿಯಾಗಿ ಸಂರಕ್ಷಿಸಿಲ್ಲ. ಗ್ರಂಥಾಲಯದ ಒಳಾಂಗಣವೂ ನಿರಂತರ ಬಳಕೆಯ ಕೊರತೆಯಿಂದ ಅಸಮರ್ಪಕ ಸ್ಥಿತಿಯಲ್ಲಿದೆ. </p>.<p>ಈ ಗ್ರಂಥಾಲಯದಿಂದ ಕೇವಲ 300 ಮೀಟರ್ ಅಂತರದಲ್ಲೇ ಸರ್ಕಾರಿ ಹರಿಜನವಾಡ ಶಾಲೆ ಇದೆ. ಆ ಶಾಲೆಯ ವಿದ್ಯಾರ್ಥಿಗಳಿಗೆ ಈ ಗ್ರಂಥಾಲಯದಿಂದ ಶೈಕ್ಷಣಿಕ ಸಹಾಯ ದೊರೆಯಬಹುದಾಗಿತ್ತು. ಆದರೆ ಗ್ರಂಥಪಾಲಕರ ನೇಮಕಾತಿ ಪೂರ್ಣಗೊಳ್ಳದಿರುವುದರಿಂದ ಇದರ ಉಪಯೋಗ ಸ್ಥಳೀಯರಿಗೆ ಸಿಗದಂತಾಗಿದೆ.</p>.<p>14ನೇ ವಾರ್ಡಿನ ಜನರಲ್ಲಿ ಬಹುತೇಕರು ವಿದ್ಯಾವಂತರಾಗಿದ್ದು, ಓದಿಗೆ ಹೆಚ್ಚಿನ ಪ್ರೋತ್ಸಾಹ ನೀಡುವವರು. ಈ ಪ್ರದೇಶದಲ್ಲೇ ಸಾರ್ವಜನಿಕ ಗ್ರಂಥಾಲಯ ಒಂದೇ ಇದ್ದು, ಅದರ ಸಮೀಪದಲ್ಲೇ ವಿದ್ಯಾರ್ಥಿಗಳ ವಸತಿ ನಿಲಯವೂ ಇದೆ. ಈ ಕಾರಣದಿಂದ ಈ ಗ್ರಂಥಾಲಯವು ವಿದ್ಯಾಭ್ಯಾಸಕ್ಕೆ ಸಹಾಯಕವಾಗುವ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಧ್ಯತೆ ಇದೆ.</p>.<p>ಜನರ ಹಣದಿಂದ ನಿರ್ಮಿಸಲಾದ ಈ ಗ್ರಂಥಾಲಯವು ಶೀಘ್ರದಲ್ಲೇ ಓದುಗರ ಸೇವೆಗೆ ಲಭ್ಯವಾಗಬೇಕು ಎಂಬುದು ಸ್ಥಳೀಯರ ಆಸೆ. ನಿರ್ವಹಣಾ ಕ್ರಮಗಳು ಪೂರ್ಣಗೊಂಡು ಗ್ರಂಥಾಲಯ ಚಟುವಟಿಕೆ ಆರಂಭವಾದರೆ, ಇದು ಹನುಮಸಾಗರದ ವಿದ್ಯಾರ್ಥಿ ಸಮುದಾಯಕ್ಕೆ ಜ್ಞಾನಕೇಂದ್ರವಾಗಿ ಮಾರ್ಪಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.</p>.<p> ಗ್ರಂಥಪಾಲಕರ ಕೊರತೆ, ನಿರ್ಲಕ್ಷ್ಯ ಶೀಘ್ರ ಕಾರ್ಯಾರಂಭ, ಸಾರ್ವಜನಿಕ ಬಳಕೆಗೆ ಬೇಡಿಕೆ</p>.<div><blockquote>ಗ್ರಂಥಪಾಲಕರ ನೇಮಕಾತಿ ಪ್ರಕ್ರಿಯೆ ಇದೀಗ ತಾನೇ ಮುಕ್ತಾಯವಾಗಿದೆ. ಅಂತಿಮ ಪಟ್ಟಿ ಸಲ್ಲಿಸಿದ ನಂತರ ಸಾರ್ವಜನಿಕ ಗ್ರಂಥಾಲಯವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು</blockquote><span class="attribution"> ನಿಂಗಪ್ಪ ಮೂಲಿಮನಿ ಹನುಮಸಾಗರ ಪಿಡಿಒ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ</strong>: ಆರು ವರ್ಷಗಳ ಹಿಂದೆ ಕೆಕೆಆರ್ಡಿಬಿ ಅನುದಾನದಲ್ಲಿ ನಿರ್ಮಿಸಲಾದ ಇಲ್ಲಿಯ 14ನೇ ವಾರ್ಡಿನ ಸಾರ್ವಜನಿಕ ಗ್ರಂಥಾಲಯ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ.