<p><strong>ಗಂಗಾವತಿ: </strong>ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿಯಾದ ಆನೆಗೊಂದಿ ಮತ್ತು ಹಂಪಿ ಸುತ್ತಮುತ್ತಲಿನ ಭಾಗದಲ್ಲಿ ಸ್ಮಾರಕಗಳು ಹೇರಳವಾಗಿದ್ದು, ಅವುಗಳ ಸಂರಕ್ಷಣೆಯ ಕೆಲಸ ಆಗಬೇಕು ಎಂದು ಬಳ್ಳಾರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಹೇಳಿದರು.</p>.<p>ಗಂಗಾವತಿಯ ಪರಿಸರ ಸೇವಾ ಟ್ರಸ್ಟ್ ತಾಲ್ಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಆಯೋಜಿಸಿದ್ದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಐತಿಹಾಸಿಕ ಸ್ಥಳಗಳಾದ ಆನೆಗೊಂದಿ, ಹಂಪೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ. ಇಂಥ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಹಾಗೂ ಪರಿಸರ ಸೇವಾ ಟ್ರಸ್ಟ್ನ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಮಾದರಿ ಕಾರ್ಯಕ್ರಮ ಎಂದರು.</p>.<p>ನಂತರ ಲೇಖಕ ಮಂಜುನಾಥ ಗುಡ್ಲಾನೂರ ಮಾತನಾಡಿ, ‘ಹಿರೇಬೆಣಕಲ್ನ ಬೆಟ್ಟದಲ್ಲಿರುವ ಮೋರೆರ ಶಿಲಾ ಕೋಣೆಗಳು ಮತ್ತು ಗವಿವರ್ಣ ಚಿತ್ರಗಳನ್ನೊಳಗೊಂಡಂತೆ ನಮ್ಮ ಪೂರ್ವಜರು ಬದುಕಿ ಬಾಳಿದ ಈ ಸ್ಥಳಗಳು ಐತಿಹಾಸಿಕ ಮೌಲ್ಯಗಳಾಗಿವೆ. ಮುಂದಿನ ಪೀಳಿಗೆಗೆ ಇವುಗಳನ್ನು ಸಂರಕ್ಷಿಸಿ ಬಿಟ್ಟು ಹೋಗುವ ಜವಾಬ್ದಾರಿ ನಮ್ಮದು. ಈ ಭಾಗದಲ್ಲಿನ ಸ್ಮಾರಕ ಮತ್ತು ಐತಿಹಾಸಿಕ ಕುರುಹುಗಳ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದರು.</p>.<p>ಬಳ್ಳಾರಿ ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ, ಬಳ್ಳಾರಿ ವಲಯ ಗುಪ್ತದಳದ ಬಿ.ಎಸ್.ತಳವಾರ, ಹಾಸ್ಯ ಕಲಾವಿದ ಡಾ.ಬಸವರಾಜ ಬೆಣ್ಣಿ, ಪ್ರಮುಖರಾದ ಗಂಗಾಧರ, ಮಂಜುಳಾ, ಡಾ.ವಿಶ್ವನಾಥ, ಮಂಜುನಾಥ ಶಾನಭೋಗ, ಎಲ್.ಡಿ.ಜೋಷಿ, ಈರಣ್ಣ ಪೂಜಾರ ಹಾಗೂ ಯಮನೂರ ನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿಯಾದ ಆನೆಗೊಂದಿ ಮತ್ತು ಹಂಪಿ ಸುತ್ತಮುತ್ತಲಿನ ಭಾಗದಲ್ಲಿ ಸ್ಮಾರಕಗಳು ಹೇರಳವಾಗಿದ್ದು, ಅವುಗಳ ಸಂರಕ್ಷಣೆಯ ಕೆಲಸ ಆಗಬೇಕು ಎಂದು ಬಳ್ಳಾರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಹೇಳಿದರು.</p>.<p>ಗಂಗಾವತಿಯ ಪರಿಸರ ಸೇವಾ ಟ್ರಸ್ಟ್ ತಾಲ್ಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಆಯೋಜಿಸಿದ್ದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಐತಿಹಾಸಿಕ ಸ್ಥಳಗಳಾದ ಆನೆಗೊಂದಿ, ಹಂಪೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ. ಇಂಥ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಹಾಗೂ ಪರಿಸರ ಸೇವಾ ಟ್ರಸ್ಟ್ನ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಮಾದರಿ ಕಾರ್ಯಕ್ರಮ ಎಂದರು.</p>.<p>ನಂತರ ಲೇಖಕ ಮಂಜುನಾಥ ಗುಡ್ಲಾನೂರ ಮಾತನಾಡಿ, ‘ಹಿರೇಬೆಣಕಲ್ನ ಬೆಟ್ಟದಲ್ಲಿರುವ ಮೋರೆರ ಶಿಲಾ ಕೋಣೆಗಳು ಮತ್ತು ಗವಿವರ್ಣ ಚಿತ್ರಗಳನ್ನೊಳಗೊಂಡಂತೆ ನಮ್ಮ ಪೂರ್ವಜರು ಬದುಕಿ ಬಾಳಿದ ಈ ಸ್ಥಳಗಳು ಐತಿಹಾಸಿಕ ಮೌಲ್ಯಗಳಾಗಿವೆ. ಮುಂದಿನ ಪೀಳಿಗೆಗೆ ಇವುಗಳನ್ನು ಸಂರಕ್ಷಿಸಿ ಬಿಟ್ಟು ಹೋಗುವ ಜವಾಬ್ದಾರಿ ನಮ್ಮದು. ಈ ಭಾಗದಲ್ಲಿನ ಸ್ಮಾರಕ ಮತ್ತು ಐತಿಹಾಸಿಕ ಕುರುಹುಗಳ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದರು.</p>.<p>ಬಳ್ಳಾರಿ ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ, ಬಳ್ಳಾರಿ ವಲಯ ಗುಪ್ತದಳದ ಬಿ.ಎಸ್.ತಳವಾರ, ಹಾಸ್ಯ ಕಲಾವಿದ ಡಾ.ಬಸವರಾಜ ಬೆಣ್ಣಿ, ಪ್ರಮುಖರಾದ ಗಂಗಾಧರ, ಮಂಜುಳಾ, ಡಾ.ವಿಶ್ವನಾಥ, ಮಂಜುನಾಥ ಶಾನಭೋಗ, ಎಲ್.ಡಿ.ಜೋಷಿ, ಈರಣ್ಣ ಪೂಜಾರ ಹಾಗೂ ಯಮನೂರ ನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>