‘ಈಚೆಗೆ ತಾಂಡಾದ ನಿವಾಸಿಗಳು ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗಾಗಿ ರುದ್ರಭೂಮಿಯಲ್ಲಿ ಮಣ್ಣು ತೆಗೆಯುತ್ತಿರುವ ವೇಳೆ ಶಿಲ್ಪ ಪತ್ತೆಯಾಗಿತ್ತು. ಇದು ನೋಡಲು ಕೆಂಪು ಕಣ ಶಿಲೆಯ ರೂಪದಲ್ಲಿದ್ದು, ಇದರ ಮೇಲ್ಭಾಗ ಈಶ್ವರಲಿಂಗ, ಅದರ ಎರಡೂ ಬದಿ ಸೂರ್ಯ, ಚಂದ್ರರ ಬಿಂಬಗಳಿವೆ. ಶಿಲ್ಪ ಭಾಗದಲ್ಲಿ ವೀರನ ಶಿಲ್ಪ ಪ್ರಧಾನವಾಗಿದೆ.