ಕುಕನೂರು:ಅಧ್ಯಾತ್ಮಿಕ ಶ್ರೀಮಂತಿಕೆ ಪಡೆದಾಗ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಅಮರೇಶ ನುಗಡೋಣಿ ಹೇಳಿದರು.
ಪಟ್ಟಣದ ಇಟಗಿ ಭೀಮಾಂಬಿಕಾ ಮಠದದಲ್ಲಿ ಭಾನುವಾರ ನಡೆದ ನಿವೃತ್ತ ಉಪನ್ಯಾಸಕ ಆರ್.ಪಿ ರಾಜೂರು ಅವರ ರಚಿತ ‘ಅಧ್ಯಾತ್ಮದ ಅಂತರಂಗ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪ್ರಸ್ತುತ ಆಧುನಿಕತೆಯ ಭರಾಟೆಯಲ್ಲಿ ಯಾಂತ್ರಿಕ ಬದುಕಿನ ಒತ್ತಡದಲ್ಲಿ ಮನುಷ್ಯ ಶಾಂತಿ ಹಾಗೂ ನೆಮ್ಮದಿ ಕಾಣದೇ ಪರಿತಪಿಸುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.
ತತ್ವಪದಕಾರರು ಮೂಲತಃ ಗುರುಮಾರ್ಗವಾಗಿದ್ದು, ಗುರುಶಿಷ್ಯ ಸಂಬಂಧದಲ್ಲಿ ಜಾತಿ ಧರ್ಮಗಳ ಕಟ್ಟಳೆಗಳಿರುವುದಿಲ್ಲ. ಗೋವಿಂದಭಟ್ಟ ಹಾಗೂ ಶಿಶುನಾಳ ಶರೀಫ್, ಕಡಕೋಳ ಮಡಿವಾಳಪ್ಪ–ಚೆನ್ನೂರ ಜಲಾಲ ಸಾಹೇಬ ಹೀಗೆ ಅನೇಕ ಜೋಡಿಗಳನ್ನು ಇಲ್ಲಿ ಗುರುತಿಸಬಹುದು. ಆನುಭಾವಿಕ ನೆಲೆಯ ಇನ್ನೊಂದು ಲಕ್ಷಣ ಯೋಗಮಾರ್ಗ. ದೇಹವೇ ಎಲ್ಲ ಸಾಧನೆಗಳ ತಾಣ ಎಂದರು.
ಡಾ.ಸಿ.ಬಿ ಚಿಲ್ಕರಾಗಿಪುಸ್ತಕ ಪರಿಚ ಯಿಸಿದರು. ಹಿರಿಯ ಸಾಹಿತಿ ವೀಠಪ್ಪ ಗೋರಂಟ್ಲಿ ಅಧ್ಯಕ್ಷತೆ ವಹಿಸಿದ್ದರು.
ಆಡ್ನೂರ- ರಾಜೂರಿನ ಪಂಚಾಕ್ಷರ ಶಿವಚಾರ್ಯ ಸ್ವಾಮೀಜಿ, ಅನ್ನದಾನೇಶ್ವರ ಮಠದ ಮಹಾದೇವ ದೇವರು ಸಾನಿದ್ಯ ವಹಿಸಿದ್ದರು.