ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಗೋಮಾಂಸ ತಿನ್ನಲ್ಲ: ಓಲೈಸಲು ಹೇಳಿಕೆ: ಪ್ರಭು ಚವಾಣ್‌‌

ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌‌ ಹೇಳಿಕೆ
Last Updated 13 ಜನವರಿ 2021, 20:23 IST
ಅಕ್ಷರ ಗಾತ್ರ

ಕೊಪ್ಪಳ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನಲ್ಲ. ಕೆಲವರನ್ನು ಓಲೈಸಲು ಹಾಗೆ ಹೇಳಿಕೆ ನೀಡುತ್ತಿರುತ್ತಾರೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೋ ಹತ್ಯೆ ನಿಷೇಧ ನೂತನ ಕಾನೂನು ಅಡಿ, ಗೋ ಹತ್ಯೆ ಮಾಡಿದರೆ ₹5 ಲಕ್ಷ ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗೋಮಾಂಸ ತಿನ್ನಲು ಪ್ರಚೋದಿಸುವವರಿಗೂ ಶಿಕ್ಷೆ ವಿಧಿಸುವ ಅಂಶ ಸೇರಿಸುವ ಚಿಂತನೆಯೂ ಇದೆ’ ಎಂದರು.

‘ಸಿದ್ದರಾಮಯ್ಯ ಅವರು, ನಾನು ಗೋಮಾಂಸ ತಿನ್ನುತ್ತೇನೆ ಎಂದು ಎದೆತಟ್ಟಿಕೊಂಡು ಹೇಳುತ್ತಾರೆ. ಹಾಗೆ ಮಾಡಿದರೆ ಅವರನ್ನೂ ಒಳಗೆ ಹಾಕುತ್ತೇವೆ’ ಎಂದು ಹೇಳಿದರು.

‘ಈ ವಿಷಯದಲ್ಲಿ ಜನರ ಮನಸ್ಸನ್ನು ಘಾಸಿಗೊಳಿಸುವುದು ಕೂಡಾ ಕಾನೂನು ಬಾಹಿರ’ ಎಂದು ಎಚ್ಚರಿಕೆ ನೀಡಿದರು.

‘ಏನ್ರಿ ಪ್ರಭು ಚವ್ಹಾಣ್‌’ ಎಂದುಸಿದ್ದರಾಮಯ್ಯ ಶೈಲಿಯಲ್ಲಿ ಸಂಬೋಂಧಿಸಿಆಂಗಿಕ ಭಾವನೆ ಮಾಡಿ ಲೇವಡಿ ಮಾಡಿದ ಅವರು ‘ಗೋವು ಕೋಟ್ಯಂತರ ಹಿಂದೂಗಳಿಗೆ ಪೂಜ್ಯನೀಯವಾದ ಮತ್ತು ತಾಯಿ ಸ್ಥಾನದಲ್ಲಿರುವ ದೇವರ ಸ್ವರೂಪ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT