<p><strong>ತಾವರಗೇರಾ (ಕೊಪ್ಪಳ):</strong> ಜಿಲ್ಲೆಯ ಗಡಿಭಾಗದಲ್ಲಿರುವ ಕನಕನಾಲಾ ಜಲಾಶಯವು ನಿರ್ವಹಣೆ ಕೊರತೆಯಿಂದ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡು ಸೊರಗುತ್ತಿದೆ.</p>.<p>ಈ ಜಲಾಶಯ ವ್ಯವಸ್ಥಿತವಾಗಿ ನಿರ್ವಹಣೆಗೊಂಡರೆ ಕುಷ್ಟಗಿ ತಾಲೂಕಿಗಿಂತ ಸಿಂಧನೂರ ತಾಲೂಕಿನ ನಾನಾ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಕೃಷಿ ಭೂಮಿಯು ನಿರಾವರಿ ಪ್ರದೇಶವಾಗಿ ಮಾರ್ಪಾಡಗಲಿದೆ.</p>.<p>ಸಮೀಪದ ಕಿಲ್ಲಾರಹಟ್ಟಿ ಗ್ರಾಮದ ಬಳಿ ಇರುವ ಈ ಜಲಾಶಯದ ಕಾಯಕಲ್ಪಕ್ಕಾಗಿ ನೀರಿನಂತೆ ಹಣ ಖುರ್ಚು ಮಾಡಿದ್ದರೂ ಸಹ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಈ ಬಗ್ಗೆ ಹಲವು ಭಾರಿ ಹೋರಾಟ ಮಾಡಿದರೂ ಸಹ ಪರಿಹಾರ ದೊರಕಿಲ್ಲ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.</p>.<p>252 ಹೇಕ್ಟರ್ ಪ್ರದೇಶದ ವಿಸ್ತೀರ್ಣದಲ್ಲಿ, 15,900 ಮೀಟರ್ ಉದ್ದದ 0.225 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟು, 189, 44 ಚದರ ಕೀಮೀ ವ್ಯಾಪ್ತಿಯ 5,100 ಎಕರೆ ಪ್ರದೇಶಕ್ಕೆ ನೀರುಣಿಸುವ ಉದ್ದೇಶ ಹೊಂದಿದೆ.</p>.<p>ತುರ್ತಾಗಿ ಈ ಜಲಾಶಯದ ಆಧುನೀಕರಣಕ್ಕೆ ಕ್ರಮಕೈಗೊಳ್ಳಬೇಕಿದೆ ಎಂದು ಈ ಭಾಗದ ರೈತರು ಆಗ್ರಹಿಸುತ್ತಿದ್ದಾರೆ.</p>.<p>ಜಲಾಶಯದ ಆಧುನೀಕರಣಕ್ಕೆ ಆಗ್ರಹಿಸಿ ಸಿಂಧನೂರ ತಾಲೂಕಿನ ರೈತರು ಹಲವು ಬಾರಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಯಾವುದೇ ಪ್ರಯೋಜನೆ ಆಗಿಲ್ಲ.</p>.<p><strong>ಬೇಡಿಕೆಗಳು: </strong>ಕಿಲ್ಲಾರಹಟ್ಟಿಯ ಕನಕನಾಲಾ ಜಲಾಶಯನೀರಿನ ಸಂಗ್ರಹ ಸಾಮರ್ಥ್ಯವನ್ನು 0.225 ಟಿಎಂಸಿಯಿಂದ 0.227 ಟಿಎಂಸಿಗೆ ಹೆಚ್ಚಿಸಬೇಕು. ನೀರು ಹರಿವು ಕಾಲುವೆ (ಅಕ್ವಾಡಕ್ಟ್) ಆಧುನಿಕರಣಗೋಳಿಸಬೇಕು. ಕುಷ್ಟಗಿ ತಾಲೂಕಿನ ಆರ್ಯಬೋಗಾಪೂರದಿಂದ ಜಲಾಶಯದ ವರೆಗೆ ಕಾಲುವೆ ನಿರ್ಮಿಸಬೇಕು. ಕಾಲುವೆಗಳಲ್ಲಿ ನೀರು ಸೋರಿಕೆಯನ್ನು ಆಗುವದನ್ನು ತಡೆಗಟ್ಟಬೇಕು ಎಂಬದು ಈ ಭಾಗದ ಸಾವಿರಾರು ರೈತರ ಬೇಡಿಕೆಗಳಾಗಿವೆ.</p>.<p>ಕನಕನಾಲಾ ಜಲಾಶಯದ ಬಗ್ಗೆ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರ ಮೂಲದ ಕಂಪೆನಿ ಸಮೀಕ್ಷೆ ನಡೆಸಿ ಅಂದಾಜು ₹ 94.54 ಕೋಟಿ ವೆಚ್ಚದ ಯೋಜನೆ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಆ ಬಳಿಕೆ ಮಹತ್ವದ ಬೆಳವಣಿಗೆಗಳು ಆಗಲಿಲ್ಲ ಎಂದು ರೈತರು ಬೇಸರದಿಂದ ಅಸಮಧಾನ ವ್ಯಕ್ತಪಡಿಸುತ್ತಾರೆ.</p>.<p>ಜಲಾಶಯದ ಮಡಿಲಿನ ಪ್ರದೇಶವು ಸದಾ ಹಚ್ಚಹಸಿರಿನಿಂದ ಕೂಡಿರುತ್ತದೆ. ಆದರೆ, ಈ ಭಾಗವನ್ನು ಪ್ರವಾಸೋಧ್ಯಮ ಕೇಂದ್ರವಾಗಿ ಅಭಿವೃದ್ಧಿ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾವರಗೇರಾ (ಕೊಪ್ಪಳ):</strong> ಜಿಲ್ಲೆಯ ಗಡಿಭಾಗದಲ್ಲಿರುವ ಕನಕನಾಲಾ ಜಲಾಶಯವು ನಿರ್ವಹಣೆ ಕೊರತೆಯಿಂದ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡು ಸೊರಗುತ್ತಿದೆ.