ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ಅಕ್ಷರ ಪ್ರೀತಿ ಹಂಚುವ ಕಾಯಕಯೋಗಿಗಳು

ಇಂದು ಪತ್ರಿಕಾ ವಿತರಕರ ದಿನ, ಸಂದಿಗ್ದ ಪರಿಸ್ಥಿತಿಯ ನಡುವೆಯೂ ಅವಿರತ ದುಡಿಮೆ, ಅವರ ಬದುಕಿಗೂ ಬೇಕಿದೆ ಭದ್ರತೆ
Published : 4 ಸೆಪ್ಟೆಂಬರ್ 2023, 6:26 IST
Last Updated : 4 ಸೆಪ್ಟೆಂಬರ್ 2023, 6:26 IST
ಫಾಲೋ ಮಾಡಿ
Comments
ಜನರಿಗೆ ಪತ್ರಿಕೆ ಹಂಚಲು ಸಜ್ಜುಗೊಳಿಸುತ್ತಿರುವುದು
ಜನರಿಗೆ ಪತ್ರಿಕೆ ಹಂಚಲು ಸಜ್ಜುಗೊಳಿಸುತ್ತಿರುವುದು
ಓದುಗರ ಮನೆ ಮನ ತಲುಪಲು ಸಜ್ಜಾಗಿ ಹೊರಟ ಪತ್ರಿಕೆ ಹಂಚುವ ಯುವಕ
ಓದುಗರ ಮನೆ ಮನ ತಲುಪಲು ಸಜ್ಜಾಗಿ ಹೊರಟ ಪತ್ರಿಕೆ ಹಂಚುವ ಯುವಕ
ಸೈಕಲ್ಲೇ ನಮ್ಮ ಬೆಸ್ಟ್‌ ಫ್ರೆಂಡು ಎನ್ನುವ ಪತ್ರಿಕೆ ಹಾಕುವ ಹುಡುಗರು
ಸೈಕಲ್ಲೇ ನಮ್ಮ ಬೆಸ್ಟ್‌ ಫ್ರೆಂಡು ಎನ್ನುವ ಪತ್ರಿಕೆ ಹಾಕುವ ಹುಡುಗರು
ಪಂಪಾಪತಿ ಕುಂಬಾರ
ಪಂಪಾಪತಿ ಕುಂಬಾರ
ಮಹೇಶ ಚಕ್ರಸಾಲಿ
ಮಹೇಶ ಚಕ್ರಸಾಲಿ
ಮಂಜುನಾಥ ಎಸ್‌. ಟಪಾಲ್‌
ಮಂಜುನಾಥ ಎಸ್‌. ಟಪಾಲ್‌
ಶರಣಪ್ಪ ಹಡಪದ
ಶರಣಪ್ಪ ಹಡಪದ
ವೀರಣ್ಣ ಕೆ. ಪತ್ತಾರ
ವೀರಣ್ಣ ಕೆ. ಪತ್ತಾರ
ಶರಣಬಸವರಾಜ ಬಿ. ಗೊಂಡಬಾಳ
ಶರಣಬಸವರಾಜ ಬಿ. ಗೊಂಡಬಾಳ
ಮಹಾದೇವಪ್ಪ ಎಸ್‌. ಹೂಗಾರ
ಮಹಾದೇವಪ್ಪ ಎಸ್‌. ಹೂಗಾರ
ಚಾಂದ್‌ ಪಾಷ ನಂದಾಪುರ
ಚಾಂದ್‌ ಪಾಷ ನಂದಾಪುರ
ಶಂಕರಗೌಡ ದೋಟಿಹಾಳ
ಶಂಕರಗೌಡ ದೋಟಿಹಾಳ
ಮಂಜುನಾಥ ಕಿರಗೇರಿ
ಮಂಜುನಾಥ ಕಿರಗೇರಿ
ಬಸವರಾಜ ಎನ್‌. ನೋಟಗಾರ
ಬಸವರಾಜ ಎನ್‌. ನೋಟಗಾರ
ನಿಂಗಜ್ಜ ಎಂ. ಕುಂಬಾರ
ನಿಂಗಜ್ಜ ಎಂ. ಕುಂಬಾರ
ವಿರೂ‍ಪಾಕ್ಷಪ್ಪ ಮುರಳಿ
ವಿರೂ‍ಪಾಕ್ಷಪ್ಪ ಮುರಳಿ
ಪಂಪಣ್ಣ ಸಂಗನಾಳ
ಪಂಪಣ್ಣ ಸಂಗನಾಳ
ಮೂರು ದಶಕಗಳಿಂದ ಪತ್ರಿಕೆಗಳ ಹಂಚಿಕೆ ಕೆಲಸದಲ್ಲಿ ತೊಡಗಿದ್ದೇನೆ. ಮೊದಲು ನಡೆದುಕೊಂಡು ಮನೆಮನೆಗೆ ಹೋಗಿ ಪತ್ರಿಕೆ ಹಾಕುತ್ತಿದ್ದೆ. ಕ್ರಮೇಣ ಸೈಕಲ್‌ ಹಾಗೂ ಈಗ ದ್ವಿಚಕ್ರ ವಾಹನದ ಮೇಲೆ ಪತ್ರಿಕೆ ಹಂಚುವ ಕಾಯಕ ನಡೆಯುತ್ತಿದೆ. ಈ ಕೆಲಸ ನನ್ನ ಬದುಕಿಗೆ ಎಲ್ಲವನ್ನೂ ಕೊಟ್ಟಿದೆ.
