<p><strong>ಕಾರಟಗಿ: </strong>ತಾಲ್ಲೂಕಿನ ನಾಗಕಲ್ನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಕೊರೊನಾ ಸೋಂಕಿತರು ಭಾನುವಾರ ಪ್ರತಿಭಟನೆ ನಡೆಸಿದರು.</p>.<p>‘ನಿರಂತರವಾಗಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಕೇಂದ್ರದಲ್ಲಿದ್ದ ಐದಾರು ಗ್ರಾಮಗಳ ಸೋಂಕಿತರು ಇದರ ಸಹವಾಸವೇ ಬೇಡ ಎಂದು ಮನೆಗೆ ತೆರಳುವ ವಿಫಲ ಯತ್ನ ನಡೆಸಿದ್ದರು. ಅಲ್ಲದೆ, ಇಲ್ಲಿಯ ಆಹಾರ ಸೇವಿಸಿ ಕೆಲವರು ವಾಂತಿ ಮಾಡಿಕೊಂಡಿದ್ದರು’ ಎಂದು ಸೋಂಕಿತರೊಬ್ಬರು ದೂರಿದರು.</p>.<p>ಕೇಂದ್ರದಲ್ಲಿ ಬೂದುಗುಂಪಾ, ಚಳ್ಳೂರು, ಸೋಮನಾಳ, ಚಳ್ಳೂರ ಕ್ಯಾಂಪ್, ಮೈಲಾಪುರ ಹಾಗೂ ತೊಂಡಿಹಾಳ ಕ್ಯಾಂಪ್ನ 20ಕ್ಕೂ ಹೆಚ್ಚು ಸೋಂಕಿತರಿದ್ದಾರೆ.</p>.<p>ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕೇಂದ್ರದ ನಿರ್ವಹಣೆ ಮಾಡುತ್ತಿದ್ದಾರೆ.</p>.<p>‘ನಮ್ಮನ್ನು ಯಾರೂ ಕೇಳದಂತಾಗಿದೆ. ನರಕದಲ್ಲಿದ್ದ ಅನುಭವ ಆಗುತ್ತಿದೆ ಎಂದು ಕೆಲ ಸೋಂಕಿತರು ವಿವರಿಸಿ, ಇಲ್ಲಿಂದ ಯಾವಾಗ ಬಿಡುಗಡೆಯಾಗುತ್ತೇವೆಯೋ’ ಎಂದು ಆತಂಕದಿಂದ ಪ್ರತಿಕ್ರಿಯಿಸಿದರು.</p>.<p>ನಾಗನಕಲ್ ಗ್ರಾಮದಿಂದ ಪೂರೈಕೆಯಾಗುತ್ತಿದ್ದ ಊಟ ಚೆನ್ನಾಗಿತ್ತು. ಕಾರಟಗಿ ಖಾನಾವಳಿಯಿಂದ ಈಗ ಊಟ ಬರುತ್ತಿದ್ದು, ತೀರಾ ಕಳಪೆಯಾಗಿದೆ. ಇದೇ ರೀತಿ ಊಟ ನೀಡಿದರೆ ನಾವು ಹೊರಗೆ ಹೋಗುತ್ತೇವೆ ಎಂದು ಮೈಲಾಪುರ ಮತ್ತು ಬೂದುಗುಂಪಾ ಗ್ರಾಮದ ಸೋಂಕಿತರಿಬ್ಬರು ಎಚ್ಚರಿಕೆ ನೀಡಿದ್ದರು.</p>.<p>ಅಧಿಕಾರಿಗಳು ಬಂದು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.</p>.<p>ತಾಲ್ಲೂಕು ಪಂಚಾಯಿತಿ ಇಒ ಪ್ರತಿಕ್ರಿಯಿಸಿ,‘ಶುಕ್ರವಾರದಿಂದ ಸಂತ್ರಸ್ತರಿಗೆ ಕಳಪೆ ಗುಣಮಟ್ಟದ ಊಟ ಪೂರೈಕೆಯಾಗಿದ್ದು ಗಮನಕ್ಕೆ ಬಂದಿದೆ. ಊಟ ಪೂರೈಕೆ ಮಾಡುತ್ತಿರುವ ಕಾರಟಗಿ ಖಾನಾವಳಿಯವರಿಗೆ ಎಚ್ಚರಿಕೆ ನೀಡಲಾಗಿದೆ. ಸೋಮವಾರದಿಂದ ಉತ್ತಮ ಊಟ ಪೂರೈಕೆಯಾಗಿದೆ. ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ: </strong>ತಾಲ್ಲೂಕಿನ ನಾಗಕಲ್ನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಕೊರೊನಾ ಸೋಂಕಿತರು ಭಾನುವಾರ ಪ್ರತಿಭಟನೆ ನಡೆಸಿದರು.</p>.<p>‘ನಿರಂತರವಾಗಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಕೇಂದ್ರದಲ್ಲಿದ್ದ ಐದಾರು ಗ್ರಾಮಗಳ ಸೋಂಕಿತರು ಇದರ ಸಹವಾಸವೇ ಬೇಡ ಎಂದು ಮನೆಗೆ ತೆರಳುವ ವಿಫಲ ಯತ್ನ ನಡೆಸಿದ್ದರು. ಅಲ್ಲದೆ, ಇಲ್ಲಿಯ ಆಹಾರ ಸೇವಿಸಿ ಕೆಲವರು ವಾಂತಿ ಮಾಡಿಕೊಂಡಿದ್ದರು’ ಎಂದು ಸೋಂಕಿತರೊಬ್ಬರು ದೂರಿದರು.</p>.<p>ಕೇಂದ್ರದಲ್ಲಿ ಬೂದುಗುಂಪಾ, ಚಳ್ಳೂರು, ಸೋಮನಾಳ, ಚಳ್ಳೂರ ಕ್ಯಾಂಪ್, ಮೈಲಾಪುರ ಹಾಗೂ ತೊಂಡಿಹಾಳ ಕ್ಯಾಂಪ್ನ 20ಕ್ಕೂ ಹೆಚ್ಚು ಸೋಂಕಿತರಿದ್ದಾರೆ.</p>.<p>ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕೇಂದ್ರದ ನಿರ್ವಹಣೆ ಮಾಡುತ್ತಿದ್ದಾರೆ.</p>.<p>‘ನಮ್ಮನ್ನು ಯಾರೂ ಕೇಳದಂತಾಗಿದೆ. ನರಕದಲ್ಲಿದ್ದ ಅನುಭವ ಆಗುತ್ತಿದೆ ಎಂದು ಕೆಲ ಸೋಂಕಿತರು ವಿವರಿಸಿ, ಇಲ್ಲಿಂದ ಯಾವಾಗ ಬಿಡುಗಡೆಯಾಗುತ್ತೇವೆಯೋ’ ಎಂದು ಆತಂಕದಿಂದ ಪ್ರತಿಕ್ರಿಯಿಸಿದರು.</p>.<p>ನಾಗನಕಲ್ ಗ್ರಾಮದಿಂದ ಪೂರೈಕೆಯಾಗುತ್ತಿದ್ದ ಊಟ ಚೆನ್ನಾಗಿತ್ತು. ಕಾರಟಗಿ ಖಾನಾವಳಿಯಿಂದ ಈಗ ಊಟ ಬರುತ್ತಿದ್ದು, ತೀರಾ ಕಳಪೆಯಾಗಿದೆ. ಇದೇ ರೀತಿ ಊಟ ನೀಡಿದರೆ ನಾವು ಹೊರಗೆ ಹೋಗುತ್ತೇವೆ ಎಂದು ಮೈಲಾಪುರ ಮತ್ತು ಬೂದುಗುಂಪಾ ಗ್ರಾಮದ ಸೋಂಕಿತರಿಬ್ಬರು ಎಚ್ಚರಿಕೆ ನೀಡಿದ್ದರು.</p>.<p>ಅಧಿಕಾರಿಗಳು ಬಂದು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.</p>.<p>ತಾಲ್ಲೂಕು ಪಂಚಾಯಿತಿ ಇಒ ಪ್ರತಿಕ್ರಿಯಿಸಿ,‘ಶುಕ್ರವಾರದಿಂದ ಸಂತ್ರಸ್ತರಿಗೆ ಕಳಪೆ ಗುಣಮಟ್ಟದ ಊಟ ಪೂರೈಕೆಯಾಗಿದ್ದು ಗಮನಕ್ಕೆ ಬಂದಿದೆ. ಊಟ ಪೂರೈಕೆ ಮಾಡುತ್ತಿರುವ ಕಾರಟಗಿ ಖಾನಾವಳಿಯವರಿಗೆ ಎಚ್ಚರಿಕೆ ನೀಡಲಾಗಿದೆ. ಸೋಮವಾರದಿಂದ ಉತ್ತಮ ಊಟ ಪೂರೈಕೆಯಾಗಿದೆ. ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>