<p>ಹುಲಿಗಿ (ಮುನಿರಾಬಾದ್): ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾಸ್ಥಳ, ಶಕ್ತಿ ದೇವತೆಯ ಕ್ಷೇತ್ರ ಎಂದು ಹೆಸರಾದ ಹುಲಿಗಿಯ ಹುಲಿಗೆಮ್ಮ ದೇವಿಗೆ ಈಚೆಗೆ ಭಕ್ತರೊಬ್ಬರು ಪುಷ್ಪಾಲಂಕಾರ ಸೇವೆ ಮಾಡಿದ್ದು, ಗಮನ ಸೆಳೆಯಿತು.</p>.<p>ಗಂಗಾವತಿಯ ಹೂವಿನ ವ್ಯಾಪಾರಿ ಜಯಶ್ರೀ–ನಾಗರಾಜ ಹೂಗಾರ ದಂಪತಿ ಹರಕೆಯಂತೆ ಪ್ರತಿವರ್ಷ ಸ್ವಾಗತ ಕಮಾನು, ದೇವಸ್ಥಾನ, ಗರ್ಭಗುಡಿ, ದೇವಸ್ಥಾನದ ಒಳ ಆವರಣ ಹಾಗೂ ದೇವಿ ವಿಗ್ರಹವನ್ನು ವಿವಿಧ ಬಣ್ಣದ ಹೂಗಳಿಂದ ಅಲಂಕರಿಸುತ್ತಾರೆ.</p>.<p>ದೇವಾಲಯದ ಪ್ರದಕ್ಷಿಣಾ ಪಥದಲ್ಲಿ ಹೂವು ಹಾಕಲಾಗುತ್ತದೆ. ಅದರ ಮೇಲೆ ದೇವಿಯ ಹರಕೆ ರಥೋತ್ಸವ ಬರುತ್ತದೆ. ಆ ದೃಶ್ಯ ನಯನ ಮನೋಹರವಾಗಿರುತ್ತದೆ. ವಿವಿಧ ಬಣ್ಣದ ಗುಲಾಬಿ, ಸೇವಂತಿಗೆ, ಮಲ್ಲಿಗೆ, ಡೇರೆ, ಚಂಡು, ಗ್ಲಾಡಿಯೇಟರ್ ಹಾಗೂ ಆರ್ಕಿಡ್ನಂಥ ನೈಸರ್ಗಿಕ ಹೂವುಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ.</p>.<p>‘ಸ್ಥಳೀಯವಾಗಿ ಸಿಗುವ ಹೂವುಗಳ ಜತೆಗೆ ಬೆಂಗಳೂರು, ದಾವಣಗೆರೆ ಮತ್ತು ತುಮಕೂರು ಭಾಗದಿಂದ ಅಪರೂಪದ ಹೂವುಗಳನ್ನು ತಂದು ಅಲಂಕಾರ ಮಾಡುತ್ತೇವೆ’ ಎನ್ನುತ್ತಾರೆ ಪುಷ್ಪಾಲಂಕಾರದ ಸಂಕಲ್ಪ ಮಾಡಿರುವ ಹೂವಿನ ವ್ಯಾಪಾರಿ ನಾಗರಾಜ ಹೂಗಾರ.</p>.<p>ಕೊಂಚ ಬದಲಾವಣೆ ಇರಲಿ ಎಂಬ ಉದ್ದೇಶದಿಂದ ಅನಾನಸ್ ಮತ್ತು ಸೇಬು ಸೇರಿದಂತೆ ಕೆಲವು ಹಣ್ಣುಗಳನ್ನು ಕೂಡ ಈ ಬಾರಿ ಅಲಂಕಾರಕ್ಕೆ ಬಳಸಲಾಗಿದೆ ಎನ್ನುತ್ತಾರೆ ಅವರು.</p>.<p>ಸೌಂದರ್ಯ ಭರಿತ ಹೂವುಗಳು ಮತ್ತು ಪರಿಮಳ ದೇವಾಲಯದ ಆವರಣವನ್ನು ಆಕರ್ಷಣಿಯವಾಗಿಸಿತ್ತು ಎನ್ನುತ್ತಾರೆ ಸಿಬ್ಬಂದಿ. ಪುಷ್ಪಾಲಂಕಾರ ಮತ್ತು ಹರಕೆ ರಥೋತ್ಸವ ನೆರವೇರಿಸಿದ ಜಯಶ್ರೀ–ನಾಗರಾಜ ದಂಪತಿಯನ್ನು ದೇವಸ್ಥಾನದ ಅಧಿಕಾರಿಗಳು ಸನ್ಮಾನಿಸಿದರು.</p>.<p>ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಿಬ್ಬಂದಿ ಗುರುರಾಜ ಪುರೋಹಿತ್, ಸಿದ್ದಪ್ಪ, ಸುಮಾ ಹಾಗೂ ಈರಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಲಿಗಿ (ಮುನಿರಾಬಾದ್): ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾಸ್ಥಳ, ಶಕ್ತಿ ದೇವತೆಯ ಕ್ಷೇತ್ರ ಎಂದು ಹೆಸರಾದ ಹುಲಿಗಿಯ ಹುಲಿಗೆಮ್ಮ ದೇವಿಗೆ ಈಚೆಗೆ ಭಕ್ತರೊಬ್ಬರು ಪುಷ್ಪಾಲಂಕಾರ ಸೇವೆ ಮಾಡಿದ್ದು, ಗಮನ ಸೆಳೆಯಿತು.</p>.<p>ಗಂಗಾವತಿಯ ಹೂವಿನ ವ್ಯಾಪಾರಿ ಜಯಶ್ರೀ–ನಾಗರಾಜ ಹೂಗಾರ ದಂಪತಿ ಹರಕೆಯಂತೆ ಪ್ರತಿವರ್ಷ ಸ್ವಾಗತ ಕಮಾನು, ದೇವಸ್ಥಾನ, ಗರ್ಭಗುಡಿ, ದೇವಸ್ಥಾನದ ಒಳ ಆವರಣ ಹಾಗೂ ದೇವಿ ವಿಗ್ರಹವನ್ನು ವಿವಿಧ ಬಣ್ಣದ ಹೂಗಳಿಂದ ಅಲಂಕರಿಸುತ್ತಾರೆ.</p>.<p>ದೇವಾಲಯದ ಪ್ರದಕ್ಷಿಣಾ ಪಥದಲ್ಲಿ ಹೂವು ಹಾಕಲಾಗುತ್ತದೆ. ಅದರ ಮೇಲೆ ದೇವಿಯ ಹರಕೆ ರಥೋತ್ಸವ ಬರುತ್ತದೆ. ಆ ದೃಶ್ಯ ನಯನ ಮನೋಹರವಾಗಿರುತ್ತದೆ. ವಿವಿಧ ಬಣ್ಣದ ಗುಲಾಬಿ, ಸೇವಂತಿಗೆ, ಮಲ್ಲಿಗೆ, ಡೇರೆ, ಚಂಡು, ಗ್ಲಾಡಿಯೇಟರ್ ಹಾಗೂ ಆರ್ಕಿಡ್ನಂಥ ನೈಸರ್ಗಿಕ ಹೂವುಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ.</p>.<p>‘ಸ್ಥಳೀಯವಾಗಿ ಸಿಗುವ ಹೂವುಗಳ ಜತೆಗೆ ಬೆಂಗಳೂರು, ದಾವಣಗೆರೆ ಮತ್ತು ತುಮಕೂರು ಭಾಗದಿಂದ ಅಪರೂಪದ ಹೂವುಗಳನ್ನು ತಂದು ಅಲಂಕಾರ ಮಾಡುತ್ತೇವೆ’ ಎನ್ನುತ್ತಾರೆ ಪುಷ್ಪಾಲಂಕಾರದ ಸಂಕಲ್ಪ ಮಾಡಿರುವ ಹೂವಿನ ವ್ಯಾಪಾರಿ ನಾಗರಾಜ ಹೂಗಾರ.</p>.<p>ಕೊಂಚ ಬದಲಾವಣೆ ಇರಲಿ ಎಂಬ ಉದ್ದೇಶದಿಂದ ಅನಾನಸ್ ಮತ್ತು ಸೇಬು ಸೇರಿದಂತೆ ಕೆಲವು ಹಣ್ಣುಗಳನ್ನು ಕೂಡ ಈ ಬಾರಿ ಅಲಂಕಾರಕ್ಕೆ ಬಳಸಲಾಗಿದೆ ಎನ್ನುತ್ತಾರೆ ಅವರು.</p>.<p>ಸೌಂದರ್ಯ ಭರಿತ ಹೂವುಗಳು ಮತ್ತು ಪರಿಮಳ ದೇವಾಲಯದ ಆವರಣವನ್ನು ಆಕರ್ಷಣಿಯವಾಗಿಸಿತ್ತು ಎನ್ನುತ್ತಾರೆ ಸಿಬ್ಬಂದಿ. ಪುಷ್ಪಾಲಂಕಾರ ಮತ್ತು ಹರಕೆ ರಥೋತ್ಸವ ನೆರವೇರಿಸಿದ ಜಯಶ್ರೀ–ನಾಗರಾಜ ದಂಪತಿಯನ್ನು ದೇವಸ್ಥಾನದ ಅಧಿಕಾರಿಗಳು ಸನ್ಮಾನಿಸಿದರು.</p>.<p>ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಿಬ್ಬಂದಿ ಗುರುರಾಜ ಪುರೋಹಿತ್, ಸಿದ್ದಪ್ಪ, ಸುಮಾ ಹಾಗೂ ಈರಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>