<p><strong>ಗಂಗಾವತಿ</strong>: ಇಲ್ಲಿನ ಹಿರೇಬೆಣಕಲ್ ಸಮೀಪದ ಪ್ರಾಗೈತಿಹಾಸಿಕ ನೆಲೆಯಾದ ಮೊರೆರ ಬೆಟ್ಟಕ್ಕೆ ಭಾನುವಾರ ನಾಗಪುರದ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಪ್ರಾಗೈತಿಹಾಸಿಕ ಮತ್ತು ಗವಿಚಿತ್ರಗಳ ಅಧ್ಯಯನ ವಿಭಾಗದ ಅಧಿಕಾರಿಗಳ ತಂಡ ಭೇಟಿ ನೀಡಿತು.</p>.<p>ಪುರಾತತ್ತ್ವ ಅಧಿಕ್ಷಕ ರಮೇಶ ಮೂಲಿಮನಿ, ಸಿಬ್ಬಂದಿ ಡಾ. ಕಿಶೋರ್ ಸೋಲಾಪುರಕರ್, ಮಾನವೇಂದ್ರ, ಕಪೀಲ್ ಚುಟೋಲೆ, ಮುರುಳಿಧರರಾವ್ ಕಡಾವ್ ಅವರನ್ನು ಒಳಗೊಂಡ ತಂಡ ಸ್ಥಳೀಯ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅವರ ಸಹಯೋಗದಲ್ಲಿ ಮೊರೆರ ಬೆಟ್ಟಕ್ಕೆ ಭೇಟಿ ನೀಡಿ, ಆ ನೆಲೆಯ ಸಮಾಧಿ, ಗವಿಚಿತ್ರಗಳ ಬಗ್ಗೆ ಅಧ್ಯಯನ ನಡೆಸಿದರು.</p>.<p>ನಂತರ ಪುರಾತತ್ತ್ವ ಅಧಿಕ್ಷಕ ರಮೇಶ ಮೂಲಿಮನಿ ಮಾತನಾಡಿ, ಹಿರೇಬೆಣಕಲ್ ನಮ್ಮ ದೇಶದ ಅತ್ಯಂತ ಮಹತ್ವ ಪ್ರಾಗೈತಿಹಾಸದ ನೆಲೆ. ಇಲ್ಲಿ ಆದಿಮಾನವನ ಜೀವನ, ಸಂಸ್ಕ್ರತಿ, ವಸತಿನೆಲೆ ಸೇರಿದಂತೆ ವಿವಿಧ ರೀತಿಯ ಸಮಾಧಿ, ಗವಿಚಿತ್ರಗಳನ್ನ ಒಳಗೊಂಡ ಮಹತ್ವದ ಪುರಾವೆಗಳ ತಾಣವಾಗಿದೆ.</p>.<p>ಇಲ್ಲಿರುವಷ್ಟು ವೈವಿಧ್ಯಮಯ ಶಿಲಾಸಮಾಧಿಗಳು ದೇಶದ ಬೇರಡೆ ಎಲ್ಲಿಯೂ ಇಲ್ಲ. ಇಂಥ ಇತಿಹಾಸವುಳ್ಳ ಸ್ಥಳ ಅವನತಿಯತ್ತ ಸಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದರ ರಕ್ಷಣೆ ಮತ್ತು ಅಭಿವೃದ್ಧಿ ತುಂಬಾ ಅಗತ್ಯವಿದ್ದು, ಇದರ ವಸ್ತುಸ್ಥಿತಿ ಕುರಿತು ಇಲಾಖೆಗೆ ವರದಿ ಸಲ್ಲಿಸಿ ಈ ಸ್ಥಳವನ್ನು ಪ್ರವಾಸಿ ಕೇಂದ್ರವಾಗಿಸುವಂತೆ ಶ್ರಮಿಸಲಾಗುತ್ತದೆ ಎಂದರು.</p>.<p>ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅವರು ಹಿರೇಬೆಣಕಲ್ ನೆಲೆಯ ಬಗ್ಗೆ ತಂಡಕ್ಕೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮಂಜುನಾಥ ಗುಡ್ಲಾನೂರ, ಹಿರೇಬೆಣಕಲ್ ಗ್ರಾಮದ ವಿರೇಶ ಅಂಗಡಿ, ನೆಲೆಯ ರಕ್ಷಕರಾದ ಪಂಪಾಪತಿ, ವೀರಭದ್ರಪ್ಪ, ನಾಗರಾಜ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ಇಲ್ಲಿನ ಹಿರೇಬೆಣಕಲ್ ಸಮೀಪದ ಪ್ರಾಗೈತಿಹಾಸಿಕ ನೆಲೆಯಾದ ಮೊರೆರ ಬೆಟ್ಟಕ್ಕೆ ಭಾನುವಾರ ನಾಗಪುರದ ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಪ್ರಾಗೈತಿಹಾಸಿಕ ಮತ್ತು ಗವಿಚಿತ್ರಗಳ ಅಧ್ಯಯನ ವಿಭಾಗದ ಅಧಿಕಾರಿಗಳ ತಂಡ ಭೇಟಿ ನೀಡಿತು.</p>.<p>ಪುರಾತತ್ತ್ವ ಅಧಿಕ್ಷಕ ರಮೇಶ ಮೂಲಿಮನಿ, ಸಿಬ್ಬಂದಿ ಡಾ. ಕಿಶೋರ್ ಸೋಲಾಪುರಕರ್, ಮಾನವೇಂದ್ರ, ಕಪೀಲ್ ಚುಟೋಲೆ, ಮುರುಳಿಧರರಾವ್ ಕಡಾವ್ ಅವರನ್ನು ಒಳಗೊಂಡ ತಂಡ ಸ್ಥಳೀಯ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅವರ ಸಹಯೋಗದಲ್ಲಿ ಮೊರೆರ ಬೆಟ್ಟಕ್ಕೆ ಭೇಟಿ ನೀಡಿ, ಆ ನೆಲೆಯ ಸಮಾಧಿ, ಗವಿಚಿತ್ರಗಳ ಬಗ್ಗೆ ಅಧ್ಯಯನ ನಡೆಸಿದರು.</p>.<p>ನಂತರ ಪುರಾತತ್ತ್ವ ಅಧಿಕ್ಷಕ ರಮೇಶ ಮೂಲಿಮನಿ ಮಾತನಾಡಿ, ಹಿರೇಬೆಣಕಲ್ ನಮ್ಮ ದೇಶದ ಅತ್ಯಂತ ಮಹತ್ವ ಪ್ರಾಗೈತಿಹಾಸದ ನೆಲೆ. ಇಲ್ಲಿ ಆದಿಮಾನವನ ಜೀವನ, ಸಂಸ್ಕ್ರತಿ, ವಸತಿನೆಲೆ ಸೇರಿದಂತೆ ವಿವಿಧ ರೀತಿಯ ಸಮಾಧಿ, ಗವಿಚಿತ್ರಗಳನ್ನ ಒಳಗೊಂಡ ಮಹತ್ವದ ಪುರಾವೆಗಳ ತಾಣವಾಗಿದೆ.</p>.<p>ಇಲ್ಲಿರುವಷ್ಟು ವೈವಿಧ್ಯಮಯ ಶಿಲಾಸಮಾಧಿಗಳು ದೇಶದ ಬೇರಡೆ ಎಲ್ಲಿಯೂ ಇಲ್ಲ. ಇಂಥ ಇತಿಹಾಸವುಳ್ಳ ಸ್ಥಳ ಅವನತಿಯತ್ತ ಸಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದರ ರಕ್ಷಣೆ ಮತ್ತು ಅಭಿವೃದ್ಧಿ ತುಂಬಾ ಅಗತ್ಯವಿದ್ದು, ಇದರ ವಸ್ತುಸ್ಥಿತಿ ಕುರಿತು ಇಲಾಖೆಗೆ ವರದಿ ಸಲ್ಲಿಸಿ ಈ ಸ್ಥಳವನ್ನು ಪ್ರವಾಸಿ ಕೇಂದ್ರವಾಗಿಸುವಂತೆ ಶ್ರಮಿಸಲಾಗುತ್ತದೆ ಎಂದರು.</p>.<p>ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅವರು ಹಿರೇಬೆಣಕಲ್ ನೆಲೆಯ ಬಗ್ಗೆ ತಂಡಕ್ಕೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮಂಜುನಾಥ ಗುಡ್ಲಾನೂರ, ಹಿರೇಬೆಣಕಲ್ ಗ್ರಾಮದ ವಿರೇಶ ಅಂಗಡಿ, ನೆಲೆಯ ರಕ್ಷಕರಾದ ಪಂಪಾಪತಿ, ವೀರಭದ್ರಪ್ಪ, ನಾಗರಾಜ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>