ಕೀಟಶಾಸ್ತ್ರ ವಿಜ್ಞಾನಿ ಡಾ.ರಾಘವೇಂದ್ರ ಎಲಿಗಾರ ಮಾತನಾಡಿ,‘ಈಗಾಗಲೇ ರೈತರು ಎರಡನೇ ಬೆಳೆಗೆ ಭತ್ತದ ಸಸಿ ಮಡಿ ತಯಾರು ಮಾಡಿದ್ದಾರೆ. 15 ರಿಂದ 20 ದಿನಗಳ ಸಸಿ ಇದೆ. ಗಂಗಾವತಿ, ಕಂಪ್ಲಿ, ಇಟಗಿ, ಉಳೆನೂರು, ಮುಷ್ಟೂರು, ಬಸಾಪಟ್ಟಣ ಹಾಗೂ ಸಿದ್ದಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಸಸಿ ಮಡಿಯಲ್ಲಿ ಕಣೆ ನೊಣ ಬಾಧೆ ಕಂಡುಬಂದಿದೆ’ ಎಂದು ತಿಳಿಸಿದರು.