</p>.<p>2017–18ನೇ ಸಾಲಿನಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಗ್ರಂಥಾಲಯವು ಇಂದಿಗೂ ಬಾಗಿಲು ತೆರೆದೆ ನಿಂತಿದೆ.</p>.<p>ಕಟ್ಟಡದಲ್ಲಿ ಪುಸ್ತಕಗಳನ್ನು ಸರಿಯಾಗಿ ಸಂರಕ್ಷಿಸಿಲ್ಲ. ಗ್ರಂಥಾಲಯದ ಒಳಾಂಗಣವೂ ನಿರಂತರ ಬಳಕೆಯ ಕೊರತೆಯಿಂದ ಅಸಮರ್ಪಕ ಸ್ಥಿತಿಯಲ್ಲಿದೆ. </p>.<p>ಈ ಗ್ರಂಥಾಲಯದಿಂದ ಕೇವಲ 300 ಮೀಟರ್ ಅಂತರದಲ್ಲೇ ಸರ್ಕಾರಿ ಹರಿಜನವಾಡ ಶಾಲೆ ಇದೆ. ಆ ಶಾಲೆಯ ವಿದ್ಯಾರ್ಥಿಗಳಿಗೆ ಈ ಗ್ರಂಥಾಲಯದಿಂದ ಶೈಕ್ಷಣಿಕ ಸಹಾಯ ದೊರೆಯಬಹುದಾಗಿತ್ತು. ಆದರೆ ಗ್ರಂಥಪಾಲಕರ ನೇಮಕಾತಿ ಪೂರ್ಣಗೊಳ್ಳದಿರುವುದರಿಂದ ಇದರ ಉಪಯೋಗ ಸ್ಥಳೀಯರಿಗೆ ಸಿಗದಂತಾಗಿದೆ.</p>.<p>14ನೇ ವಾರ್ಡಿನ ಜನರಲ್ಲಿ ಬಹುತೇಕರು ವಿದ್ಯಾವಂತರಾಗಿದ್ದು, ಓದಿಗೆ ಹೆಚ್ಚಿನ ಪ್ರೋತ್ಸಾಹ ನೀಡುವವರು. ಈ ಪ್ರದೇಶದಲ್ಲೇ ಸಾರ್ವಜನಿಕ ಗ್ರಂಥಾಲಯ ಒಂದೇ ಇದ್ದು, ಅದರ ಸಮೀಪದಲ್ಲೇ ವಿದ್ಯಾರ್ಥಿಗಳ ವಸತಿ ನಿಲಯವೂ ಇದೆ. ಈ ಕಾರಣದಿಂದ ಈ ಗ್ರಂಥಾಲಯವು ವಿದ್ಯಾಭ್ಯಾಸಕ್ಕೆ ಸಹಾಯಕವಾಗುವ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಧ್ಯತೆ ಇದೆ.</p>.<p>ಜನರ ಹಣದಿಂದ ನಿರ್ಮಿಸಲಾದ ಈ ಗ್ರಂಥಾಲಯವು ಶೀಘ್ರದಲ್ಲೇ ಓದುಗರ ಸೇವೆಗೆ ಲಭ್ಯವಾಗಬೇಕು ಎಂಬುದು ಸ್ಥಳೀಯರ ಆಸೆ. ನಿರ್ವಹಣಾ ಕ್ರಮಗಳು ಪೂರ್ಣಗೊಂಡು ಗ್ರಂಥಾಲಯ ಚಟುವಟಿಕೆ ಆರಂಭವಾದರೆ, ಇದು ಹನುಮಸಾಗರದ ವಿದ್ಯಾರ್ಥಿ ಸಮುದಾಯಕ್ಕೆ ಜ್ಞಾನಕೇಂದ್ರವಾಗಿ ಮಾರ್ಪಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.</p>.<p> ಗ್ರಂಥಪಾಲಕರ ಕೊರತೆ, ನಿರ್ಲಕ್ಷ್ಯ ಶೀಘ್ರ ಕಾರ್ಯಾರಂಭ, ಸಾರ್ವಜನಿಕ ಬಳಕೆಗೆ ಬೇಡಿಕೆ</p>.<div><blockquote>ಗ್ರಂಥಪಾಲಕರ ನೇಮಕಾತಿ ಪ್ರಕ್ರಿಯೆ ಇದೀಗ ತಾನೇ ಮುಕ್ತಾಯವಾಗಿದೆ. ಅಂತಿಮ ಪಟ್ಟಿ ಸಲ್ಲಿಸಿದ ನಂತರ ಸಾರ್ವಜನಿಕ ಗ್ರಂಥಾಲಯವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು</blockquote><span class="attribution"> ನಿಂಗಪ್ಪ ಮೂಲಿಮನಿ ಹನುಮಸಾಗರ ಪಿಡಿಒ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>