ಕೊಪ್ಪಳ ಜಿಲ್ಲೆ ಗಂಗಾವತಿಯ ಜಯನಗರದ ಮುಸ್ಲಿಂ (ಪಿಂಜಾರ) ಸಮುದಾಯದವರ ಮನೆಯಲ್ಲಿ ಮಂಗಳವಾರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯ ಮೆರೆದರು. ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಕಾಸೀಂ ಅಲಿ ಮುದ್ದಾಬಳ್ಳಿ ಅವರ ಮನೆಯಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಪೂಜೆ ನಡೆಯಿತು. ಹಿಂದೂ–ಮುಸ್ಲಿಂ ಭಾವೈಕ್ಯ ಸಾರುವ ಹಾಡುಗಳನ್ನು ಹಾಡುತ್ತಾ ಮಾಲಾಧಾರಿಗಳು ಪೂಜೆ ಮಾಡಿದರು.