ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾವರಗೇರಾ | ಸೊರಗುತ್ತಿರುವ ಕನಕನಾಲಾ ಜಲಾಶಯ

ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ಸಾಮರ್ಥ್ಯದ ಜಲಾಶಯ
Last Updated 4 ಜೂನ್ 2020, 13:33 IST
ಅಕ್ಷರ ಗಾತ್ರ

ತಾವರಗೇರಾ (ಕೊಪ್ಪಳ): ಜಿಲ್ಲೆಯ ಗಡಿಭಾಗದಲ್ಲಿರುವ ಕನಕನಾಲಾ ಜಲಾಶಯವು ನಿರ್ವಹಣೆ ಕೊರತೆಯಿಂದ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡು ಸೊರಗುತ್ತಿದೆ.

ಈ ಜಲಾಶಯ ವ್ಯವಸ್ಥಿತವಾಗಿ ನಿರ್ವಹಣೆಗೊಂಡರೆ ಕುಷ್ಟಗಿ ತಾಲೂಕಿಗಿಂತ ಸಿಂಧನೂರ ತಾಲೂಕಿನ ನಾನಾ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಕೃಷಿ ಭೂಮಿಯು ನಿರಾವರಿ ಪ್ರದೇಶವಾಗಿ ಮಾರ್ಪಾಡಗಲಿದೆ.

ಸಮೀಪದ ಕಿಲ್ಲಾರಹಟ್ಟಿ ಗ್ರಾಮದ ಬಳಿ ಇರುವ ಈ ಜಲಾಶಯದ ಕಾಯಕಲ್ಪಕ್ಕಾಗಿ ನೀರಿನಂತೆ ಹಣ ಖುರ್ಚು ಮಾಡಿದ್ದರೂ ಸಹ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಈ ಬಗ್ಗೆ ಹಲವು ಭಾರಿ ಹೋರಾಟ ಮಾಡಿದರೂ ಸಹ ಪರಿಹಾರ ದೊರಕಿಲ್ಲ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.

252 ಹೇಕ್ಟರ್ ಪ್ರದೇಶದ ವಿಸ್ತೀರ್ಣದಲ್ಲಿ, 15,900 ಮೀಟರ್ ಉದ್ದದ 0.225 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟು, 189, 44 ಚದರ ಕೀಮೀ ವ್ಯಾಪ್ತಿಯ 5,100 ಎಕರೆ ಪ್ರದೇಶಕ್ಕೆ ನೀರುಣಿಸುವ ಉದ್ದೇಶ ಹೊಂದಿದೆ.

ತುರ್ತಾಗಿ ಈ ಜಲಾಶಯದ ಆಧುನೀಕರಣಕ್ಕೆ ಕ್ರಮಕೈಗೊಳ್ಳಬೇಕಿದೆ ಎಂದು ಈ ಭಾಗದ ರೈತರು ಆಗ್ರಹಿಸುತ್ತಿದ್ದಾರೆ.

ಜಲಾಶಯದ ಆಧುನೀಕರಣಕ್ಕೆ ಆಗ್ರಹಿಸಿ ಸಿಂಧನೂರ ತಾಲೂಕಿನ ರೈತರು ಹಲವು ಬಾರಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಯಾವುದೇ ಪ್ರಯೋಜನೆ ಆಗಿಲ್ಲ.

ಬೇಡಿಕೆಗಳು: ಕಿಲ್ಲಾರಹಟ್ಟಿಯ ಕನಕನಾಲಾ ಜಲಾಶಯನೀರಿನ ಸಂಗ್ರಹ ಸಾಮರ್ಥ್ಯವನ್ನು 0.225 ಟಿಎಂಸಿಯಿಂದ 0.227 ಟಿಎಂಸಿಗೆ ಹೆಚ್ಚಿಸಬೇಕು. ನೀರು ಹರಿವು ಕಾಲುವೆ (ಅಕ್ವಾಡಕ್ಟ್) ಆಧುನಿಕರಣಗೋಳಿಸಬೇಕು. ಕುಷ್ಟಗಿ ತಾಲೂಕಿನ ಆರ್ಯಬೋಗಾಪೂರದಿಂದ ಜಲಾಶಯದ ವರೆಗೆ ಕಾಲುವೆ ನಿರ್ಮಿಸಬೇಕು. ಕಾಲುವೆಗಳಲ್ಲಿ ನೀರು ಸೋರಿಕೆಯನ್ನು ಆಗುವದನ್ನು ತಡೆಗಟ್ಟಬೇಕು ಎಂಬದು ಈ ಭಾಗದ ಸಾವಿರಾರು ರೈತರ ಬೇಡಿಕೆಗಳಾಗಿವೆ.

ಕನಕನಾಲಾ ಜಲಾಶಯದ ಬಗ್ಗೆ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರ ಮೂಲದ ಕಂಪೆನಿ ಸಮೀಕ್ಷೆ ನಡೆಸಿ ಅಂದಾಜು ₹ 94.54 ಕೋಟಿ ವೆಚ್ಚದ ಯೋಜನೆ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಆ ಬಳಿಕೆ ಮಹತ್ವದ ಬೆಳವಣಿಗೆಗಳು ಆಗಲಿಲ್ಲ ಎಂದು ರೈತರು ಬೇಸರದಿಂದ ಅಸಮಧಾನ ವ್ಯಕ್ತಪಡಿಸುತ್ತಾರೆ.

ಜಲಾಶಯದ ಮಡಿಲಿನ ಪ್ರದೇಶವು ಸದಾ ಹಚ್ಚಹಸಿರಿನಿಂದ ಕೂಡಿರುತ್ತದೆ. ಆದರೆ, ಈ ಭಾಗವನ್ನು ಪ್ರವಾಸೋಧ್ಯಮ ಕೇಂದ್ರವಾಗಿ ಅಭಿವೃದ್ಧಿ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT