<p><strong>ಹನುಮಸಾಗರ:</strong> ಸಾರ್ವಜನಿಕರ ಒತ್ತಡದ ನಿಮಿತ್ತ ಶನಿವಾರ ಸಂಸದ ಸಂಗಣ್ಣ ಕರಡಿ ಅವರು, ಇಲ್ಲಿನ ಬೆಟ್ಟದ ಕೆಳಗಿರುವ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.</p>.<p>ಎರಡು ದಶಕದಿಂದ ಮಳೆ ಇಲ್ಲದೆ ಈ ಭಾಗದಲ್ಲಿ ಅಂತರ್ಜಲ ಕುಸಿದಿದ್ದು ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಕೃಷ್ಣಾ ಜಲ ಭಾಗ್ಯ ನಿಗಮದ ಕೆರೆ ತುಂಬಿಸುವ ಯೋಜನೆಯಲ್ಲಿ ಹನುಮಸಾಗರ ಕೆರೆಯನ್ನು ಸೇರಿಸಿಕೊಳ್ಳಬೇಕು ಎಂದು ಜನರು ಒತ್ತಾಯಿಸಿದರು.</p>.<p>ಮುಖಂಡ ಬಸವರಾಜ ಹಳ್ಳೂರ ಮನವಿ ಮಾಡಿ, ಈ ಕೆರೆ ತುಂಬಿದರೆ ಸುತ್ತಲಿನ ಕೊಳವೆ ಬಾವಿಗಳಿಗೆ ನೀರಿನ ಆಸರೆ ದೊರಕುತ್ತದೆ. ಸುತ್ತಲಿನ ಹಲವಾರು ಕೆರೆಗಳನ್ನು ಈ ಯೋಜನೆಗೆ ಒಳಪಡಿಸಿದ್ದರೆ ಇಲ್ಲಿನ ಕೆರೆ ಮಾತ್ರ ಕರೆ ತುಂಬಿಸುವ ಯೋಜನೆಗೆ ಅಳವಡಿಸಿಲ್ಲ ಎಂದು ಹೇಳಿದರು.</p>.<p>ಕೆರೆ ಪರಿಶೀಲಿಸಿದ ಬಳಿಕ ಸಂಸದರ, ಕೆರೆ ಸಮೀಕ್ಷೆ ಮಾಡಿ ಯೋಜನೆಯಲ್ಲಿ ಸೇರಿಸುವಂತೆ ಎಂಜಿನಿಯರ್ ಯುವರಾಜ ಅವರಿಗೆ ಸೂಚಿಸಿದರು.</p>.<p>ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಬಸವರಾಜ ಹಳ್ಳೂರ, ತಹಶೀಲ್ದಾರ ಎಮ್.ಸಿದ್ದೇಶ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ, ವಿಠಲ್ಶ್ರೇಷ್ಠಿ ನಾಗೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ:</strong> ಸಾರ್ವಜನಿಕರ ಒತ್ತಡದ ನಿಮಿತ್ತ ಶನಿವಾರ ಸಂಸದ ಸಂಗಣ್ಣ ಕರಡಿ ಅವರು, ಇಲ್ಲಿನ ಬೆಟ್ಟದ ಕೆಳಗಿರುವ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.</p>.<p>ಎರಡು ದಶಕದಿಂದ ಮಳೆ ಇಲ್ಲದೆ ಈ ಭಾಗದಲ್ಲಿ ಅಂತರ್ಜಲ ಕುಸಿದಿದ್ದು ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಕೃಷ್ಣಾ ಜಲ ಭಾಗ್ಯ ನಿಗಮದ ಕೆರೆ ತುಂಬಿಸುವ ಯೋಜನೆಯಲ್ಲಿ ಹನುಮಸಾಗರ ಕೆರೆಯನ್ನು ಸೇರಿಸಿಕೊಳ್ಳಬೇಕು ಎಂದು ಜನರು ಒತ್ತಾಯಿಸಿದರು.</p>.<p>ಮುಖಂಡ ಬಸವರಾಜ ಹಳ್ಳೂರ ಮನವಿ ಮಾಡಿ, ಈ ಕೆರೆ ತುಂಬಿದರೆ ಸುತ್ತಲಿನ ಕೊಳವೆ ಬಾವಿಗಳಿಗೆ ನೀರಿನ ಆಸರೆ ದೊರಕುತ್ತದೆ. ಸುತ್ತಲಿನ ಹಲವಾರು ಕೆರೆಗಳನ್ನು ಈ ಯೋಜನೆಗೆ ಒಳಪಡಿಸಿದ್ದರೆ ಇಲ್ಲಿನ ಕೆರೆ ಮಾತ್ರ ಕರೆ ತುಂಬಿಸುವ ಯೋಜನೆಗೆ ಅಳವಡಿಸಿಲ್ಲ ಎಂದು ಹೇಳಿದರು.</p>.<p>ಕೆರೆ ಪರಿಶೀಲಿಸಿದ ಬಳಿಕ ಸಂಸದರ, ಕೆರೆ ಸಮೀಕ್ಷೆ ಮಾಡಿ ಯೋಜನೆಯಲ್ಲಿ ಸೇರಿಸುವಂತೆ ಎಂಜಿನಿಯರ್ ಯುವರಾಜ ಅವರಿಗೆ ಸೂಚಿಸಿದರು.</p>.<p>ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಬಸವರಾಜ ಹಳ್ಳೂರ, ತಹಶೀಲ್ದಾರ ಎಮ್.ಸಿದ್ದೇಶ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ, ವಿಠಲ್ಶ್ರೇಷ್ಠಿ ನಾಗೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>