ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ತಹಶೀಲ್ದಾರ್ ವಿಠ್ಠಲ್ ’ಎನ್ಡಿಆರ್ಎಫ್ ಪ್ರಕಾರ ಮನೆಬಿದ್ದರೆ ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಗೃಹಪಯೋಗಿ ಮತ್ತು ಧವಸ ಧಾನ್ಯ ಹಾಳಾಗಿದ್ದಕ್ಕೆ ₹10 ಸಾವಿರ ಮತ್ತು ಮೊದಲ ಕಂತು ₹95 ಸಾವಿರ ಪರಿಹಾರ ನೀಡಲಾಗುತ್ತದೆ. ಒಂದೆರೆಡು ದಿನಗಳಲ್ಲಿ ಫಲಾನುಭವಿ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ’ ಎಂದು ತಿಳಿಸಿದರು.