<p><strong>ಕೊಪ್ಪಳ: </strong>ಮಹಾತ್ಮಾ ಗಾಂಧಿ ಕಂಡ ಪ್ರಕೃತಿ, ಕೃಷಿ ಹಾಗೂ ಗ್ರಾಮೀಣಸ್ನೇಹಿ ಅಭಿವೃದ್ಧಿ ಭಾರತಕ್ಕೆ ಅತ್ಯಗತ್ಯವಾಗಿದೆ ಎಂದು ಗಾಂಧಿ ವಿಚಾರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ಹೇಳಿದರು.</p>.<p>ಇಲ್ಲಿನ ಕಿನ್ನಾಳ ರಸ್ತೆಯ ಎನ್ಜಿಒ ಕಾಲೊನಿಯ ಸವಡಿ ನಿವಾಸದ ಆವರಣದಲ್ಲಿ ಶನಿವಾರ ನಡೆದ ಗಾಂಧಿ ವಿಚಾರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಪ್ರಕೃತಿ ಸ್ನೇಹಿಯಾಗಿ, ಕೃಷಿ ಹಾಗೂ ಗ್ರಾಮೀಣ ಭಾರತದ ಸರ್ವಾಂಗೀಣ ವಿಕಾಸವಾಗಬೇಕು ಎಂಬುದರ ಗಾಂಧೀಜಿ ಅವರ ಕಲ್ಪನೆ ಆಗಿತ್ತು. ನಾವೆಲ್ಲ ಒಂದಾಗಿ ಆ ಮಾರ್ಗದಲ್ಲಿ ಸಾಗಬೇಕಾಗಿದೆ. ಧಾರ್ಮಿಕ ಕಟ್ಟುಪಾಡುಗಳ ಹುಸಿ ಶ್ರೇಷ್ಠತೆಯ ಭ್ರಮೆಗಳನ್ನು ತೊರೆಯಬೇಕು ಎಂದರು.</p>.<p>ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಮತ–ಪಂಥಗಳು ಪರಸ್ಪರ ಪೈಪೋಟಿಗೆ ಇಳಿದಿರುವುದು ವಿಷಾದನೀಯ. ಧರ್ಮಕ್ಕೆ ಬಹಳ ವಿಶಾಲ ಅರ್ಥವಿದೆ. ಇಂದು ಅದನ್ನು ಸ್ವಾರ್ಥಕ್ಕೆ ಸೀಮಿತಗೊಳಿಸುವ ಯತ್ನಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ‘ಮತ್ತೆ ಮತ್ತೆ ಗಾಂಧಿ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.</p>.<p>ಉತ್ತರ ಕರ್ನಾಟಕ ಸಂಯೋಜಕ ನೇತಾಜಿ ಗಾಂಧಿ ಮಾತನಾಡಿ, ಗಾಂಧೀಜಿ ಎಂದರೆ ಉದ್ವೇಗ, ಪ್ರಚೋದನೆಯಲ್ಲ. ಅದೊಂದು ಮಹಾನ್ ಶಕ್ತಿ. ಗಾಂಧಿಯನ್ನು ನಮ್ಮ ಎದೆಗಳಿಗೆ ಇಳಿಸಿಕೊಳ್ಳಬೇಕು ಎಂದರು.</p>.<p>ಸುಳ್ಯದ ಜಿವಿವಿ ಅಧ್ಯಕ್ಷ ಲಕ್ಷ್ಮೀಶ ಗಬಲಡ್ಕ ವೇದಿಕೆಯಲ್ಲಿದ್ದರು. ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣಪ್ಪ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.</p>.<p>ಡಿ.ಎಂ.ಬಡಿಗೇರ, ಸಾವಿತ್ರಿ ಮುಜುಮದಾರ, ಶ್ರೀಧರಗೌಡ ಬನ್ನಿಕೊಪ್ಪ, ರಾಮಣ್ಣ ಚಲವಾದಿ, ಶ್ರೀನಿವಾಸ ಪಂಡಿತ, ವಿರೇಶ ಸವಡಿ, ನಾಗರಾಜನಾಯಕ ಡೊಳ್ಳಿನ ಸಂವಾದದಲ್ಲಿ ಭಾಗವಹಿಸಿದ್ದರು.</p>.<p>ನಿಧಿ ಚಾಮರಾಜ ಸವಡಿ ಗಾಂಧಿ ಭಜನೆ ಪ್ರಸ್ತುತಪಡಿಸಿದರು. ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ ಸವಡಿ ಪ್ರಾಸ್ತಾವಿಕ ಮಾತನಾಡಿದರು. ಬಾಲನಾಗಮ್ಮ ನಿರೂಪಿಸಿದರು. ರಾಜು ತೇರದಾಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಮಹಾತ್ಮಾ ಗಾಂಧಿ ಕಂಡ ಪ್ರಕೃತಿ, ಕೃಷಿ ಹಾಗೂ ಗ್ರಾಮೀಣಸ್ನೇಹಿ ಅಭಿವೃದ್ಧಿ ಭಾರತಕ್ಕೆ ಅತ್ಯಗತ್ಯವಾಗಿದೆ ಎಂದು ಗಾಂಧಿ ವಿಚಾರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ಹೇಳಿದರು.</p>.<p>ಇಲ್ಲಿನ ಕಿನ್ನಾಳ ರಸ್ತೆಯ ಎನ್ಜಿಒ ಕಾಲೊನಿಯ ಸವಡಿ ನಿವಾಸದ ಆವರಣದಲ್ಲಿ ಶನಿವಾರ ನಡೆದ ಗಾಂಧಿ ವಿಚಾರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಪ್ರಕೃತಿ ಸ್ನೇಹಿಯಾಗಿ, ಕೃಷಿ ಹಾಗೂ ಗ್ರಾಮೀಣ ಭಾರತದ ಸರ್ವಾಂಗೀಣ ವಿಕಾಸವಾಗಬೇಕು ಎಂಬುದರ ಗಾಂಧೀಜಿ ಅವರ ಕಲ್ಪನೆ ಆಗಿತ್ತು. ನಾವೆಲ್ಲ ಒಂದಾಗಿ ಆ ಮಾರ್ಗದಲ್ಲಿ ಸಾಗಬೇಕಾಗಿದೆ. ಧಾರ್ಮಿಕ ಕಟ್ಟುಪಾಡುಗಳ ಹುಸಿ ಶ್ರೇಷ್ಠತೆಯ ಭ್ರಮೆಗಳನ್ನು ತೊರೆಯಬೇಕು ಎಂದರು.</p>.<p>ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಮತ–ಪಂಥಗಳು ಪರಸ್ಪರ ಪೈಪೋಟಿಗೆ ಇಳಿದಿರುವುದು ವಿಷಾದನೀಯ. ಧರ್ಮಕ್ಕೆ ಬಹಳ ವಿಶಾಲ ಅರ್ಥವಿದೆ. ಇಂದು ಅದನ್ನು ಸ್ವಾರ್ಥಕ್ಕೆ ಸೀಮಿತಗೊಳಿಸುವ ಯತ್ನಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ‘ಮತ್ತೆ ಮತ್ತೆ ಗಾಂಧಿ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.</p>.<p>ಉತ್ತರ ಕರ್ನಾಟಕ ಸಂಯೋಜಕ ನೇತಾಜಿ ಗಾಂಧಿ ಮಾತನಾಡಿ, ಗಾಂಧೀಜಿ ಎಂದರೆ ಉದ್ವೇಗ, ಪ್ರಚೋದನೆಯಲ್ಲ. ಅದೊಂದು ಮಹಾನ್ ಶಕ್ತಿ. ಗಾಂಧಿಯನ್ನು ನಮ್ಮ ಎದೆಗಳಿಗೆ ಇಳಿಸಿಕೊಳ್ಳಬೇಕು ಎಂದರು.</p>.<p>ಸುಳ್ಯದ ಜಿವಿವಿ ಅಧ್ಯಕ್ಷ ಲಕ್ಷ್ಮೀಶ ಗಬಲಡ್ಕ ವೇದಿಕೆಯಲ್ಲಿದ್ದರು. ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣಪ್ಪ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.</p>.<p>ಡಿ.ಎಂ.ಬಡಿಗೇರ, ಸಾವಿತ್ರಿ ಮುಜುಮದಾರ, ಶ್ರೀಧರಗೌಡ ಬನ್ನಿಕೊಪ್ಪ, ರಾಮಣ್ಣ ಚಲವಾದಿ, ಶ್ರೀನಿವಾಸ ಪಂಡಿತ, ವಿರೇಶ ಸವಡಿ, ನಾಗರಾಜನಾಯಕ ಡೊಳ್ಳಿನ ಸಂವಾದದಲ್ಲಿ ಭಾಗವಹಿಸಿದ್ದರು.</p>.<p>ನಿಧಿ ಚಾಮರಾಜ ಸವಡಿ ಗಾಂಧಿ ಭಜನೆ ಪ್ರಸ್ತುತಪಡಿಸಿದರು. ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ ಸವಡಿ ಪ್ರಾಸ್ತಾವಿಕ ಮಾತನಾಡಿದರು. ಬಾಲನಾಗಮ್ಮ ನಿರೂಪಿಸಿದರು. ರಾಜು ತೇರದಾಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>