<p><strong>ಗಂಗಾವತಿ</strong>: ತಾಲ್ಲೂಕಿನ ಆನೆಗೊಂದಿ ಗ್ರಾಮದ ಶ್ರೀರಂಗ ನಾಥಸ್ವಾಮಿ ದೇವರ ರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.</p>.<p>ರಂಗನಾಥಸ್ವಾಮಿ ದೇವರ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ನಡೆಯಲಿದ್ದು, ಅದರಲ್ಲಿ ಮೊದಲ ದಿನ ಗುರುವಾರ ಆನೆಗೊಂದಿ ಕೃಷ್ಣ ದೇವರಾಯನ ಮನೆತನದಿಂದ ಅಂಕುರಾರ್ಪಣೆ, ಧ್ವಜಾರೋಹಣದ ಜೊತೆಗೆ ರಾತ್ರಿ ಕಲ್ಯಾಣೋತ್ಸವ ನಡೆಯಿತು.</p>.<p>ಶುಕ್ರವಾರ ಬೆಳಿಗ್ಗೆ ಮತ್ತು ಸಂಜೆ ಗ್ರಾಮದಲ್ಲಿ ಗರುಡೋತ್ಸವ ಮಾಡಲಾಯಿತು. ಶನಿವಾರ ಬೆಳಿಗ್ಗೆ ರಂಗನಾಥ ದೇವಸ್ಥಾನವನ್ನು ತೆಂಗಿನಗರಿ, ಬಾಳೆದಿಂಡು, ಚೆಂಡೂ, ಮಾವಿನ ತೋರಣಗಳಿಂದ ಅಲಂಕರಿಸಿ, ವಿವಿಧ ರೀತಿಯ ಧಾರ್ಮಿಕ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿ, ಬ್ರಹ್ಮರಥೋತ್ಸವ ನಡೆಸಲಾಯಿತು.</p>.<p>ರಥೋತ್ಸವಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದವಾಗಿ ಊಟ ನೀಡಲಾಯಿತು. ಸಂಜೆ ರಾಜ ಮನೆತನದವರ ಸಮ್ಮುಖದಲ್ಲಿ ದೇವಸ್ಥಾನ ಧ್ವಜಪಠ ಹರಾಜು ಮಾಡಿ, ಆ ಧ್ವಜ ರಥಕ್ಕೆ ಕಟ್ಟಿ ತೆರು ಎಳೆಯಲಾಯಿತು. ನಂತರ ರಂಗನಾಥ ದೇವರನ್ನು ಗ್ರಾಮದ ರಾಜಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಮಾಡಲಾಯಿತು.</p>.<p>ಈ ವೇಳೆಯಲ್ಲಿ ಸಾಣಾಪುರ, ಹನುಮನಹಳ್ಳಿ, ರಂಗಾಪುರ, ಚಿಕ್ಕರಾಂಪುರ, ಆನೆಗೊಂದಿ, ಕಡೆಬಾಗಿಲು, ಬಸವನ ದುರ್ಗಾ, ಬಂಡಿಬಸಪ್ಪ ಕ್ಯಾಂಪ್, ಸಂಗಾಪುರ ಗ್ರಾಮಗಳ ಭಕ್ತರು ತೇರಿಗೆ ಬಾಳೆಹಣ್ಣು, ಉತ್ತತ್ತಿ ಎಸೆದರು.</p>.<p>ಜಾತ್ರೆಯಲ್ಲಿ ಮಹಿಳೆಯರು ತರಹೇವಾರಿ ಬಳೆ, ಓಲೆ, ಸರ ಖರೀದಿಸಿದರು. ಇನ್ನೂ ಕೆಲ ಮಕ್ಕಳು ಬಲೂನು, ಬೊಂಬೆ, ಆಟದ ಸಾಮಗ್ರಿ ಖರೀದಿಸಿ, ಖುಷಿಪಟ್ಟರೆ, ಇನ್ನೂ ಕೆಲ ಮಕ್ಕಳು ಜಪಿಂಗ್ ಆಟ, ಜೈಯಿಂಟ್ ವೀಲ್ ಆಡಿ ಖುಷಿಪಟ್ಟರು.</p>.