ಉತ್ತರಾದಿಮಠಕ್ಕೆ ಅವಕಾಶ: ಆರಾಧನೆ ನಡೆಸಲು ಉತ್ತರಾದಿಮಠದವರು, ಸುಧಾಸಮರ್ಪಣ ಸಂಸ್ಮರಣೋತ್ಸವ ನಡೆಸಲು ರಾಯರ ಮಠದವರು ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಕೋರಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿಯೇ ಅನುಮತಿ ಪಡೆಯಬೇಕು ಎಂದು ಜಿಲ್ಲಾಡಳಿತ ಹೇಳಿದ್ದರಿಂದ ಉತ್ತರಾದಿಮಠವು ಧಾರವಾಡದ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್, ಆರಾಧನೆ ನಡೆಸಲು ಸೋಮವಾರ ಉತ್ತರಾದಿಮಠಕ್ಕೆ ಅವಕಾಶ ಕೊಟ್ಟಿತ್ತು.