ಗೆಲುವಿನ ಸೂಚನೆ ದೊರೆಯುತ್ತಿದ್ದಂತೆ ಅನೇಕ ಯುವಕರು ಪಕ್ಷದ ಬಾವುಟ ಹಿಡಿದು ಬೈಕ್ ಜಾಥಾ ನಡೆಸಿದರು. ನಿಷೇಧಾಜ್ಞೆ ಕಾರಣಕ್ಕೆ ಆಚರಣೆ ಸರಳವಾಗಿತ್ತು. ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಇತರೆ ಮುಖಂಡರೊಂದಿಗೆ ಸೇರಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಇದೇ ವೇಳೆ ಬಯ್ಯಾಪುರ ಅವರನ್ನು ಸನ್ಮಾನಿಸಿದರು.