‘ಕಾಲುವೆ ಎಡ, ಬಲ ಭಾಗದ ರಕ್ಷಣಾ ಗೋಡೆಯಲ್ಲಿನ ಮುರಂ ತಗೆದು ಹೊಸ ಮುರಂ ತುಂಬಿ, ಕಾಂಕ್ರೀಟ್ನಿಂದ ಬಲ ಪಡಿಸುವುದರ ಜೊತೆಗೆ ತಳ ಭಾಗವನ್ನು ಗಟ್ಟಿಗೊಳಿಸಲಾಗುತ್ತಿದೆ. ದುರಸ್ತಿಗೆ 3 ತಂಡಗಳಲ್ಲಿ ಆಧುನಿಕ ಯಂತ್ರಗಳು, ಕಾರ್ಮಿಕರು ಲೈನಿಂಗ್ ಕಾಮಗಾರಿ ಮಾಡುತ್ತಿದ್ದಾರೆ. ಇದಕ್ಕಾಗಿಯೇ ನಾಲೆ ಬಳಿಯೇ ಅಧಿಕಾರಿಗಳ ತಂಡ ಬಿಡಾರ ಹೂಡಿದೆ‘ ಎಂದು ಎಂಜಿನಿಯರ್ ಸೂಗಪ್ಪ ಅಳವಂಡಿ ತಿಳಿಸಿದರು.