<p><strong>ಕಾರಟಗಿ</strong>: ಹೋಟೇಲ್ನ ಗ್ಯಾಸ್ ಸಿಲಿಂಡರ್ ಹಾಗೂ ನಗದು ದೋಚಿ, ದಾರಿ ಮಧ್ಯೆ ಬಂದು ಪ್ರಶ್ನಿಸಿದ ಮಾಲೀಕರಿಗೆ ಬೆದರಿಕೆ ಹಾಕಿ, ಜೀವ ತಗೆಯುವ ಬೆದರಿಕೆ ಹಾಕಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಕಾರಟಗಿ ಪೊಲೀಸರು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ. </p>.<p>ಪಟ್ಟಣದ ಮೊಹ್ಮದ ಹುಸೇನ್, ಸಂತೋಷ ಬಂಧಿತರು. ಆರೋಪಿಗಳು ಇಲ್ಲಿನ ಬ್ರಹ್ಮಲಿಂಗೇಶ್ವರ ಹೋಟೇಲ್ನಲ್ಲಿ ಗ್ಯಾಸ್ ಸಿಲಿಂಡರ್ ಹಾಗೂ ₹2ಸಾವಿರ ನಗದು ದೋಚಿ ಬಸ್ ನಿಲ್ದಾಣ ಬಳಿ ನಿಂತಿದ್ದರು. ಸುಳಿವು ಹಿಡಿದ ಮಾಲೀಕ ಮಾರುತಿ ಬೇನಳ್ಳಿ ಬೆನ್ನತ್ತಿ ಪ್ರಶ್ನಿಸಿದರು. ಮಾಲೀಕರಿಗೆ ಕೈಯಿಂದ ದಬ್ಬಿ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಬಲೆ ಬೀಸಿದ ಪೋಲೀಸರು ಇಬ್ಬರನ್ನೂ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು.</p>.<p>ಹಿಂದೆ ಕಳ್ಳತನ: ಆರೋಪಿತರು ಹಿಂದೆ ಕಳ್ಳತನ ಮಾಡಿ ರೈಲ್ವೆ ನಿಲ್ದಾಣ ಬಳಿ ಗೋದಾಮು ಹಿಂದೆ ಇಟ್ಟಿದ್ದ 10 ಗ್ಯಾಸ್ ಸಿಲಿಂಡರ್ ಹಾಗೂ 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಹೋಟೇಲ್ ಮಾಲೀಕ ಮಾರುತಿ ಬೇನಳ್ಳಿ ನೀಡಿದ ದೂರಿನನ್ವಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಕಾಮಣ್ಣ ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ</strong>: ಹೋಟೇಲ್ನ ಗ್ಯಾಸ್ ಸಿಲಿಂಡರ್ ಹಾಗೂ ನಗದು ದೋಚಿ, ದಾರಿ ಮಧ್ಯೆ ಬಂದು ಪ್ರಶ್ನಿಸಿದ ಮಾಲೀಕರಿಗೆ ಬೆದರಿಕೆ ಹಾಕಿ, ಜೀವ ತಗೆಯುವ ಬೆದರಿಕೆ ಹಾಕಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಕಾರಟಗಿ ಪೊಲೀಸರು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ. </p>.<p>ಪಟ್ಟಣದ ಮೊಹ್ಮದ ಹುಸೇನ್, ಸಂತೋಷ ಬಂಧಿತರು. ಆರೋಪಿಗಳು ಇಲ್ಲಿನ ಬ್ರಹ್ಮಲಿಂಗೇಶ್ವರ ಹೋಟೇಲ್ನಲ್ಲಿ ಗ್ಯಾಸ್ ಸಿಲಿಂಡರ್ ಹಾಗೂ ₹2ಸಾವಿರ ನಗದು ದೋಚಿ ಬಸ್ ನಿಲ್ದಾಣ ಬಳಿ ನಿಂತಿದ್ದರು. ಸುಳಿವು ಹಿಡಿದ ಮಾಲೀಕ ಮಾರುತಿ ಬೇನಳ್ಳಿ ಬೆನ್ನತ್ತಿ ಪ್ರಶ್ನಿಸಿದರು. ಮಾಲೀಕರಿಗೆ ಕೈಯಿಂದ ದಬ್ಬಿ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಬಲೆ ಬೀಸಿದ ಪೋಲೀಸರು ಇಬ್ಬರನ್ನೂ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು.</p>.<p>ಹಿಂದೆ ಕಳ್ಳತನ: ಆರೋಪಿತರು ಹಿಂದೆ ಕಳ್ಳತನ ಮಾಡಿ ರೈಲ್ವೆ ನಿಲ್ದಾಣ ಬಳಿ ಗೋದಾಮು ಹಿಂದೆ ಇಟ್ಟಿದ್ದ 10 ಗ್ಯಾಸ್ ಸಿಲಿಂಡರ್ ಹಾಗೂ 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಹೋಟೇಲ್ ಮಾಲೀಕ ಮಾರುತಿ ಬೇನಳ್ಳಿ ನೀಡಿದ ದೂರಿನನ್ವಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಕಾಮಣ್ಣ ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>