ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ಪ್ರೇಯಸಿ ಮಾತು ಬಿಟ್ಟರೆ ಅಶ್ಲೀಲ ಗೋಡೆ ಬರಹ ಬರೆಯುತ್ತಿದ್ದ ಪ್ರೇಮಿ!

ಕನಕಗಿರಿಯಲ್ಲಿ ವ್ಯಾಪಕವಾಗಿದ್ದ ಹಾವಳಿಗೆ ಅಂತ್ಯ ಹಾಡಿದ ಪೊಲೀಸರು; ಆರೋಪಿ ಬಂಧನ
Published : 30 ಜುಲೈ 2023, 4:19 IST
Last Updated : 30 ಜುಲೈ 2023, 4:19 IST
ಫಾಲೋ ಮಾಡಿ
Comments
ಯಶೋಧಾ ವಂಟಗೋಡಿ
ಯಶೋಧಾ ವಂಟಗೋಡಿ
ಎರಡು ತಂಡಗಳ ರಚನೆ
ಘಟನೆ ಕುರಿತು ಎರಡು ಪ್ರಕರಣಗಳು ದಾಖಲೆಯಾದರೂ ಅಶ್ಲೀಲ ಬರಹದ ಆರೋಪಿಯನ್ನು ಪತ್ತೆ ಹೆಚ್ಚಲು ಆಗಿರಲಿಲ್ಲ. ಇತ್ತೀಚೆಗೆ ಇದರ ಹಾವಳಿ ವ್ಯಾಪಕವಾಗಿದ್ದರಿಂದ ಸಾರ್ವಜನಿಕವಾಗಿಯೂ ಟೀಕೆ ವ್ಯಕ್ತವಾಗಿತ್ತು. ಆದ್ದರಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಟಗೋಡಿ ಅವರು ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಕನಕಗಿರಿ ಠಾಣೆಯ ಪೊಲೀಸ್‌ ಇನ್‌ಸ್ಟೆಕ್ಟರ್‌ ಜಗದೀಶ ಕೆ.ಜಿ. ಸಿಪಿಸಿಗಳಾದ ಗವಿಸಿದ್ದಯ್ಯ ಗವಿಕುಮಾರ ಬಸವರಾಜ ಅವರನ್ನು ಒಳಗೊಂಡ ಒಂದು ತಂಡ ರಚಿಸಿದ್ದರು. ಸೆನ್‌ (ಸೈಬರ್‌ ಆರ್ಥಿಕ ಹಾಗೂ ಮಾದಕದ್ರವ್ಯ ಅಪರಾಧಗಳ ನಿಗ್ರಹ) ಠಾಣೆ ಇನ್‌ಸ್ಟೆಕ್ಟರ್‌ ಅಮರೇಶ ಹುಬ್ಬಳ್ಳಿ ಸಿಬ್ಬಂದಿ ಬಸವರಾಜ ಅಂಗಡಿ ಸವಿತಾ ಸಜ್ಜನ್‌ ಕೋಟೇಶ್ ಮತ್ತು ಎಸಿಪಿ ಪ್ರಸಾದ ಅವರನ್ನು ಒಳಗೊಂಡ ಇನ್ನೊಂದು ತಂಡವನ್ನೂ ಕಾರ್ಯಾಚರಣೆಗೆ ನಿಯೋಜಿಸಿದ್ದರು.
ಆರೋಪಿ ಪತ್ತೆಗೆ ನೆರವಾದ ಹೆಸರುಗಳು!
ಪೊಲೀಸರು 100ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದು ಒಂದೆಡೆಯಾದರೆ ಅಶ್ಲೀಲ ಬರಹಗಳಲ್ಲಿ ಆರೋಪಿ ಬರೆಯುತ್ತಿದ್ದ ಹೆಸರುಗಳು ಈ ಪ್ರಕರಣವನ್ನು ಭೇದಿಸಲು ಪ್ರಮುಖವಾಗಿ ನೆರವಾಗಿದೆ. ಆರೋಪಿಯ ಬರಹಗಳಲ್ಲಿ ಬಾಲಕಿಯ ಕುಟುಂಬ ಸದಸ್ಯರು ಸಂಬಂಧಿಕರ ಹೆಸರುಗಳೇ ಹೆಚ್ಚಾಗಿರುತ್ತಿದ್ದವು. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಪೊಲೀಸರು ಬಾಲಕಿಯ ಮನೆಯ ಸುತ್ತಮುತ್ತಲಿನವರು ಅಥವಾ ಸಂಬಂಧಿಕರೇ ಈ ಕೃತ್ಯ ಮಾಡುತ್ತಿರಬಹುದು ಎನ್ನುವ ಬಲವಾದ ಶಂಕೆ ಹೊಂದಿದ್ದರು. ಇದೇ ಆಧಾರದ ಮೇಲೆ ಅವರ ಮನೆಯ ಸುತ್ತಲಿನವರನ್ನೇ ಹೆಚ್ಚು ವಿಚಾರಣೆ ಮಾಡಿದಾಗ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಬೇರೆಯವರ ವಿಚಾರಣೆಯಿಂದಲೂ ಅನೇಕ ಸತ್ಯಗಳು ಹೊರಬಂದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT