<p><strong>ಮುನಿರಾಬಾದ್</strong>: ತುಂಗಭದ್ರಾ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಭತ್ತದ ಕಟಾವು ಭರದಿಂದ ಸಾಗಿದ್ದು, ಭತ್ತ ಕಟಾವು ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಗದ್ದೆಗಳಲ್ಲಿ ಬೆಳೆದು ನಿಂತ ಭತ್ತದ ಪೈರು ಕಟಾವು ನಡೆಯುತ್ತಿದ್ದು, ಮತ್ತೊಂದು ಕಡೆ ಎರಡನೇ ಬೆಳೆಗೆ ಭತ್ತದ ಸಸಿಗಳನ್ನು ಬೆಳೆಸಲಾಗುತ್ತಿದೆ.</p>.<p><strong>ಭತ್ತ ಕಟಾವು ಯಂತ್ರಕ್ಕೆ ಬೇಡಿಕೆ:</strong> </p><p>ಕಟಾವಿಗೆ ಯಂತ್ರವನ್ನೇ ಅವಲಂಬಿಸಿರುವ ರೈತರು ತಮಿಳುನಾಡು ಮೂಲದಿಂದ ಬರುವ ಯಂತ್ರಗಳಿಗೆ ಕಾಯುತ್ತಿದ್ದಾರೆ. ಕಳೆದ ವರ್ಷ ಗಂಟೆಗೆ ₹2,400 ಇದ್ದ ಕಟಾವು ದರ ಈ ವರ್ಷ ₹ 2,800ಕ್ಕೆ ಏರಿಕೆಯಾಗಿದೆ. ಯಂತ್ರಗಳು ಕೂಡ ಕಡಿಮೆ ಪ್ರಮಾಣದಲ್ಲಿ ಲಭ್ಯ ಇವೆ.</p>.<p><strong>ಭತ್ತದ ದರ ಕುಸಿತ:</strong> </p><p>ಕಳೆದ ವರ್ಷ ₹2,200 ರಿಂದ ₹2,400(75 ಕಿಲೋ ಗ್ರಾಮ್ ತೂಕದ ಚೀಲಕ್ಕೆ) ಇದ್ದ ದರ, ಈ ಬಾರಿ ₹1,700 ರಿಂದ ₹1,900 ಮಾರುಕಟ್ಟೆ ದರ ಇದ್ದು, ಭತ್ತದ ಕಟಾವಿಗೆ ರೈತ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಅಗಳಕೇರಾ ಗ್ರಾಮದ ಶರಣಬಸವೇಶ್ವರ ರೈತ ಶಕ್ತಿ ಗುಂಪಿನ ಶರಣಬಸಪ್ಪ ಆನೆಗುಂದಿ ಹೇಳುತ್ತಾರೆ.</p>.<p>ಈ ಭಾಗದಲ್ಲಿ ಸಾಮಾನ್ಯವಾಗಿ ಆರ್ಎನ್ಆರ್, ಸೋನಾ, 1632 ತಳಿಯು ಜನಪ್ರಿಯವಾಗಿದ್ದು ಹೆಚ್ಚು ಸಂಖ್ಯೆಯಲ್ಲಿ ರೈತರು ಇದೇ ತಳಿಯ ಭತ್ತವನ್ನು ಬೆಳೆಯುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ತುಂಬಿದ್ದು, ಎರಡನೇ ಬೆಳೆಗೆ ನಿರಾತಂಕವಾಗಿ ರೈತರು ತಯಾರಿ ನಡೆಸಿದ್ದಾರೆ. 25-30 ದಿನದ ಸಸಿಗಳನ್ನು ಡಿಸೆಂಬರ್ ತಿಂಗಳಾಂತ್ಯಕ್ಕೆ ನಾಟಿ ಮಾಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನಿರಾಬಾದ್</strong>: ತುಂಗಭದ್ರಾ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಭತ್ತದ ಕಟಾವು ಭರದಿಂದ ಸಾಗಿದ್ದು, ಭತ್ತ ಕಟಾವು ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಗದ್ದೆಗಳಲ್ಲಿ ಬೆಳೆದು ನಿಂತ ಭತ್ತದ ಪೈರು ಕಟಾವು ನಡೆಯುತ್ತಿದ್ದು, ಮತ್ತೊಂದು ಕಡೆ ಎರಡನೇ ಬೆಳೆಗೆ ಭತ್ತದ ಸಸಿಗಳನ್ನು ಬೆಳೆಸಲಾಗುತ್ತಿದೆ.</p>.<p><strong>ಭತ್ತ ಕಟಾವು ಯಂತ್ರಕ್ಕೆ ಬೇಡಿಕೆ:</strong> </p><p>ಕಟಾವಿಗೆ ಯಂತ್ರವನ್ನೇ ಅವಲಂಬಿಸಿರುವ ರೈತರು ತಮಿಳುನಾಡು ಮೂಲದಿಂದ ಬರುವ ಯಂತ್ರಗಳಿಗೆ ಕಾಯುತ್ತಿದ್ದಾರೆ. ಕಳೆದ ವರ್ಷ ಗಂಟೆಗೆ ₹2,400 ಇದ್ದ ಕಟಾವು ದರ ಈ ವರ್ಷ ₹ 2,800ಕ್ಕೆ ಏರಿಕೆಯಾಗಿದೆ. ಯಂತ್ರಗಳು ಕೂಡ ಕಡಿಮೆ ಪ್ರಮಾಣದಲ್ಲಿ ಲಭ್ಯ ಇವೆ.</p>.<p><strong>ಭತ್ತದ ದರ ಕುಸಿತ:</strong> </p><p>ಕಳೆದ ವರ್ಷ ₹2,200 ರಿಂದ ₹2,400(75 ಕಿಲೋ ಗ್ರಾಮ್ ತೂಕದ ಚೀಲಕ್ಕೆ) ಇದ್ದ ದರ, ಈ ಬಾರಿ ₹1,700 ರಿಂದ ₹1,900 ಮಾರುಕಟ್ಟೆ ದರ ಇದ್ದು, ಭತ್ತದ ಕಟಾವಿಗೆ ರೈತ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಅಗಳಕೇರಾ ಗ್ರಾಮದ ಶರಣಬಸವೇಶ್ವರ ರೈತ ಶಕ್ತಿ ಗುಂಪಿನ ಶರಣಬಸಪ್ಪ ಆನೆಗುಂದಿ ಹೇಳುತ್ತಾರೆ.</p>.<p>ಈ ಭಾಗದಲ್ಲಿ ಸಾಮಾನ್ಯವಾಗಿ ಆರ್ಎನ್ಆರ್, ಸೋನಾ, 1632 ತಳಿಯು ಜನಪ್ರಿಯವಾಗಿದ್ದು ಹೆಚ್ಚು ಸಂಖ್ಯೆಯಲ್ಲಿ ರೈತರು ಇದೇ ತಳಿಯ ಭತ್ತವನ್ನು ಬೆಳೆಯುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ತುಂಬಿದ್ದು, ಎರಡನೇ ಬೆಳೆಗೆ ನಿರಾತಂಕವಾಗಿ ರೈತರು ತಯಾರಿ ನಡೆಸಿದ್ದಾರೆ. 25-30 ದಿನದ ಸಸಿಗಳನ್ನು ಡಿಸೆಂಬರ್ ತಿಂಗಳಾಂತ್ಯಕ್ಕೆ ನಾಟಿ ಮಾಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>