<p><strong>ಕಾರಟಗಿ</strong>: ಇಲ್ಲಿಯ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಒಬ್ಬರನ್ನು ವರ್ಗಾವಣೆ ಮಾಡಿರುವುದಕ್ಕೆ ಅವರ ಕುಟುಂಬ ವರ್ಗದವರು ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.</p>.<p>ಪೊಲೀಸ್ ಕಾನ್ಸ್ಟೆಬಲ್ ಸುರೇಶ ಎಂಬುವವರನ್ನು ಇಲ್ಲಿಂದ ಜಿಲ್ಲೆಯ ಹನುಮಸಾಗರ ಠಾಣೆಗೆ ವರ್ಗಾವಣೆ ಮಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ವರ್ಗಾವಣೆ ರದ್ದು ಮಾಡುವಂತೆ ಒತ್ತಾಯಿಸಿ ಕಾನ್ಸ್ಟೆಬಲ್ ತಮ್ಮ, ತಾಯಿ, ಮಗ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸಕ್ಕೆ ಆಗಮಿಸಿ, ಪ್ರತಿಭಟನೆಗಿಳಿದಿದ್ದರು.</p>.<p>ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯೊಂದಿಗೆ ಆಗಮಿಸಿ, ಸಚಿವರ ಅನುಪಸ್ಥಿತಿಯಲ್ಲಿ ಹೀಗೆ ಮಾಡುವುದು ತರವಲ್ಲ, ಠಾಣೆಗೆ ಬಂದು ಚರ್ಚಿಸಿರಿ ಎಂದು ಮನವೊಲಿಸಿ ಠಾಣೆಗೆ ಕರೆದುಕೊಂಡು ಹೋದ ಬಗ್ಗೆ ವರದಿಯಾಗಿದೆ.<br> ನಮ್ಮ ಸಿಬ್ಬಂದಿ ಸಚಿವರ ಮನೆಗೆ ಹೋಗಿಲ್ಲ, ಅವರ ಕುಟುಂಬದವರು ಹೋಗಿದ್ದರು. ಅವರ ಮನವೊಲಿಸಿ ಠಾಣೆಗೆ ಕರೆತಂದು ತಿಳಿವಳಿಕೆ ನೀಡಿ ಮನೆಗೆ ಕಳುಹಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು.</p>.<p>ಸಚಿವರ ಆಪ್ತ ಸಹಾಯಕ ಇನಾಯತ್ ಪ್ರತಿಕ್ರಿಯಿಸಿ, ‘ಸಚಿವರು ಇಲ್ಲದಾಗ ಬಂದು ಹೀಗೆ ವರ್ತಿಸುವುದು ತರವಲ್ಲ. ಅವರು ಬಂದಾಗ ಬನ್ನಿರಿ ಎಂದು ತಿಳಿಹೇಳಿದೆ. ಅಷ್ಟರಲ್ಲೇ ಪೊಲೀಸರು ಆಗಮಿಸಿ ಅವರನ್ನು ಕರೆದುಕೊಂಡು ಹೋದರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ</strong>: ಇಲ್ಲಿಯ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಒಬ್ಬರನ್ನು ವರ್ಗಾವಣೆ ಮಾಡಿರುವುದಕ್ಕೆ ಅವರ ಕುಟುಂಬ ವರ್ಗದವರು ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.</p>.<p>ಪೊಲೀಸ್ ಕಾನ್ಸ್ಟೆಬಲ್ ಸುರೇಶ ಎಂಬುವವರನ್ನು ಇಲ್ಲಿಂದ ಜಿಲ್ಲೆಯ ಹನುಮಸಾಗರ ಠಾಣೆಗೆ ವರ್ಗಾವಣೆ ಮಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ವರ್ಗಾವಣೆ ರದ್ದು ಮಾಡುವಂತೆ ಒತ್ತಾಯಿಸಿ ಕಾನ್ಸ್ಟೆಬಲ್ ತಮ್ಮ, ತಾಯಿ, ಮಗ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸಕ್ಕೆ ಆಗಮಿಸಿ, ಪ್ರತಿಭಟನೆಗಿಳಿದಿದ್ದರು.</p>.<p>ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯೊಂದಿಗೆ ಆಗಮಿಸಿ, ಸಚಿವರ ಅನುಪಸ್ಥಿತಿಯಲ್ಲಿ ಹೀಗೆ ಮಾಡುವುದು ತರವಲ್ಲ, ಠಾಣೆಗೆ ಬಂದು ಚರ್ಚಿಸಿರಿ ಎಂದು ಮನವೊಲಿಸಿ ಠಾಣೆಗೆ ಕರೆದುಕೊಂಡು ಹೋದ ಬಗ್ಗೆ ವರದಿಯಾಗಿದೆ.<br> ನಮ್ಮ ಸಿಬ್ಬಂದಿ ಸಚಿವರ ಮನೆಗೆ ಹೋಗಿಲ್ಲ, ಅವರ ಕುಟುಂಬದವರು ಹೋಗಿದ್ದರು. ಅವರ ಮನವೊಲಿಸಿ ಠಾಣೆಗೆ ಕರೆತಂದು ತಿಳಿವಳಿಕೆ ನೀಡಿ ಮನೆಗೆ ಕಳುಹಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು.</p>.<p>ಸಚಿವರ ಆಪ್ತ ಸಹಾಯಕ ಇನಾಯತ್ ಪ್ರತಿಕ್ರಿಯಿಸಿ, ‘ಸಚಿವರು ಇಲ್ಲದಾಗ ಬಂದು ಹೀಗೆ ವರ್ತಿಸುವುದು ತರವಲ್ಲ. ಅವರು ಬಂದಾಗ ಬನ್ನಿರಿ ಎಂದು ತಿಳಿಹೇಳಿದೆ. ಅಷ್ಟರಲ್ಲೇ ಪೊಲೀಸರು ಆಗಮಿಸಿ ಅವರನ್ನು ಕರೆದುಕೊಂಡು ಹೋದರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>