<p><strong>ಕೊಪ್ಪಳ: </strong>ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಹೇಮರಡ್ಡಿ ಮಲ್ಲಮ್ಮಅವರ ಭಾವಚಿತ್ರಕ್ಕೆ ಸೋಮವಾರ ಪುಷ್ಪ ನಮನ ಸಲ್ಲಿಸಲಾಯಿತು.</p>.<p>ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.</p>.<p>ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮುಂತಾದವರು ಇದ್ದರು.</p>.<p class="Briefhead"><strong>‘ಮಹಿಳೆಯರಿಗೆ ಸ್ಫೂರ್ತಿ’</strong></p>.<p><strong>ಕನಕಗಿರಿ: </strong>ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ಸೋಮವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.</p>.<p>ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರವೀಂದ್ರ ಸಜ್ಜನ್ ಮಾತನಾಡಿ,‘ಹೇಮರಡ್ಡಿ ಮಲ್ಲಮ್ಮನವರು ಶೋಷಣೆಗೆ ಒಳಗಾಗಿದ್ದರು. ತಾಳ್ಮೆ ಹಾಗೂ ಭಕ್ತಿಯಿಂದ ಇಡೀ ಕುಟುಂಬ ನಡೆಸಿ ಮಹಿಳೆಯರ ಕಣ್ಮಣಿಯಾಗಿದ್ದರು’ ಎಂದರು.</p>.<p>ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ಹುಲಗಪ್ಪ ವಾಲೇಕಾರ, ಸುಭಾಸ ಕಂದಕೂರು, ಪ್ರಮುಖರಾದ ಇಬ್ರಾಯಿಂಸಾಬ ಹಾಗೂ ಪ್ರಕಾಶ ಹಾದಿಮನಿ ಇದ್ದರು.</p>.<p>ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವಿ ಅಂಗಡಿ ಮಾತನಾಡಿ,‘ಸಮಾಜಕ್ಕೆ ಮೌಲ್ಯಗಳನ್ನು ಬೋಧಿಸಿದ ಸಂತರು, ಶರಣರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು’ ಎಂದು ತಿಳಿಸಿದರು.</p>.<p>ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಸಜ್ಜನ್, ಸದಸ್ಯ ಶರಣಬಸಪ್ಪ ಭತ್ತದ ಅವರು ಮಾತನಾಡಿದರು.</p>.<p>ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ಖಾಜಾಸಾಬ ಗುರಿಕಾರ ಹಾಗೂ ಇತರರು ಇದ್ದರು.</p>.<p>ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಿರ್ದೇಶಕರಾದ ಶೇಖರಪ್ಪ ಭಾವಿಕಟ್ಟಿ, ಸಗರಪ್ಪ ಕಂಪ್ಲಿ, ಸಿಬ್ಬಂದಿ ಮಂಜುನಾಥರೆಡ್ಡಿ ಎಚ್ ಮಾದಿನಾಳ, ಶಕ್ಷಾವಲಿ ಬಿಳಿಕುದುರಿ ಹಾಗೂ ವೀರೇಶ ಇದ್ದರು.</p>.<p>ಸಮೀಪದ ನವಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಗ್ರಾ.ಪಂ. ಸದಸ್ಯ ಕಾಡನಗೌಡ, ಪ್ರಮುಖರಾದ ಮಲ್ಲಿಕಾರ್ಜುನ ಬಳಗಾನೂರು ಹಾಗೂ ನಿಂಗಪ್ಪ ನಾಯಕ ಇದ್ದರು.</p>.<p class="Briefhead"><strong>‘ಆದರ್ಶ ಪಾಲಿಸಿ’</strong></p>.