ಗಂಗಾವತಿ: ತಾಲ್ಲೂಕಿನ ಹೇಮಗುಡ್ಡ ಗ್ರಾಮದಲ್ಲಿ ಕಪುಚಿನ್ ಕೃಷಿಕ ಸೇವಾ ಕೇಂದ್ರ ಸಹಯೋಗದಲ್ಲಿ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆ ಗ್ರಾಮಸ್ಥರಿಗೆ ಉಚಿತ ಬಿತ್ತನೆ ಬೀಜ, ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿ ವಿತರಿಸಲಾಯಿತು.
ಯೋಜನಾಧಿಕಾರಿ ಡಾ.ಸದಾಶಿವ ಕಾಂಬಳೆ ಮಾತನಾಡಿ, 34 ದೇಶಗಳಲ್ಲಿ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, 2026ರ ವೇಳೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರಿಗೆ ತಲುಪಲಿದೆ ಎಂದರು.
ಚೈಲ್ಡ್ ಫಂಡ್ ಇಂಡಿಯಾ ಸಂಯೋಜಕ ಪ್ರಕಾಶ ಕಡಗದ ಮಾತನಾಡಿ, 125 ಮಕ್ಕಳಿಗೆ ಬ್ಯಾಗ್, ಪುಸ್ತಕ, ನೀರಿನ ಬಾಟಲ್ ಹಾಗೂ ಉನ್ನತ ಶಿಕ್ಷಣ ಪಡೆಯುವ 35 ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು, 80 ಸಣ್ಣ ರೈತರಿಗೆ ಮೆಕ್ಕೆಜೋಳದ ಬೀಜಗಳನ್ನು ವಿತರಿಸಲಾಯಿತು ಎಂದರು.
ಮುಕ್ಕುಂಪಿ ಗ್ರಾ.ಪಂ ಸದಸ್ಯ ಹನುಮಂತಪ್ಪ ತಳವಾರ, ಸಿದ್ದ ನಗೌಡ, ನರಸಪ್ಪ,ಯಮನಪ್ಪ, ಮಂಜುನಾಥ ಸಾಗರ, ಶಿವರಂಜನಿ, ವಿಜಯಲಕ್ಷ್ಮಿ, ಕಾಮಕ್ಷಿ, ಮಂಜುನಾಥ ಇದ್ದರು.