ನವಲಿ, ಹುಲಿಹೈದರ ಹೋಬಳಿ ಪ್ರದೇಶದಲ್ಲಿ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಬಿತ್ತನೆಗಾಗಿ ಭೂಮಿ ಹದ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಮಳೆರಾಯ ಕೃಪೆ ತೋರಿದ್ದಾನೆ. ಮಳೆಯಿಂದ ಹೊಲ ಹಸಿಯಾಗಿದ್ದು ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಲು ಸಿದ್ದತೆ ಕೈಗೊಂಡಿದ್ದೇವೆ ಎಂದು ರೈತ ಕೃಷ್ಣಮೂರ್ತಿ ದಾಸರ ತಿಳಿಸಿದರು.