<p>ಜಾತ್ರೆಯಲ್ಲಿ ಹುಲಿ, ಅನೆ, ಮೊಲ ಜೊತೆಗೆ 1ರ ಸಂಖ್ಯೆಯನ್ನು ಕಂಡು ಹಿಡಿಯುವ ಮನೋರಂಜನೆಯ ಆಟಗಳು ಕಂಡು ಬಂದವು. ಯುವಕರಿಂದ ರಂಗನಾಥ ಜಾತ್ರೆ ಹಬ್ಬದಂತೆ ಭಾಸವಾಗಿತ್ತು. ಸಂಜೆ ಸಾಮಾಜಿಕ ನಾಟಕ ನಡೆಯಿತು.</p>.<p>ರಂಗನಾಥ ಜಾತ್ರೆ ಅಂಗವಾಗಿ ಕಳೆದ 10 ದಿನಗಳ ಹಿಂದೆ ಆನೆಗೊಂದಿ ಗ್ರಾಮಸ್ಥರಿಂದ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಪ್ರಶಸ್ತಿಗಳನ್ನು ವಿತರಣೆ ಮಾಡಿದರು.</p>.<p class="Subhead"><strong>ಗಣ್ಯರಿಂದ ದರ್ಶನ:</strong> ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ಸಮಾಜ ಸೇವಕ ಸಂಗಮೇಶ್ ಸುಗ್ರೀವಾ, ಮಾಜಿ ಜಿ.ಪಂ ಸದಸ್ಯೆ ಲಲಿತಾರಾಣಿ ಶ್ರೀರಂಗ ದೇವರಾಯಲು ಸೇರಿದಂತೆ ಹಲವು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.</p>.<p>ಈ ವೇಳೆಯಲ್ಲಿ ರಂಗನಾಥ ದೇವಸ್ಥಾನ ಕಮಿಟಿ ಅಧ್ಯಕ್ಷ ಹರಿಹರ ದೇವರಾಯಲು, ಡಿ.ಪಿ ಕುಪ್ಪರಾಜ್, ರಾಮಕೃಷ್ಣ ಇಲ್ಲೂರು, ಗ್ರಾಮಲೆಕ್ಕಾಧಿಕಾರಿ ಮಹಾಲಕ್ಷ್ಮಿ ಪಿ.ಆರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ತಾಲ್ಲೂಕಿನ ಆನೆಗೊಂದಿ ಗ್ರಾಮದ ಶ್ರೀರಂಗ ನಾಥಸ್ವಾಮಿ ದೇವರ ರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.</p>.<p>ರಂಗನಾಥಸ್ವಾಮಿ ದೇವರ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ನಡೆಯಲಿದ್ದು, ಅದರಲ್ಲಿ ಮೊದಲ ದಿನ ಗುರುವಾರ ಆನೆಗೊಂದಿ ಕೃಷ್ಣ ದೇವರಾಯನ ಮನೆತನದಿಂದ ಅಂಕುರಾರ್ಪಣೆ, ಧ್ವಜಾರೋಹಣದ ಜೊತೆಗೆ ರಾತ್ರಿ ಕಲ್ಯಾಣೋತ್ಸವ ನಡೆಯಿತು.</p>.<p>ಶುಕ್ರವಾರ ಬೆಳಿಗ್ಗೆ ಮತ್ತು ಸಂಜೆ ಗ್ರಾಮದಲ್ಲಿ ಗರುಡೋತ್ಸವ ಮಾಡಲಾಯಿತು. ಶನಿವಾರ ಬೆಳಿಗ್ಗೆ ರಂಗನಾಥ ದೇವಸ್ಥಾನವನ್ನು ತೆಂಗಿನಗರಿ, ಬಾಳೆದಿಂಡು, ಚೆಂಡೂ, ಮಾವಿನ ತೋರಣಗಳಿಂದ ಅಲಂಕರಿಸಿ, ವಿವಿಧ ರೀತಿಯ ಧಾರ್ಮಿಕ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿ, ಬ್ರಹ್ಮರಥೋತ್ಸವ ನಡೆಸಲಾಯಿತು.</p>.<p>ರಥೋತ್ಸವಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದವಾಗಿ ಊಟ ನೀಡಲಾಯಿತು. ಸಂಜೆ ರಾಜ ಮನೆತನದವರ ಸಮ್ಮುಖದಲ್ಲಿ ದೇವಸ್ಥಾನ ಧ್ವಜಪಠ ಹರಾಜು ಮಾಡಿ, ಆ ಧ್ವಜ ರಥಕ್ಕೆ ಕಟ್ಟಿ ತೆರು ಎಳೆಯಲಾಯಿತು. ನಂತರ ರಂಗನಾಥ ದೇವರನ್ನು ಗ್ರಾಮದ ರಾಜಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಮಾಡಲಾಯಿತು.</p>.<p>ಈ ವೇಳೆಯಲ್ಲಿ ಸಾಣಾಪುರ, ಹನುಮನಹಳ್ಳಿ, ರಂಗಾಪುರ, ಚಿಕ್ಕರಾಂಪುರ, ಆನೆಗೊಂದಿ, ಕಡೆಬಾಗಿಲು, ಬಸವನ ದುರ್ಗಾ, ಬಂಡಿಬಸಪ್ಪ ಕ್ಯಾಂಪ್, ಸಂಗಾಪುರ ಗ್ರಾಮಗಳ ಭಕ್ತರು ತೇರಿಗೆ ಬಾಳೆಹಣ್ಣು, ಉತ್ತತ್ತಿ ಎಸೆದರು.</p>.<p>ಜಾತ್ರೆಯಲ್ಲಿ ಮಹಿಳೆಯರು ತರಹೇವಾರಿ ಬಳೆ, ಓಲೆ, ಸರ ಖರೀದಿಸಿದರು. ಇನ್ನೂ ಕೆಲ ಮಕ್ಕಳು ಬಲೂನು, ಬೊಂಬೆ, ಆಟದ ಸಾಮಗ್ರಿ ಖರೀದಿಸಿ, ಖುಷಿಪಟ್ಟರೆ, ಇನ್ನೂ ಕೆಲ ಮಕ್ಕಳು ಜಪಿಂಗ್ ಆಟ, ಜೈಯಿಂಟ್ ವೀಲ್ ಆಡಿ ಖುಷಿಪಟ್ಟರು.</p>.<p>ಜಾತ್ರೆಯಲ್ಲಿ ಹುಲಿ, ಅನೆ, ಮೊಲ ಜೊತೆಗೆ 1ರ ಸಂಖ್ಯೆಯನ್ನು ಕಂಡು ಹಿಡಿಯುವ ಮನೋರಂಜನೆಯ ಆಟಗಳು ಕಂಡು ಬಂದವು. ಯುವಕರಿಂದ ರಂಗನಾಥ ಜಾತ್ರೆ ಹಬ್ಬದಂತೆ ಭಾಸವಾಗಿತ್ತು. ಸಂಜೆ ಸಾಮಾಜಿಕ ನಾಟಕ ನಡೆಯಿತು.</p>.<p>ರಂಗನಾಥ ಜಾತ್ರೆ ಅಂಗವಾಗಿ ಕಳೆದ 10 ದಿನಗಳ ಹಿಂದೆ ಆನೆಗೊಂದಿ ಗ್ರಾಮಸ್ಥರಿಂದ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಪ್ರಶಸ್ತಿಗಳನ್ನು ವಿತರಣೆ ಮಾಡಿದರು.</p>.<p class="Subhead"><strong>ಗಣ್ಯರಿಂದ ದರ್ಶನ:</strong> ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ಸಮಾಜ ಸೇವಕ ಸಂಗಮೇಶ್ ಸುಗ್ರೀವಾ, ಮಾಜಿ ಜಿ.ಪಂ ಸದಸ್ಯೆ ಲಲಿತಾರಾಣಿ ಶ್ರೀರಂಗ ದೇವರಾಯಲು ಸೇರಿದಂತೆ ಹಲವು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.</p>.<p>ಈ ವೇಳೆಯಲ್ಲಿ ರಂಗನಾಥ ದೇವಸ್ಥಾನ ಕಮಿಟಿ ಅಧ್ಯಕ್ಷ ಹರಿಹರ ದೇವರಾಯಲು, ಡಿ.ಪಿ ಕುಪ್ಪರಾಜ್, ರಾಮಕೃಷ್ಣ ಇಲ್ಲೂರು, ಗ್ರಾಮಲೆಕ್ಕಾಧಿಕಾರಿ ಮಹಾಲಕ್ಷ್ಮಿ ಪಿ.ಆರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>