ಪಂಪಾಪತಿ ಕುಂಬಾರ ಗಂಗಾವತಿ
ಎರಡು ದಶಕಗಳಿಂದ ಪತ್ರಿಕಾ ವಿತರಕ ಕೆಲಸದಲ್ಲಿ ತೊಡಗಿದ್ದೇನೆ. ಇದರಿಂದಲೇ ಬದುಕು ಕಟ್ಟಿಕೊಂಡಿದ್ದೇನೆ. ಈ ಕೆಲಸ ಸಾಕಷ್ಟು ಖುಷಿ ನೀಡಿದೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು.
ಮಹೇಶ ಚಕ್ರಸಾಲಿ ಕೊಪ್ಪಳ
ಸಮಾಜದ ಬದಲಾವಣೆಯಲ್ಲಿ ಪತ್ರಿಕೆಗಳು ಹೇಗೆ ಮಹತ್ವದ ಪಾತ್ರ ವಹಿಸುತ್ತವೆಯೋ ಅದೇ ರೀತಿ ವಿತರಕರು ಪತ್ರಿಕೆಗಳನ್ನು ಓದುಗರ ಮನೆಗಳಿಗೆ ತಲುಪಿಸುವ ಮಹತ್ವದ ಕೆಲಸ ಮಾಡುತ್ತಾರೆ. ಸರ್ಕಾರ ನಮಗೆ ಗುರುತಿನ ಚೀಟಿ ಕೊಡಬೇಕು.
ಮಂಜುನಾಥ ಎಸ್‌. ಟಪಾಲ್‌ ಕೊಪ್ಪಳ
ಚಳಿ ಮಳೆ ಗಾಳಿ ಏನೇ ಇದ್ದರೂ ನಿತ್ಯ ಬೆಳಗಿನ ಜಾವ ಓದುಗರ ಮನೆಗೆ ಪತ್ರಿಕೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಲಾಭದಾಯಕ ಎನ್ನುವುದಕ್ಕಿಂತ ಹೆಚ್ಚಾಗಿ ಆತ್ಮತೃಪ್ತಿ ಸಲುವಾಗಿ ಪತ್ರಿಕಾ ವಿತರಕನ ಕೆಲಸ ಮಾಡುವೆ. ಸರ್ಕಾರ ನಮಗೂ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.
ಶರಣಪ್ಪ ಹಡಪದ ಕಾರಟಗಿ
ನನಗೀಗ 63 ವರ್ಷ ವಯಸ್ಸು. ನಾಲ್ಕೂವರೆ ದಶಕಗಳ ಹಿಂದೆ ಪತ್ರಿಕೆ ಹಂಚುವ ಕೆಲಸ ಆರಂಭಿಸಿದ್ದೆ. ಆಗ ಬೆಂಗಳೂರಿನಲ್ಲಿ ಮುದ್ರಣಗೊಂಡು ಸಂಜೆ ವೇಳೆಗೆ ಪತ್ರಿಕೆ ಬರುತ್ತಿದ್ದವು. ಅನೇಕ ಬಾರಿ ಇಂದಿನ ಪತ್ರಿಕೆಯನ್ನು ಮರುದಿನ ಹಂಚಿದ ಉದಾಹರಣೆಗಳೂ ಇವೆ. ಅಂಚೆ ಇಲಾಖೆಯಲ್ಲಿ ಪೋಸ್ಟ್‌ ಮಾಸ್ಟರ್‌ ಆಗಿದ್ದೆ. ಜೊತೆಗೆ ಪತ್ರಿಕೆ ಹಂಚುವ ಕೆಲಸವನ್ನೂ ಮಾಡುತ್ತಿದ್ದೆ. ಈ ಕಾಯಕ ಆತ್ಮತೃಪ್ತಿ ನೀಡಿದೆ.
ವೀರಣ್ಣ ಕೆ. ಪತ್ತಾರ ಭಾನಾಪುರ
ಪತ್ರಿಕೆ ಹಂಚುವ ನೆಪದಲ್ಲಿ ಬೆಳಗಿನ ಜಾವ ಬೇಗನೆ ಎದ್ದೇಳುವುದು ಆರೋಗ್ಯಕ್ಕೂ ಉತ್ತಮ. ಬೆಳಿಗ್ಗೆಯೇ ಕೆಲಸ ಮಾಡುವುದರಿಂದ ದಿನಪೂರ್ತಿ ಉಲ್ಲಸಿತರಾಗಿರಲು ಸಾಧ್ಯವಾಗುತ್ತದೆ. ಪತ್ರಿಕೆ ವಿತರಣೆಯ ಕೆಲಸ ಖುಷಿ ನೀಡಿದೆ.