<p><strong>ತಾವರಗೇರಾ:</strong> ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳು ಸೇರಿ ವಿವಿಧೆಡೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.</p>.<p>ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಿಕ್ರಮ್ ರಾಯ್ಕರ್ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.</p>.<p>ಸಿಬ್ಬಂದಿ ಶ್ಯಾಮೂರ್ತಿ ಕಟ್ಟಮನಿ, ಮರೇಶ ನಾಯಕ ಸೇರಿ ಸಿಬ್ಬಂದಿ ಇದ್ದರು.</p>.<p>ನಾಡ ಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಸೂರ್ಯಕಾಂತ ನಾಯಕ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.</p>.<p>ಸಿಬ್ಬಂದಿ ಫಾರೂಕ್ ನಾಡಗೌಡ್ರು, ಮಹಾದೇವ ಪೂಜಾರ ಹಾಗೂ ಇತರರು ಇದ್ದರು.</p>.<p class="Briefhead"><strong>‘ತಾಳ್ಮೆ, ಸಹನೆಯ ಮಾದರಿ’</strong></p>.<p><strong>ಕಾರಟಗಿ: </strong>ಪಟ್ಟಣದ ಪುರಸಭೆ ಕಚೇರಿಯಲ್ಲಿ ಸೋಮವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.</p>.<p>ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಮರಡ್ಡಿ ಮಲ್ಲಮ್ಮ ಅವರ ಜೀವನದ ಕುರಿತು ಮಾತನಾಡಿದರು.</p>.<p>ಪ್ರಮುಖರಾದ ಜಿ. ತಿಮ್ಮನಗೌಡ, ರವಿರಾಜ್ ಪಾಟೀಲ, ರಾಮರಾವ್ ಧರ್ಮಳ, ಜೆ. ಮಂಜುನಾಥ, ಈ. ನಾಗರಾಜ, ಆದೆಪ್ಪ, ಸಿಬ್ಬಂದಿ ರಾಘವೇಂದ್ರ, ಸುಮಾ ಕಂಚಿ, ಅಕ್ಷತ ಬಿ. ಕಮ್ಮಾರ, ಅನಂತರಾವ್, ಪುಷ್ಪಾವತಿ, ಆನಂದ, ಖಾದರ್ ಬಾಷಾ ಹಾಗೂ ಪೌರ ಕಾರ್ಮಿಕರು ಇದ್ದರು.</p>.<p>ಶಾಸಕರ ಕಚೇರಿ: ಬಿಜೆಪಿ ಪದಾಧಿಕಾರಿಗಳು ಶಾಸಕರ ಕಚೇರಿಯಲ್ಲಿ ಜಯಂತಿ ಆಚರಿಸಿದರು.</p>.<p>ಕಾರಟಗಿ ಶಕ್ತಿ ಕೇಂದ್ರದ ಅಧ್ಯಕ್ಷ ಶರಣಪ್ಪ ಗದ್ದಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಸ್ಕಿ ಮಾತನಾಡಿ,‘ಹೇಮರಡ್ಡಿ ಮಲ್ಲಮ್ಮ ತಾಳ್ಮೆ, ಸಹನೆಯ ಮಾದರಿಯಾಗಿದ್ದರು. ಸಾವಿರಾರು ಸಮಸ್ಯೆಗಳನ್ನು ಎದುರಿಸಿ ಬದುಕುವುದೇ ನಿಜವಾದ ಜೀವನ ಎಂದು ತೋರಿಸಿಕೊಟ್ಟಿದ್ದರು’ ಎಂದು ಬಣ್ಣಿಸಿದರು.</p>.<p>ಬಿಜೆಪಿ ಮಾಧ್ಯಮ ಸಂಚಾಲಕ ರಾಜುಗೌಡ, ಸಹ ಸಂಚಾಲಕರಾದ ಬಿ. ಮಂಜುನಾಥ, ಪ್ರಮುಖರಾದ ಬಸವರಾಜ ಅಂಗಡಿ, ರಾಜಶೇಖರ, ಸಿದ್ದಪ್ಪ ಹಾಲಸಮುದ್ರ, ಶಿವಾನಂದ ಹಾಗೂ ಮಂಜುನಾಥ ನಾಯಕ ಇದ್ದರು.</p>.<p>ವೃತ್ತದ ನಾಮಫಲಕಕ್ಕೆ ಪೂಜೆ: ಇಲ್ಲಿನ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಮಲ್ಲಮ್ಮರ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು. ರೆಡ್ಡಿ ಸಮಾಜದ ಅನೇಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಹೇಮರಡ್ಡಿ ಮಲ್ಲಮ್ಮಅವರ ಭಾವಚಿತ್ರಕ್ಕೆ ಸೋಮವಾರ ಪುಷ್ಪ ನಮನ ಸಲ್ಲಿಸಲಾಯಿತು.