‘ಪನ್ನಾಪುರದಲ್ಲಿ ಕುಂಬಾರಿಕೆಯನ್ನೇ ಆಶ್ರಯಿಸಿದ ಅನೇಕ ಕುಟುಂಬಗಳಿವೆ. ನಮ್ಮ ಕುಟುಂಬದವರೂ ತಲೆಮಾರುಗಳಿಂದ ಕುಲಕಸಬನ್ನು ಮುಂದುವರಿಸಿದ್ದೇವೆ. ಹಿಂದಿನಂತೆ ಕುಂಬಾರಿಕೆ ಸಲೀಸಾಗಿಲ್ಲ. ಮಣ್ಣು ಮೊದಲು ನಮ್ಮ ಭಾಗದಲ್ಲೇ ಸಿಗುತ್ತಿತ್ತು. ಈಗ ಸಿಂಧನೂರ ತಾಲ್ಲೂಕು ಸಾಲಗುಂದಾ, ಸಹಿತ ವಿವಿಧೆಡೆಯಿಂದ ಟ್ರ್ಯಾಕ್ಟರ್ಗಳಲ್ಲಿ ಹಣ ನೀಡಿ, ಕೂಲಿ ಪಾವತಿಸಿ ತರಬೇಕಿದೆ. ಮನೆಯವರೇ ಮಣ್ಣಿನ ವಸ್ತುಗಳನ್ನು ಸಿದ್ದಪಡಿಸುತ್ತೇವೆ. ಪಟ್ಟಣದ ವಾರದ ಸಂತೆಯಾದ ಬುಧವಾರ ಕಡ್ಡಾಯವಾಗಿ ಬಯಲಿಗಿಟ್ಟು ವ್ಯಾಪಾರ ಮಾಡುತ್ತೇವೆ. ಉಳಿದ ದಿನಗಳಲ್ಲಿ ಮಾರಾಟದ ಭರಾಟೆ ಕಡಿಮೆ ಇರುತ್ತದೆ’ ಎಂದು ಪಟ್ಟಣದ ದಲಾಲಿ ಬಜಾರ್ನ ತಿರುವಿನ ಬಳಿ ವಿವಿಧ ಆಕಾರಗಳ ಮಣ್ಣಿನ ವಸ್ತುಗಳನ್ನು ಮಾರಾಟ ಮಾಡುವ ತಾಲ್ಲೂಕಿನ ಪನ್ನಾಪುರ ಗ್ರಾಮದ ಶರಣಪ್ಪ ವೀರೇಶಪ್ಪ ಕುಂಬಾರ ತಿಳಿಸಿದರು.