</p>.<p>ಈ ಜಲಾಶಯ ವ್ಯವಸ್ಥಿತವಾಗಿ ನಿರ್ವಹಣೆಗೊಂಡರೆ ಕುಷ್ಟಗಿ ತಾಲೂಕಿಗಿಂತ ಸಿಂಧನೂರ ತಾಲೂಕಿನ ನಾನಾ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಕೃಷಿ ಭೂಮಿಯು ನಿರಾವರಿ ಪ್ರದೇಶವಾಗಿ ಮಾರ್ಪಾಡಗಲಿದೆ.</p>.<p>ಸಮೀಪದ ಕಿಲ್ಲಾರಹಟ್ಟಿ ಗ್ರಾಮದ ಬಳಿ ಇರುವ ಈ ಜಲಾಶಯದ ಕಾಯಕಲ್ಪಕ್ಕಾಗಿ ನೀರಿನಂತೆ ಹಣ ಖುರ್ಚು ಮಾಡಿದ್ದರೂ ಸಹ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಈ ಬಗ್ಗೆ ಹಲವು ಭಾರಿ ಹೋರಾಟ ಮಾಡಿದರೂ ಸಹ ಪರಿಹಾರ ದೊರಕಿಲ್ಲ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.</p>.<p>252 ಹೇಕ್ಟರ್ ಪ್ರದೇಶದ ವಿಸ್ತೀರ್ಣದಲ್ಲಿ, 15,900 ಮೀಟರ್ ಉದ್ದದ 0.225 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟು, 189, 44 ಚದರ ಕೀಮೀ ವ್ಯಾಪ್ತಿಯ 5,100 ಎಕರೆ ಪ್ರದೇಶಕ್ಕೆ ನೀರುಣಿಸುವ ಉದ್ದೇಶ ಹೊಂದಿದೆ.</p>.<p>ತುರ್ತಾಗಿ ಈ ಜಲಾಶಯದ ಆಧುನೀಕರಣಕ್ಕೆ ಕ್ರಮಕೈಗೊಳ್ಳಬೇಕಿದೆ ಎಂದು ಈ ಭಾಗದ ರೈತರು ಆಗ್ರಹಿಸುತ್ತಿದ್ದಾರೆ.</p>.<p>ಜಲಾಶಯದ ಆಧುನೀಕರಣಕ್ಕೆ ಆಗ್ರಹಿಸಿ ಸಿಂಧನೂರ ತಾಲೂಕಿನ ರೈತರು ಹಲವು ಬಾರಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಯಾವುದೇ ಪ್ರಯೋಜನೆ ಆಗಿಲ್ಲ.</p>.<p><strong>ಬೇಡಿಕೆಗಳು: </strong>ಕಿಲ್ಲಾರಹಟ್ಟಿಯ ಕನಕನಾಲಾ ಜಲಾಶಯನೀರಿನ ಸಂಗ್ರಹ ಸಾಮರ್ಥ್ಯವನ್ನು 0.225 ಟಿಎಂಸಿಯಿಂದ 0.227 ಟಿಎಂಸಿಗೆ ಹೆಚ್ಚಿಸಬೇಕು. ನೀರು ಹರಿವು ಕಾಲುವೆ (ಅಕ್ವಾಡಕ್ಟ್) ಆಧುನಿಕರಣಗೋಳಿಸಬೇಕು. ಕುಷ್ಟಗಿ ತಾಲೂಕಿನ ಆರ್ಯಬೋಗಾಪೂರದಿಂದ ಜಲಾಶಯದ ವರೆಗೆ ಕಾಲುವೆ ನಿರ್ಮಿಸಬೇಕು. ಕಾಲುವೆಗಳಲ್ಲಿ ನೀರು ಸೋರಿಕೆಯನ್ನು ಆಗುವದನ್ನು ತಡೆಗಟ್ಟಬೇಕು ಎಂಬದು ಈ ಭಾಗದ ಸಾವಿರಾರು ರೈತರ ಬೇಡಿಕೆಗಳಾಗಿವೆ.</p>.<p>ಕನಕನಾಲಾ ಜಲಾಶಯದ ಬಗ್ಗೆ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಬೆಂಗಳೂರ ಮೂಲದ ಕಂಪೆನಿ ಸಮೀಕ್ಷೆ ನಡೆಸಿ ಅಂದಾಜು ₹ 94.54 ಕೋಟಿ ವೆಚ್ಚದ ಯೋಜನೆ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಆ ಬಳಿಕೆ ಮಹತ್ವದ ಬೆಳವಣಿಗೆಗಳು ಆಗಲಿಲ್ಲ ಎಂದು ರೈತರು ಬೇಸರದಿಂದ ಅಸಮಧಾನ ವ್ಯಕ್ತಪಡಿಸುತ್ತಾರೆ.</p>.<p>ಜಲಾಶಯದ ಮಡಿಲಿನ ಪ್ರದೇಶವು ಸದಾ ಹಚ್ಚಹಸಿರಿನಿಂದ ಕೂಡಿರುತ್ತದೆ. ಆದರೆ, ಈ ಭಾಗವನ್ನು ಪ್ರವಾಸೋಧ್ಯಮ ಕೇಂದ್ರವಾಗಿ ಅಭಿವೃದ್ಧಿ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>