ಉತ್ತರದ ಪ್ರಯಾಗರಾಜ್ನಲ್ಲಿ ನಾಗಸಾಧುಗಳ ಕುಂಭಮೇಳ ನಡೆಯುತ್ತದೆ. ದಕ್ಷಿಣದಲ್ಲಿ ಭಕ್ತರ ಕುಂಭ ಮೇಳ ಕಾಣಬೇಕೆಂದರೆ ಕೊಪ್ಪಳ ಜಾತ್ರೆಗೆ ಬರಬೇಕು.
ನಿರಂಜನಾನಂದಪುರಿ ಸ್ವಾಮೀಜಿ ಕನಕಗುರುಪೀಠ ಕಾಗಿನೆಲೆ
ಕೊಪ್ಪಳದಲ್ಲಿ ನಡೆದಿದ್ದು ಭಾರತದಲ್ಲಿ ಅತ್ಯಂತ ಐತಿಹಾಸಿಕ ಜಾತ್ರೆ. ಜನರ ಸಂಭ್ರಮ ಹೆಚ್ಚಿಸುವ ಕೆಲಸ ಗವಿಮಠ ಮಾಡುತ್ತಿದೆ. ಜಾತ್ರೆ ಸಂಭ್ರಮ ನಿರಂತರವಾಗಿರಲಿ
ಜಗದೀಶ ಶೆಟ್ಟರ್ ಸಂಸದ
ಕೊಪ್ಪಳದ ಗವಿಸಿದ್ಧೇಶ್ವರ ಎಲ್ಲರ ಮನದಲ್ಲಿ ನೆಲೆಸಿದ್ದಾನೆ. ಭಕ್ತಿ ಭಾವದ ಈ ಜಾತ್ರೆ ಎಲ್ಲ ವರ್ಗ ಸಮುದಾಯ ಜನ ಪಾಲ್ಗೊಳ್ಳುತ್ತಾರೆ. ಸದಾ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಇದೆ.
ಬಸವರಾಜ ಬೊಮ್ಮಾಯಿ ಸಂಸದ
ಕೊಪ್ಪಳದ ಗವಿಮಠ ಜಾತ್ರೆ ಸೂರ್ಯ ಚಂದ್ರ ಇರುವ ತನಕವೂ ಅದರ ವೈಭವ ಇರುತ್ತದೆ. ಜಗತ್ತಿನ ಭೂಪಟದಲ್ಲಿ ಇಂಥ ಜಾತ್ರೆ ಮತ್ತೆ ಎಲ್ಲಿಯೂ ಸಿಗುವುದಿಲ್ಲ. ಅಭಿನವ ಗವಿಶ್ರೀಗಳ ದಿವ್ಯ ತಪಸ್ಸಿನಿಂದ ಇದೆಲ್ಲವೂ ಸಾಧ್ಯವಾಗಿದೆ.
ವಿ.ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವ
ವರ್ಷದಿಂದ ವರ್ಷಕ್ಕೆ ಗವಿಮಠದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಗವಿಶ್ರೀಗಳ ಆಶೀರ್ವಾದ ನಮ್ಮ ಜಿಲ್ಲೆಯ ಮೇಲಿದೆ. ಎಲ್ಲ ಗ್ರಾಮಗಳ ಮನೆಗಳಿಂದಲೂ ಬರುವ ಧನವ ಧಾನ್ಯ ರೊಟ್ಟಿಗಳಿಂದ ಇದು ಭಾವೈಕ್ಯದ ಜಾತ್ರೆಯಾಗಿದೆ.