ಮಳೆಗಿಂತ ಗಾಳಿ, ಸಿಡಿಲು, ಗುಡುಗಿನ ಆರ್ಭಟ ಜೋರಾಗಿದ್ದರಿಂದ ವಿದ್ಯುತ್ ಕಂಬಗಳಿಗೇ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ತಿಳಿದಿದೆ. ಮದಲಗಟ್ಟಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಪರಿವರ್ತಕ ಸಹಿತ ಕಂಬಗಳು ಮುರಿದುಬಿದ್ದಿವೆ. ಅನೇಕ ನರ್ಸರಿಗಳಿಗೂ ಹಾನಿಯಾಗಿದೆ. ಗಿಡಮರಗಳ ಕೊಂಬೆಗಳು ಎಲ್ಲೆಂದರಲ್ಲಿ ಮುರಿದುಬಿದ್ದಿವೆ. ಇನ್ನೂ ಅನೇಕ ಗ್ರಾಮಗಳಲ್ಲಿಯೂ ಇದೇ ರೀತಿ ಹಾನಿ ಸಂಭವಿಸಿದೆ. ಆದರೆ ಎಲ್ಲಿಯೂ ಪ್ರಾಣಾಪಾಯವಾದ ವರದಿಯಾಗಿಲ್ಲ.