<p><strong>ಹುಲಿಗಿ (ಮುನಿರಾಬಾದ್):</strong> ‘ಇಂದಿನ ಯಾಂತ್ರಿಕ ಯುಗದಲ್ಲಿ ಒತ್ತಡರಹಿತ ಜೀವನಕ್ಕೆ ಅಧ್ಯಾತ್ಮ ಶಿಕ್ಷಣ ಅತ್ಯವಶ್ಯಕ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಮಾನಸ ಅಭಿಪ್ರಾಯಪಟ್ಟರು.</p>.<p>ಮಹಾಶಿವರಾತ್ರಿ ಅಂಗವಾಗಿ ಸಮೀಪದ ಹುಲಿಗಿಯಲ್ಲಿ ನಡೆದ 21 ವಿಶಿಷ್ಟ ಲಿಂಗಗಳ ದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗೊಂದಲದಲ್ಲಿರುವ ವ್ಯಕ್ತಿಯ ಮನಸ್ಸನ್ನು ಪರಮಾತ್ಮನ ಸತ್ಯ ಪರಿಚಯ ಮಾಡಿಸುವತ್ತ ನಮ್ಮ ಸಂಸ್ಥೆ ಸುಮಾರು 15 ವರ್ಷಗಳಿಂದ ಈ ಗ್ರಾಮದಲ್ಲಿ ಪ್ರವಚನ ತರಗತಿಯನ್ನು ನಡೆಸುತ್ತ ಬಂದಿದೆ. ನಮ್ಮ ಸಂಸ್ಥೆಗೆ ಕಾಯಂ ಕಟ್ಟಡ ನೀಡುವ ಭರವಸೆ, ಭರವಸೆಯಾಗಿಯೇ ಉಳಿದಿದೆ. ಇಲ್ಲಿನ ಹಿರಿಯರು ಭರವಸೆಯನ್ನು ಈಡೇರಿಸಲು ಮನಸ್ಸು ಮಾಡಬೇಕು’ ಎಂದರು.</p>.<p>ಹಿರಿಯ ರಂಗ ಕಲಾವಿದ ಕೊಟ್ರಯ್ಯ ಸ್ವಾಮಿ ಹಿರೇಮಠ ಮಾತನಾಡಿ,‘ಸಂಸ್ಥೆಯು ಪ್ರತಿವರ್ಷ ಮಹಾಶಿವರಾತ್ರಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದು, 2021 ವರ್ಷವನ್ನು ಸಂಕೇತವಾಗಿರಿಸಿಕೊಂಡು 21 ಶಿವಲಿಂಗಗಳ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನಾರ್ಧನ, ಗಣ್ಯರಾದ ವಿಜಯಕುಮಾರ ಶೆಟ್ಟಿ, ಶಿವಲೀಲಮ್ಮ ಹಿರೇಮಠ ಸ್ಥಳೀಯ ವಿಶ್ವವಿದ್ಯಾಲಯದ ಮತ್ತು ಪತಂಜಲಿ ಪರಿವಾರದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಿಗಿ (ಮುನಿರಾಬಾದ್):</strong> ‘ಇಂದಿನ ಯಾಂತ್ರಿಕ ಯುಗದಲ್ಲಿ ಒತ್ತಡರಹಿತ ಜೀವನಕ್ಕೆ ಅಧ್ಯಾತ್ಮ ಶಿಕ್ಷಣ ಅತ್ಯವಶ್ಯಕ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಮಾನಸ ಅಭಿಪ್ರಾಯಪಟ್ಟರು.</p>.<p>ಮಹಾಶಿವರಾತ್ರಿ ಅಂಗವಾಗಿ ಸಮೀಪದ ಹುಲಿಗಿಯಲ್ಲಿ ನಡೆದ 21 ವಿಶಿಷ್ಟ ಲಿಂಗಗಳ ದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗೊಂದಲದಲ್ಲಿರುವ ವ್ಯಕ್ತಿಯ ಮನಸ್ಸನ್ನು ಪರಮಾತ್ಮನ ಸತ್ಯ ಪರಿಚಯ ಮಾಡಿಸುವತ್ತ ನಮ್ಮ ಸಂಸ್ಥೆ ಸುಮಾರು 15 ವರ್ಷಗಳಿಂದ ಈ ಗ್ರಾಮದಲ್ಲಿ ಪ್ರವಚನ ತರಗತಿಯನ್ನು ನಡೆಸುತ್ತ ಬಂದಿದೆ. ನಮ್ಮ ಸಂಸ್ಥೆಗೆ ಕಾಯಂ ಕಟ್ಟಡ ನೀಡುವ ಭರವಸೆ, ಭರವಸೆಯಾಗಿಯೇ ಉಳಿದಿದೆ. ಇಲ್ಲಿನ ಹಿರಿಯರು ಭರವಸೆಯನ್ನು ಈಡೇರಿಸಲು ಮನಸ್ಸು ಮಾಡಬೇಕು’ ಎಂದರು.</p>.<p>ಹಿರಿಯ ರಂಗ ಕಲಾವಿದ ಕೊಟ್ರಯ್ಯ ಸ್ವಾಮಿ ಹಿರೇಮಠ ಮಾತನಾಡಿ,‘ಸಂಸ್ಥೆಯು ಪ್ರತಿವರ್ಷ ಮಹಾಶಿವರಾತ್ರಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದು, 2021 ವರ್ಷವನ್ನು ಸಂಕೇತವಾಗಿರಿಸಿಕೊಂಡು 21 ಶಿವಲಿಂಗಗಳ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನಾರ್ಧನ, ಗಣ್ಯರಾದ ವಿಜಯಕುಮಾರ ಶೆಟ್ಟಿ, ಶಿವಲೀಲಮ್ಮ ಹಿರೇಮಠ ಸ್ಥಳೀಯ ವಿಶ್ವವಿದ್ಯಾಲಯದ ಮತ್ತು ಪತಂಜಲಿ ಪರಿವಾರದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>