<p><strong>ಕನಕಗಿರಿ</strong>: ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕಡಿಮೆ ಕೂಲಿ ನೀಡಲಾಗಿದೆ ಎಂದು ಆರೋಪಿಸಿ ಹಿರೇಮಾದಿನಾಳ ಗ್ರಾಮದ ಕಾರ್ಮಿಕರು ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.</p>.<p>ಮುಖಂಡ ಹುಲಗೇಶ ನಾಯಕ ಮಾತನಾಡಿ, ‘ಚಿಕ್ಕ ಮಾದಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮಾದಿನಾಳ ಗ್ರಾಮದ ನೂರಾರು ಕೂಲಿಕಾರರು ರಾಮದುರ್ಗಾ ಗ್ರಾಮದ ಕೆರೆ ಹೂಳು ಎತ್ತುವ ಕೆಲಸವನ್ನು 14 ದಿನಗಳ ಕಾಲ ಮಾಡಿದ್ದು ಕೂಲಿಕಾರರಿಗೆ ತಲಾ ₹370 ಬದಲಾಗಿ ₹310 ಪಾವತಿ ಮಾಡಿದ್ದಾರೆ. ಇದರಿಂದ ಕೂಲಿಕಾರರಿಗೆ ಅನ್ಯಾಯವಾಗಿದೆ’ ಎಂದು ದೂರಿದರು.</p>.<p>ನರೇಗಾ ಯೋಜನೆಯಲ್ಲಿ ತಲಾ ಒಬ್ಬ ಕೂಲಿಕಾರರಿಗೆ ದಿನಕ್ಕೆ ₹370 ಕೂಲಿ ನೀಡಬೇಕು, 7 ದಿನದ ಕೂಲಿ ಹಣ ಪಾವತಿ ಮಾಡಲಾಗಿದ್ದು ಅದರಲ್ಲಿ ₹60 ಕಡಿಮೆ ಹಾಕಲಾಗಿದೆ. ₹310 ಕೂಲಿ ಹಣದಲ್ಲಿಯೇ ನಾವು ಆಟೋ ಬಾಡಿಗೆ ನೀಡಬೇಕಾಗಿದೆ’ ಎಂದು ಅಳಲು ವ್ಯಕ್ತಪಡಿಸಿದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮವ್ಬ ವಡ್ರಕಲ್ ಮಾತನಾಡಿ, ‘ತಾಂತ್ರಿಕ ದೋಷದಿಂದ ಹಣ ಪಾವತಿ ಮಾಡುವಲ್ಲಿ ಸಮಸ್ಯೆಯಾಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.</p>.<p>ನಂತರ ಕೂಲಿಕಾರರು ಪ್ರತಿಭಟನೆ ಹಿಂಪಡೆದರು.</p>.<p>ನರೇಗಾ ಕೂಲಿಕಾರ ಹನುಮಂತಪ್ಪ ಗೊಲ್ಲರ, ಮಾದಿನಾಳಪ್ಪ ಜಿನ್ನಾಪುರ, ಹೊಳೆಯಪ್ಪ ಹೊಸುರು, ಲೋಕಪ್ಪ ಗೌಡರ, ಉಮೇಶ ಬಡಿಗೇರ, ರಾಜಾಸಾಬಕೊತ್ವಾಲ, ಹನುಮಮ್ಮ ಭಾವಿಕಟ್ಟಿ, ಹನುಮಮ್ಮ ಗೊಲ್ಲರ, ಹನುಮಮ್ಮ ಹರಿಜನ ರೇಣುಕಮ್ಮ, ಆಶಾಬೀ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ</strong>: ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕಡಿಮೆ ಕೂಲಿ ನೀಡಲಾಗಿದೆ ಎಂದು ಆರೋಪಿಸಿ ಹಿರೇಮಾದಿನಾಳ ಗ್ರಾಮದ ಕಾರ್ಮಿಕರು ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.</p>.<p>ಮುಖಂಡ ಹುಲಗೇಶ ನಾಯಕ ಮಾತನಾಡಿ, ‘ಚಿಕ್ಕ ಮಾದಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮಾದಿನಾಳ ಗ್ರಾಮದ ನೂರಾರು ಕೂಲಿಕಾರರು ರಾಮದುರ್ಗಾ ಗ್ರಾಮದ ಕೆರೆ ಹೂಳು ಎತ್ತುವ ಕೆಲಸವನ್ನು 14 ದಿನಗಳ ಕಾಲ ಮಾಡಿದ್ದು ಕೂಲಿಕಾರರಿಗೆ ತಲಾ ₹370 ಬದಲಾಗಿ ₹310 ಪಾವತಿ ಮಾಡಿದ್ದಾರೆ. ಇದರಿಂದ ಕೂಲಿಕಾರರಿಗೆ ಅನ್ಯಾಯವಾಗಿದೆ’ ಎಂದು ದೂರಿದರು.</p>.<p>ನರೇಗಾ ಯೋಜನೆಯಲ್ಲಿ ತಲಾ ಒಬ್ಬ ಕೂಲಿಕಾರರಿಗೆ ದಿನಕ್ಕೆ ₹370 ಕೂಲಿ ನೀಡಬೇಕು, 7 ದಿನದ ಕೂಲಿ ಹಣ ಪಾವತಿ ಮಾಡಲಾಗಿದ್ದು ಅದರಲ್ಲಿ ₹60 ಕಡಿಮೆ ಹಾಕಲಾಗಿದೆ. ₹310 ಕೂಲಿ ಹಣದಲ್ಲಿಯೇ ನಾವು ಆಟೋ ಬಾಡಿಗೆ ನೀಡಬೇಕಾಗಿದೆ’ ಎಂದು ಅಳಲು ವ್ಯಕ್ತಪಡಿಸಿದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮವ್ಬ ವಡ್ರಕಲ್ ಮಾತನಾಡಿ, ‘ತಾಂತ್ರಿಕ ದೋಷದಿಂದ ಹಣ ಪಾವತಿ ಮಾಡುವಲ್ಲಿ ಸಮಸ್ಯೆಯಾಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.</p>.<p>ನಂತರ ಕೂಲಿಕಾರರು ಪ್ರತಿಭಟನೆ ಹಿಂಪಡೆದರು.</p>.<p>ನರೇಗಾ ಕೂಲಿಕಾರ ಹನುಮಂತಪ್ಪ ಗೊಲ್ಲರ, ಮಾದಿನಾಳಪ್ಪ ಜಿನ್ನಾಪುರ, ಹೊಳೆಯಪ್ಪ ಹೊಸುರು, ಲೋಕಪ್ಪ ಗೌಡರ, ಉಮೇಶ ಬಡಿಗೇರ, ರಾಜಾಸಾಬಕೊತ್ವಾಲ, ಹನುಮಮ್ಮ ಭಾವಿಕಟ್ಟಿ, ಹನುಮಮ್ಮ ಗೊಲ್ಲರ, ಹನುಮಮ್ಮ ಹರಿಜನ ರೇಣುಕಮ್ಮ, ಆಶಾಬೀ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>