‘ಹತ್ತಾರು ಬಾರಿ ಕ್ರಿಮಿನಾಶಕ ಸಿಂಪಡಣೆ, ಕಳೆ, ಬೀಜ, ಗೊಬ್ಬರ ಎಂದು ಎಕರೆಗೆ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ಅಕಾಲಿಕ ಮಳೆಯಿಂದ ನಷ್ಟ ಉಂಟಾಗಿದೆ. ಈಗ ಖರ್ಚೂ ಸಿಗುವುದೂ ಅನುಮಾನ. ಸಾಲ ಮೈಮೆಲೆ ಬಂದಿದೆ’ ಎಂದು ರೈತರಾದ ರಮೇಶ ಬಡಿಗೇರ, ಶಿವಪ್ಪ ಕಬ್ಬರಗಿ ಹಾಗೂ ಹನುಮಂತ ಗೌಡ್ರ ಅಸಹಾಯಕತೆ ವ್ಯಕ್ತಪಡಿಸಿದರು.