<p><strong>ಕವಿತಾಳ</strong>: ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಯ ದಾಸೋಹಕ್ಕಾಗಿ ಸಮೀಪದ ಬಾಗಲವಾಡ ಗ್ರಾಮಸ್ಥರು ಬೆಲ್ಲದ ಲಡ್ಡು ತಯಾರಿಸಿದ್ದಾರೆ.</p>.<p>ಗ್ರಾಮದ ಮುಖಂಡರು, ಮಹಿಳೆಯರು ಮತ್ತು ಯುವಕರು ಗ್ರಾಮದ ಶಾಂಭವಿ ಮಠದಲ್ಲಿ ಮಂಗಳವಾರ ಬೆಲ್ಲದ ಲಡ್ಡು ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಅಡುಗೆ ತಯಾರಕ ಮಲ್ಲಿಕಾರ್ಜುನ ದಿದ್ದಗಿ ಅವರು ಬೂಂದಿ, ಬೆಲ್ಲದ ಪಾಕ ಮಿಶ್ರಣ ಮಾಡಿ ನೀಡಿದಂತೆ ಗುಂಪು ಗುಂಪಾಗಿ ಕುಳಿತ ಮಹಿಳೆಯರು ಲಡ್ಡು ಕಟ್ಟಿದರು.</p>.<p>‘ಅಂದಾಜು 3 ಕ್ವಿಂಟಲ್ ಬೆಲ್ಲದ ಲಡ್ಡು ತಯಾರಿಸಲಾಗಿದೆ. ಮಹಿಳೆಯರು, ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ, 5 ಕ್ವಿಂಟಲ್ ಬೆಲ್ಲದ ಲಡ್ಡು ಮತ್ತು 5 ಕ್ವಿಂಟಲ್ ಅಕ್ಕಿಯನ್ನು ಜ.2 ರಂದು ಕೊಪ್ಪಳದ ಮಠಕ್ಕೆ ತಲುಪಿಸಲಾಗುವುದು’ ಎಂದು ಮುಖಂಡ ಸೂರ್ಯಪ್ಪ ಸಾಹುಕಾರ ಹೇಳಿದರು.</p>.<p>‘ಕಳೆದ ವರ್ಷದ ಜಾತ್ರೆಗೆ ಶೇಂಗಾ ಹೋಳಿಗೆ ತಯಾರಿಸಲಾಗಿತ್ತು, ಈ ವರ್ಷ ಬೆಲ್ಲದ ಲಡ್ಡು ಕೊಡುತ್ತಿದ್ದೇವೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಜಾತ್ರೆಯಲ್ಲಿ ಇದೊಂದು ಸಣ್ಣ ಸೇವೆʼ ಎಂದು ಗೃಹಣಿ ಶಶಕಿಲಾ ಚಂದ್ರಡ್ಡಿ ತಿಳಿಸಿದರು.</p>.<p>ಮುಖಂಡರಾದ ಸಿ.ಡಿ.ಅಮರೇಶ ಸಾಹುಕಾರ, ಶಿವಶಂಕರ ಮೇಟಿ, ಅಂಬು ಮಾಲೀಗೌಡ, ಶಿವಬಸವ ಸಾಹುಕಾರ, ಲಿಂಗಪ್ಪ ಮೇಟಿ, ಗೌರಮ್ಮ, ಭಾಗ್ಯಮ್ಮ ಜಿನ್ನ, ಗುಂಡಮ್ಮ ಸುಂಕನೂರು, ಜ್ಯೋತಿ ರಾಮರಡ್ಡಿ ಮತ್ತಿತರರು ಲಡ್ಡು ತಯಾರಿಕೆಯಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ</strong>: ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಯ ದಾಸೋಹಕ್ಕಾಗಿ ಸಮೀಪದ ಬಾಗಲವಾಡ ಗ್ರಾಮಸ್ಥರು ಬೆಲ್ಲದ ಲಡ್ಡು ತಯಾರಿಸಿದ್ದಾರೆ.</p>.<p>ಗ್ರಾಮದ ಮುಖಂಡರು, ಮಹಿಳೆಯರು ಮತ್ತು ಯುವಕರು ಗ್ರಾಮದ ಶಾಂಭವಿ ಮಠದಲ್ಲಿ ಮಂಗಳವಾರ ಬೆಲ್ಲದ ಲಡ್ಡು ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಅಡುಗೆ ತಯಾರಕ ಮಲ್ಲಿಕಾರ್ಜುನ ದಿದ್ದಗಿ ಅವರು ಬೂಂದಿ, ಬೆಲ್ಲದ ಪಾಕ ಮಿಶ್ರಣ ಮಾಡಿ ನೀಡಿದಂತೆ ಗುಂಪು ಗುಂಪಾಗಿ ಕುಳಿತ ಮಹಿಳೆಯರು ಲಡ್ಡು ಕಟ್ಟಿದರು.</p>.<p>‘ಅಂದಾಜು 3 ಕ್ವಿಂಟಲ್ ಬೆಲ್ಲದ ಲಡ್ಡು ತಯಾರಿಸಲಾಗಿದೆ. ಮಹಿಳೆಯರು, ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ, 5 ಕ್ವಿಂಟಲ್ ಬೆಲ್ಲದ ಲಡ್ಡು ಮತ್ತು 5 ಕ್ವಿಂಟಲ್ ಅಕ್ಕಿಯನ್ನು ಜ.2 ರಂದು ಕೊಪ್ಪಳದ ಮಠಕ್ಕೆ ತಲುಪಿಸಲಾಗುವುದು’ ಎಂದು ಮುಖಂಡ ಸೂರ್ಯಪ್ಪ ಸಾಹುಕಾರ ಹೇಳಿದರು.</p>.<p>‘ಕಳೆದ ವರ್ಷದ ಜಾತ್ರೆಗೆ ಶೇಂಗಾ ಹೋಳಿಗೆ ತಯಾರಿಸಲಾಗಿತ್ತು, ಈ ವರ್ಷ ಬೆಲ್ಲದ ಲಡ್ಡು ಕೊಡುತ್ತಿದ್ದೇವೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಜಾತ್ರೆಯಲ್ಲಿ ಇದೊಂದು ಸಣ್ಣ ಸೇವೆʼ ಎಂದು ಗೃಹಣಿ ಶಶಕಿಲಾ ಚಂದ್ರಡ್ಡಿ ತಿಳಿಸಿದರು.</p>.<p>ಮುಖಂಡರಾದ ಸಿ.ಡಿ.ಅಮರೇಶ ಸಾಹುಕಾರ, ಶಿವಶಂಕರ ಮೇಟಿ, ಅಂಬು ಮಾಲೀಗೌಡ, ಶಿವಬಸವ ಸಾಹುಕಾರ, ಲಿಂಗಪ್ಪ ಮೇಟಿ, ಗೌರಮ್ಮ, ಭಾಗ್ಯಮ್ಮ ಜಿನ್ನ, ಗುಂಡಮ್ಮ ಸುಂಕನೂರು, ಜ್ಯೋತಿ ರಾಮರಡ್ಡಿ ಮತ್ತಿತರರು ಲಡ್ಡು ತಯಾರಿಕೆಯಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>