ಕೃಷಿಯ ಸುಸ್ಥಿರತೆಗಾಗಿ ನವೀನ ತಂತ್ರಜ್ಞಾನದ ಮೂಲಕ ಜಲಾನಯನ ಪ್ರದೇಶವನ್ನು ಪುನಶ್ಚೇತನಗೊಳಿಸುವದು ಹಾಗೂ ಮಣ್ಣಿನ ವಿಧ, ಮಣ್ಣಿನ ರಚನೆ, ಭೂ ಸವಕಳಿ ತಡೆಯುವದು , ಜಮೀನುಗಳಲ್ಲಿ ಬದು ನಿರ್ಮಾಣ, ಅಚಗಟ್ಟೆ ನಿರ್ಮಾಣ ಮಾಡುವದು, ಜಮೀನು ಸಮತಟ್ಟು ಆಗಿ ನೀರು ನಿಲ್ಲವಂತೆ ಮಾಡುವದು ರಿವಾರ್ಡ ಯೋಜನೆಯ ಮೂಲ ಉದ್ದೇಶವಾಗಿದೆ, ಜೊತೆಗೆ ಜಲಾನಯನ ವ್ಯಾಪ್ತಿಯ ರೈತರು ಬದುಗಳಲ್ಲಿ ಗಿಡಗಳನ್ನು ನೆಡಲು ಸಹ ಅನೂಕೂಲ ಮಾಡಿಕೊಡಲಾಗುತ್ತಿದೆ. ಗಿಡ ನೆಡುವದರಿಂದ ಆರ್ಥಿಕ ಲಾಭ ಕೂಡ ಆಗಲಿದೆ ಎಂದರು.