ಶರಣಬಸವರಾಜ ಬಿ. ಗೊಂಡಬಾಳ ಅಳವಂಡಿ
11 ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಇದರಿಂದ ದುಡಿಮೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ. ದಿನಪೂರ್ತಿ ಸಕ್ರಿಯವಾಗಿ ಕ್ರಿಯಾತ್ಮಕವಾಗಿ ಕೆಲಸ ಮಾಡಲು ಬೆಳಗಿನ ಜಾವ ಬೇಗನೆ ಏಳುವುದು ಅನುಕೂಲವಾಗುತ್ತಿದೆ.
ಮಹಾದೇವಪ್ಪ ಎಸ್‌. ಹೂಗಾರ ಯಲಬುರ್ಗಾ
ಮೂರು ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಅವಧಿಯಲ್ಲಿ ನಾನು ಮಾಡಿದ ಕೆಲಸ ಖುಷಿ ನೀಡಿದೆ. ಪತ್ರಿಕಾ ವಿತರಕ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ.
ಚಾಂದ್‌ ಪಾಷ ನಂದಾಪುರ ಕನಕಗಿರಿ
ನನಗೀಗ 63 ವರ್ಷ ವಯಸ್ಸು. ಮೊದಲು ಪಾನ್‌ಶಾಪ್‌ನಲ್ಲಿ ಈಗ ಕಿರಾಣಿ ಅಂಗಡಿಯ ಜೊತೆಯಲ್ಲಿ ಪತ್ರಿಕೆಗಳನ್ನು ವಿತರಿಸುವ ಕಾರ್ಯವನ್ನೂ ಮಾಡುತ್ತಿದ್ದೇನೆ. ಈ ಕೆಲಸ ಮನಸ್ಸಿಗೆ ಖುಷಿ ನೀಡಿದೆ. ಪತ್ರಿಕಾ ವಿತರಕರ ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಶಂಕರಗೌಡ ದೋಟಿಹಾಳ ಹಿರೇಮನ್ನಾಪುರ
ಮೂರು ದಶಕಗಳಾಗಿವೆ. ಕೋವಿಡ್‌ ಬಂದ ಬಳಿಕ ಪತ್ರಿಕಾ ವಿತರಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಏನೇ ಕಷ್ಟ ಬಂದರೂ ಬದ್ಧತೆಯಿಂದ ನಮ್ಮ ಕೆಲಸ ನಾವು ಮಾಡುತ್ತೇವೆ.
ಮಂಜುನಾಥ ಕಿರಗೇರಿ ಕಿನ್ನಾಳ
ಮನೆಮನೆಗೆ ಹೋಗಿ ಪತ್ರಿಕೆಗಳನ್ನು ಹಂಚುವುದು ನನಗೆ ನಿತ್ಯ ಖುಷಿ ನೀಡುತ್ತದೆ. ಓದುಗರು ಹಾಗೂ ಪತ್ರಿಕಾ ಸಂಸ್ಥೆಯ ಸೇತುವೆಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಶಕ್ತಿ ಇರುವ ತನಕ ಇದೇ ಕೆಲಸದಲ್ಲಿ ಮುಂದುವರಿಯುವ ಹೆಬ್ಬಯಕೆಯಿದೆ.
ನಿಂಗಜ್ಜ ಎಂ. ಕುಂಬಾರ ಬುದಗುಂಪಾ
ಪತ್ರಿಕೆ ಹಂಚುವ ಹುಡುಗರನ್ನು ಹಿಡಿದಿಡುವುದೇ ದೊಡ್ಡ ಸವಾಲು. ಎಲ್ಲ ಕ್ಷೇತ್ರಗಳಲ್ಲಿರುವಂತೆ ನಮ್ಮಲ್ಲಿಯೂ ಕೆಲ ಸಮಸ್ಯೆಗಳು ಇವೆ. ಅವುಗಳನ್ನು ನಿರ್ವಹಿಸಿಕೊಂಡು ಮುನ್ನಡೆದರೆ ಪತ್ರಿಕಾ ವಿತರಕರೂ ಆರ್ಥಿಕವಾದ ಸಬಲರಾಗಲು ಸಾಧ್ಯವಾಗುತ್ತದೆ.
ವಿರೂ‍ಪಾಕ್ಷಪ್ಪ ಮುರಳಿ ಕೊಪ್ಪಳ
ಪತ್ರಿಕಾ ವಿತರಕನಾಗಿ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಿತ್ಯ ಏನೇ ಸಮಸ್ಯೆ ಹಾಗೂ ಸವಾಲುಗಳು ಎದುರಾದರೂ ಪತ್ರಿಕೆಗಳನ್ನು ಹಾಕಿದರಷ್ಟೇ ಸಮಾಧಾನವಾಗುತ್ತದೆ. ಈ ಕೆಲಸ ಖುಷಿ ನೀಡಿದೆ.
ಪಂಪಣ್ಣ ಸಂಗನಾಳ ಕುಷ್ಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT