<p><strong>ಗಂಗಾವತಿ</strong>: ‘ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು’ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ವೀರಭದ್ರಪ್ಪ ವಿ.ಗೊಂಡಬಾಳ ಹೇಳಿದರು.</p>.<p>ಇಲ್ಲಿನ ಪಂಪಾನಗರದಲ್ಲಿರುವ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯ ಸಭಾಭವನದಲ್ಲಿ 2020-21ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬುಧವಾರ ನಡೆದ ನಲಿ–ಕಲಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಮೂರನೇ ತರಗತಿಯಲ್ಲಿ ನಲಿ-ಕಲಿ ತರಬೇತಿ ನೀಡುತ್ತಿದ್ದು, ಇದಕ್ಕೆ ನಿರ್ದಿಷ್ಟ ಪಠ್ಯ ಪುಸ್ತಕವಿಲ್ಲ. ಇದು ಚಟುವಟಿಕೆ ಆಧಾರಿತ ಕಲಿಕಾ ಪದ್ಧತಿ. ಕೋವಿಡ್-19 ಸಂದರ್ಭದಲ್ಲಿ ಆಲ್ಲೈನ್ನಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಪ್ರಶಿಕ್ಷಣಾರ್ಥಿಗಳಿಗೆ ನಲಿ-ಕಲಿ ತರಬೇತಿ ತುಂಬಾ ಉಪಯುಕ್ತ. ಇದರ ಸದುಪಯೋಗ ಪಡೆದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು’ ಎಂದರು.</p>.<p>ಕಲ್ಮಠ ಡಿ.ಇಡಿ ಕಾಲೇಜಿನ ಪ್ರಾರ್ಚಾಯ ಲೋಕೇಶ ಎಂ. ಮಾತನಾಡಿ,‘ಪ್ರಶಿಕ್ಷಣಾರ್ಥಿಗಳಿಗಾಗಿ ಎರಡು ದಿನ ನಲಿ-ಕಲಿ ತರಬೇತಿ ಆಯೋಜಿಸಿದ್ದು, ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.</p>.<p>ಶಿಕ್ಷಣ ಸಂಯೋಜಕಿ ಸುಮಂಗಲಾ, ಶೈಕ್ಷಣಿಕ ಆಡಳಿತಾಧಿಕಾರಿ ಗುರುಬಸವರಾಜ್, ಸಂಪನ್ಮೂಲ ವ್ಯಕ್ತಿಗಳಾದ ಛತ್ರಪ್ಪ, ಗುರುರಾಜ್ ಕುಲಕರ್ಣಿ, ಹನುಮಂತಪ್ಪ ಚವ್ಹಾಣ್, ನಲಿಕಲಿ ತರಬೇತಿ ಕಾರ್ಯಕ್ರಮಧಿಕಾರಿ ಸುಜಾತ ಎಲ್.ಡಿ, ಎನ್.ಎಸ್.ಎಸ್ ಕಾರ್ಯಕ್ರಮಧಿಕಾರಿ ಮಂಜುನಾಥ ಮಳಗಾವಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ‘ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು’ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ವೀರಭದ್ರಪ್ಪ ವಿ.ಗೊಂಡಬಾಳ ಹೇಳಿದರು.</p>.<p>ಇಲ್ಲಿನ ಪಂಪಾನಗರದಲ್ಲಿರುವ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯ ಸಭಾಭವನದಲ್ಲಿ 2020-21ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬುಧವಾರ ನಡೆದ ನಲಿ–ಕಲಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಮೂರನೇ ತರಗತಿಯಲ್ಲಿ ನಲಿ-ಕಲಿ ತರಬೇತಿ ನೀಡುತ್ತಿದ್ದು, ಇದಕ್ಕೆ ನಿರ್ದಿಷ್ಟ ಪಠ್ಯ ಪುಸ್ತಕವಿಲ್ಲ. ಇದು ಚಟುವಟಿಕೆ ಆಧಾರಿತ ಕಲಿಕಾ ಪದ್ಧತಿ. ಕೋವಿಡ್-19 ಸಂದರ್ಭದಲ್ಲಿ ಆಲ್ಲೈನ್ನಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಪ್ರಶಿಕ್ಷಣಾರ್ಥಿಗಳಿಗೆ ನಲಿ-ಕಲಿ ತರಬೇತಿ ತುಂಬಾ ಉಪಯುಕ್ತ. ಇದರ ಸದುಪಯೋಗ ಪಡೆದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು’ ಎಂದರು.</p>.<p>ಕಲ್ಮಠ ಡಿ.ಇಡಿ ಕಾಲೇಜಿನ ಪ್ರಾರ್ಚಾಯ ಲೋಕೇಶ ಎಂ. ಮಾತನಾಡಿ,‘ಪ್ರಶಿಕ್ಷಣಾರ್ಥಿಗಳಿಗಾಗಿ ಎರಡು ದಿನ ನಲಿ-ಕಲಿ ತರಬೇತಿ ಆಯೋಜಿಸಿದ್ದು, ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.</p>.<p>ಶಿಕ್ಷಣ ಸಂಯೋಜಕಿ ಸುಮಂಗಲಾ, ಶೈಕ್ಷಣಿಕ ಆಡಳಿತಾಧಿಕಾರಿ ಗುರುಬಸವರಾಜ್, ಸಂಪನ್ಮೂಲ ವ್ಯಕ್ತಿಗಳಾದ ಛತ್ರಪ್ಪ, ಗುರುರಾಜ್ ಕುಲಕರ್ಣಿ, ಹನುಮಂತಪ್ಪ ಚವ್ಹಾಣ್, ನಲಿಕಲಿ ತರಬೇತಿ ಕಾರ್ಯಕ್ರಮಧಿಕಾರಿ ಸುಜಾತ ಎಲ್.ಡಿ, ಎನ್.ಎಸ್.ಎಸ್ ಕಾರ್ಯಕ್ರಮಧಿಕಾರಿ ಮಂಜುನಾಥ ಮಳಗಾವಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>