ಈ ಕ್ಷೇತ್ರದಲ್ಲಿನ ದುರಾಡಳಿತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಜನ ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದಾರೆ ಎಂದೇ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಹೇಳಿದ್ದಾರೆ. ಕೆಲಸ ಮಾಡದವರು ಎರಡನೇ ಬಾರಿಗೆ ಅಯ್ಕೆಯಾಗಿಲ್ಲ ಅಷ್ಟೇ, 2013ರ ಚುನಾವಣೆಯಲ್ಲಿಯೇ ಇತಿಹಾಸ ಮುರಿಯಬೇಕಿತ್ತು, ಬಿಎಸ್ಆರ್ ಪಕ್ಷದ ಲಿಂಗಾಯತ ಕೋಮಿನ ರಾಜಶೇಖರಗೌಡ ಗೋನಾಳ ಸ್ಪರ್ಧೆಯಿಂದಾಗಿ ಸೋಲುವಂತಾಯಿತು ಎಂದೇ ಬಯ್ಯಾಪುರ ಹೇಳಿದರು. ಈ ಬಾರಿ ಈ ಕ್ಷೇತ್ರಕ್ಕೆ ಅಂಟಿರುವ ಇತಿಹಾಸದ ಕಳಂಕ ಕಳಚಲಿದೆ ಎಂದೆ ಬಯ್ಯಾಪುರ ಪ್ರಚಾರದ ಸಂದರ್ಭದಲ್ಲಿ ಹೇಳುತ್ತ ಬಂದಿದ್ದಾರೆ.