</p>.<p>ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.</p>.<p>ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮುಂತಾದವರು ಇದ್ದರು.</p>.<p class="Briefhead"><strong>‘ಮಹಿಳೆಯರಿಗೆ ಸ್ಫೂರ್ತಿ’</strong></p>.<p><strong>ಕನಕಗಿರಿ: </strong>ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ಸೋಮವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.</p>.<p>ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರವೀಂದ್ರ ಸಜ್ಜನ್ ಮಾತನಾಡಿ,‘ಹೇಮರಡ್ಡಿ ಮಲ್ಲಮ್ಮನವರು ಶೋಷಣೆಗೆ ಒಳಗಾಗಿದ್ದರು. ತಾಳ್ಮೆ ಹಾಗೂ ಭಕ್ತಿಯಿಂದ ಇಡೀ ಕುಟುಂಬ ನಡೆಸಿ ಮಹಿಳೆಯರ ಕಣ್ಮಣಿಯಾಗಿದ್ದರು’ ಎಂದರು.</p>.<p>ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ಹುಲಗಪ್ಪ ವಾಲೇಕಾರ, ಸುಭಾಸ ಕಂದಕೂರು, ಪ್ರಮುಖರಾದ ಇಬ್ರಾಯಿಂಸಾಬ ಹಾಗೂ ಪ್ರಕಾಶ ಹಾದಿಮನಿ ಇದ್ದರು.</p>.<p>ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವಿ ಅಂಗಡಿ ಮಾತನಾಡಿ,‘ಸಮಾಜಕ್ಕೆ ಮೌಲ್ಯಗಳನ್ನು ಬೋಧಿಸಿದ ಸಂತರು, ಶರಣರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು’ ಎಂದು ತಿಳಿಸಿದರು.</p>.<p>ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಸಜ್ಜನ್, ಸದಸ್ಯ ಶರಣಬಸಪ್ಪ ಭತ್ತದ ಅವರು ಮಾತನಾಡಿದರು.</p>.<p>ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ಖಾಜಾಸಾಬ ಗುರಿಕಾರ ಹಾಗೂ ಇತರರು ಇದ್ದರು.</p>.<p>ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಿರ್ದೇಶಕರಾದ ಶೇಖರಪ್ಪ ಭಾವಿಕಟ್ಟಿ, ಸಗರಪ್ಪ ಕಂಪ್ಲಿ, ಸಿಬ್ಬಂದಿ ಮಂಜುನಾಥರೆಡ್ಡಿ ಎಚ್ ಮಾದಿನಾಳ, ಶಕ್ಷಾವಲಿ ಬಿಳಿಕುದುರಿ ಹಾಗೂ ವೀರೇಶ ಇದ್ದರು.</p>.<p>ಸಮೀಪದ ನವಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಗ್ರಾ.ಪಂ. ಸದಸ್ಯ ಕಾಡನಗೌಡ, ಪ್ರಮುಖರಾದ ಮಲ್ಲಿಕಾರ್ಜುನ ಬಳಗಾನೂರು ಹಾಗೂ ನಿಂಗಪ್ಪ ನಾಯಕ ಇದ್ದರು.</p>.<p class="Briefhead"><strong>‘ಆದರ್ಶ ಪಾಲಿಸಿ’</strong></p>.<p><strong>ತಾವರಗೇರಾ:</strong> ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳು ಸೇರಿ ವಿವಿಧೆಡೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.</p>.<p>ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಿಕ್ರಮ್ ರಾಯ್ಕರ್ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.</p>.<p>ಸಿಬ್ಬಂದಿ ಶ್ಯಾಮೂರ್ತಿ ಕಟ್ಟಮನಿ, ಮರೇಶ ನಾಯಕ ಸೇರಿ ಸಿಬ್ಬಂದಿ ಇದ್ದರು.</p>.<p>ನಾಡ ಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿ ಸೂರ್ಯಕಾಂತ ನಾಯಕ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.</p>.<p>ಸಿಬ್ಬಂದಿ ಫಾರೂಕ್ ನಾಡಗೌಡ್ರು, ಮಹಾದೇವ ಪೂಜಾರ ಹಾಗೂ ಇತರರು ಇದ್ದರು.</p>.<p class="Briefhead"><strong>‘ತಾಳ್ಮೆ, ಸಹನೆಯ ಮಾದರಿ’</strong></p>.<p><strong>ಕಾರಟಗಿ: </strong>ಪಟ್ಟಣದ ಪುರಸಭೆ ಕಚೇರಿಯಲ್ಲಿ ಸೋಮವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.</p>.<p>ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಮರಡ್ಡಿ ಮಲ್ಲಮ್ಮ ಅವರ ಜೀವನದ ಕುರಿತು ಮಾತನಾಡಿದರು.</p>.<p>ಪ್ರಮುಖರಾದ ಜಿ. ತಿಮ್ಮನಗೌಡ, ರವಿರಾಜ್ ಪಾಟೀಲ, ರಾಮರಾವ್ ಧರ್ಮಳ, ಜೆ. ಮಂಜುನಾಥ, ಈ. ನಾಗರಾಜ, ಆದೆಪ್ಪ, ಸಿಬ್ಬಂದಿ ರಾಘವೇಂದ್ರ, ಸುಮಾ ಕಂಚಿ, ಅಕ್ಷತ ಬಿ. ಕಮ್ಮಾರ, ಅನಂತರಾವ್, ಪುಷ್ಪಾವತಿ, ಆನಂದ, ಖಾದರ್ ಬಾಷಾ ಹಾಗೂ ಪೌರ ಕಾರ್ಮಿಕರು ಇದ್ದರು.</p>.<p>ಶಾಸಕರ ಕಚೇರಿ: ಬಿಜೆಪಿ ಪದಾಧಿಕಾರಿಗಳು ಶಾಸಕರ ಕಚೇರಿಯಲ್ಲಿ ಜಯಂತಿ ಆಚರಿಸಿದರು.</p>.<p>ಕಾರಟಗಿ ಶಕ್ತಿ ಕೇಂದ್ರದ ಅಧ್ಯಕ್ಷ ಶರಣಪ್ಪ ಗದ್ದಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಸ್ಕಿ ಮಾತನಾಡಿ,‘ಹೇಮರಡ್ಡಿ ಮಲ್ಲಮ್ಮ ತಾಳ್ಮೆ, ಸಹನೆಯ ಮಾದರಿಯಾಗಿದ್ದರು. ಸಾವಿರಾರು ಸಮಸ್ಯೆಗಳನ್ನು ಎದುರಿಸಿ ಬದುಕುವುದೇ ನಿಜವಾದ ಜೀವನ ಎಂದು ತೋರಿಸಿಕೊಟ್ಟಿದ್ದರು’ ಎಂದು ಬಣ್ಣಿಸಿದರು.</p>.<p>ಬಿಜೆಪಿ ಮಾಧ್ಯಮ ಸಂಚಾಲಕ ರಾಜುಗೌಡ, ಸಹ ಸಂಚಾಲಕರಾದ ಬಿ. ಮಂಜುನಾಥ, ಪ್ರಮುಖರಾದ ಬಸವರಾಜ ಅಂಗಡಿ, ರಾಜಶೇಖರ, ಸಿದ್ದಪ್ಪ ಹಾಲಸಮುದ್ರ, ಶಿವಾನಂದ ಹಾಗೂ ಮಂಜುನಾಥ ನಾಯಕ ಇದ್ದರು.</p>.<p>ವೃತ್ತದ ನಾಮಫಲಕಕ್ಕೆ ಪೂಜೆ: ಇಲ್ಲಿನ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಮಲ್ಲಮ್ಮರ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು. ರೆಡ್ಡಿ ಸಮಾಜದ ಅನೇಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>