<p>ಮುನಿರಾಬಾದ್: ಇಂದಿನ ಕಲುಷಿತ ಸಾಮಾಜಿಕ ವ್ಯವಸ್ಥೆಗೆ ಭಗವಾನ್ ಮಹಾವೀರರ ಅಹಿಂಸಾ ತತ್ವ ದಾರಿದೀಪವಾಗಿದೆ ಎಂದು ಉಪನ್ಯಾಸಕ ಕೊಪ್ಪಳದ ಸಿದ್ದಲಿಂಗಪ್ಪ ಕೊಟ್ನೆಕಲ್ ಅಭಿಪ್ರಾಯಪಟ್ಟರು.</p>.<p>ಗುರುವಾರ ಹುಲಿಗಿಯ ಜೈನ ಸಮಾಜದ ವತಿಯಿಂದ ಪಾರ್ಶ್ವನಾಥ ದಿಗಂಬರ ಜೈನಬಸದಿಯಲ್ಲಿ ಭಗವಾನ್ ಮಹಾವೀರರ ಜನ್ಮ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಹಾವೀರರ ತ್ರಿರತ್ನ ತತ್ವ ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ, ಸಮ್ಯಕ್ ಚರಿತ್ರೆ ಅಳವಡಿಸಿಕೊಂಡಲ್ಲಿ ಮನುಷ್ಯ ಪರಿಪೂರ್ಣನಾಗುತ್ತಾನೆ. ಪೂಜೆ ಅಥವಾ ಪ್ರಾರ್ಥನೆಯಿಂದ ಪಾಪ ತೊಲಗುವುದಿಲ್ಲ. ಸದ್ಗುಣ ನಡವಳಿಕೆಯಿಂದ ಮನುಷ್ಯನಿಗೆ ಮುಕ್ತಿ ಎಂಬುದು ಮಹಾವೀರರ ಸಂದೇಶವಾಗಿದೆ’ ಎಂದರು.</p>.<p>ಸಮಾಜದ ಪ್ರಮುಖ ಚಂದ್ರನಾಥ ತವನಪ್ಪನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸದಿಯಲ್ಲಿ ಮಹಾವೀರ ಮತ್ತು ತೀರ್ಥಂಕರರ ಬಿಂಬಗಳಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು. ಕುಂಭ-ಕಳಸ, ಮಂಗಳವಾದ್ಯದೊಂದಿಗೆ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು. ಸುಹಾಸ ಇಜಾರಿ ನಿರೂಪಿಸಿದರು. ಪುಷ್ಪದಂತೆ ಪಾಟೀಲ ವಂದಿಸಿದರು. ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುನಿರಾಬಾದ್: ಇಂದಿನ ಕಲುಷಿತ ಸಾಮಾಜಿಕ ವ್ಯವಸ್ಥೆಗೆ ಭಗವಾನ್ ಮಹಾವೀರರ ಅಹಿಂಸಾ ತತ್ವ ದಾರಿದೀಪವಾಗಿದೆ ಎಂದು ಉಪನ್ಯಾಸಕ ಕೊಪ್ಪಳದ ಸಿದ್ದಲಿಂಗಪ್ಪ ಕೊಟ್ನೆಕಲ್ ಅಭಿಪ್ರಾಯಪಟ್ಟರು.</p>.<p>ಗುರುವಾರ ಹುಲಿಗಿಯ ಜೈನ ಸಮಾಜದ ವತಿಯಿಂದ ಪಾರ್ಶ್ವನಾಥ ದಿಗಂಬರ ಜೈನಬಸದಿಯಲ್ಲಿ ಭಗವಾನ್ ಮಹಾವೀರರ ಜನ್ಮ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಮಹಾವೀರರ ತ್ರಿರತ್ನ ತತ್ವ ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ, ಸಮ್ಯಕ್ ಚರಿತ್ರೆ ಅಳವಡಿಸಿಕೊಂಡಲ್ಲಿ ಮನುಷ್ಯ ಪರಿಪೂರ್ಣನಾಗುತ್ತಾನೆ. ಪೂಜೆ ಅಥವಾ ಪ್ರಾರ್ಥನೆಯಿಂದ ಪಾಪ ತೊಲಗುವುದಿಲ್ಲ. ಸದ್ಗುಣ ನಡವಳಿಕೆಯಿಂದ ಮನುಷ್ಯನಿಗೆ ಮುಕ್ತಿ ಎಂಬುದು ಮಹಾವೀರರ ಸಂದೇಶವಾಗಿದೆ’ ಎಂದರು.</p>.<p>ಸಮಾಜದ ಪ್ರಮುಖ ಚಂದ್ರನಾಥ ತವನಪ್ಪನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸದಿಯಲ್ಲಿ ಮಹಾವೀರ ಮತ್ತು ತೀರ್ಥಂಕರರ ಬಿಂಬಗಳಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು. ಕುಂಭ-ಕಳಸ, ಮಂಗಳವಾದ್ಯದೊಂದಿಗೆ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು. ಸುಹಾಸ ಇಜಾರಿ ನಿರೂಪಿಸಿದರು. ಪುಷ್ಪದಂತೆ ಪಾಟೀಲ ವಂದಿಸಿದರು. ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>