ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನತ್ತ ಪ್ರೇಮಬರಹ

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅರ್ಜುನ್ ಸರ್ಜಾ ನಿರ್ದೇಶನದ ‘ಪ್ರೇಮಬರಹ’ ಚಿತ್ರವೀಗ ವಿದೇಶಗಳಲ್ಲಿಯೂ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ನ್ಯೂಜೆರ್ಸಿ, ಟೆಕ್ಸಾಸ್, ಷಿಕಾಗೋ ಮುಂತಾದೆಡೆಗಳಲ್ಲಿ ಏರ್ಪಡಿಸಿದ್ದ ಪ್ರೀಮಿಯರ್‌ ಶೋಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಮೊದಲ ಸಲ ಈ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.  ಚಂದನ್, ಸಾಧುಕೋಕಿಲ, ರಂಗಾಯಣ ರಘು, ವಿಶ್ವನಾಥ್, ಸುಹಾಸಿನಿ, ಪ್ರಕಾಶ್ ರೈ, ಮುಂತಾದವರು ಅಭಿನಯಿಸಿದ್ದಾರೆ.
***
ನೀನಾ?’ ಚಿತ್ರೀಕರಣ ಶುರು

ಆರ್.ವಿಜಯಕುಮಾರ್ ನಿರ್ದೇಶನದ`ನೀನಾ?` ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಎಂ.ಮಂಜುನಾಥ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣಕ್ಕೆ ನೇಹನೀಶ್‌ ಚಾಲನೆ ನೀಡಿದರು.  ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳಲ್ಲಿಯೇ ಮೂತ್ತು ದಿನಗಳ ಚಿತ್ರೀಕರಣ ನಡೆಸಲು ಚಿತ್ರತಂಡ ಉದ್ದೇಶಿಸಿದೆ. ಚಿತ್ರದಲ್ಲಿನ ಎರಡು ಹಾಡುಗಳಿಗೆ ವಿಜಯ್‌ ಸಂಗೀತ ಸಂಯೋಜಿಸಲಿದ್ದಾರೆ. ಯೇಸು ಛಾಯಾಗ್ರಹಣ, ಶಿವಪ್ರಸಾದ್‌ ಸಂಕಲನ ಇರುವ ಈ ಚಿತ್ರಕ್ಕೆ ಮಹೇಶ್‌ ಸಂಭಾಷಣೆ ಬರೆದಿದ್ದಾರೆ. ಮಂಜುನಾಥ್, ಕುಶಾಲ್, ಭಾನುಪ್ರಕಾಶ್, ಮೇಘನಾ ಪ್ರಕಾಶ್, ಪವಿತ್ರಾ ಮುಂತಾದವರು `ನೀನಾ?` ಚಿತ್ರದ ತಾರಾಬಳಗದಲ್ಲಿದ್ದಾರೆ.
**
ವಿವಿಧ ಭಾರತಿಯಲ್ಲಿ ರಾಜ್‌ ನೆನಪು
ಬೆಂಗಳೂರು ವಿವಿಧ ಭಾರತಿ 102.9 ಎಫ್.ಎಂನಲ್ಲಿ ವರನಟ ಡಾ. ರಾಜಕುಮಾರ್ ಕುರಿತ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಏಪ್ರಿಲ್ ತಿಂಗಳ ನಾಲ್ಕು ಶುಕ್ರವಾರಗಳ ಬೆಳಗಿನ ನಂದನ ಕಾರ್ಯಕ್ರಮದಲ್ಲಿ ಬೆ.9ರಿಂದ 10ಗಂಟೆಯ ತನಕ ರಾಜಕುಮಾರ್ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮ ಶನಿವಾರ ಸಂಜೆ 6ಗಂಟೆಗೆ ಮರುಪ್ರಸಾರವಾಗಲಿದೆ. ರಾಜಕುಮಾರ್ ಅವರ ಜೀವನದ ಘಟನಾವಳಿಗಳನ್ನು ಪತ್ರಕರ್ತ ಬಿ.ಜಿ.ರವಿಕುಮಾರ್ ಪ್ರಸ್ತುತಪಡಿಸುವರು. ಆಕಾಶವಾಣಿಯ ಧ್ವನಿ ಭಂಡಾರದಿಂದ ಡಾ.ರಾಜ್‌ ಅಭಿನಯದ ಚಿತ್ರಗೀತೆಗಳು ಅವರ ಚಿತ್ರಗಳ ಧ್ವನಿವಾಹಿನಿ ತುಣುಕುಗಳು ಹಾಗೂ ಚಿ.ಉದಯಶಂಕರ್ ವರನಟರೊಂದಿಗೆ ನಡೆಸಿದ ಆತ್ಮೀಯ ಮಾತುಕತೆ ಈ ಕಾರ್ಯಕ್ರಮದಲ್ಲಿ ಸರಣಿಯಲ್ಲಿ ಪ್ರಸಾರಗೊಳ್ಳಲಿದೆ.

ಇದರೊಂದಿಗೆ ರಜತಾಂತರಂಗ ಹೆಸರಿನ ಜನ ಮೆಚ್ಚಿದ ಕನ್ನಡ ಚಿತ್ರಗಳ ಅಂತರಂಗದ ಮಾತಿಗೆ ಬಾನುಲಿ ರೂಪದ ಕಾರ್ಯಕ್ರಮ ಸಹ ಏಪ್ರಿಲ್ 24ರ ಡಾ. ರಾಜ್ ಹುಟ್ಟುಹಬ್ಬದ ದಿನದಿಂದ ಪ್ರತಿದಿನ ಪ್ರಸಾರವಾಗಲಿದೆ. ‘ಬಂಗಾರದ ಮನುಷ್ಯ’ ಚಿತ್ರದಿಂದ ರಜತಾಂತರಂಗ ಆರಂಭವಾಗುತ್ತಿದೆ. ಚಿತ್ರ ಸಂಬಂಧಿ ವಿಶೇಷಗಳು ವೈಶಿಷ್ಟ್ಯಪೂರ್ಣವಾಗಿ ಅಪರೂಪದ ದಾಖಲೆಗಳ ಧ್ವನಿಮುದ್ರಿಕೆ ಸಮೇತ ಶ್ರೋತೃಗಳಿಗೆ ತಲುಪಲಿದೆ.
**
ಹೈಪರ್‌ ಟ್ರೇಲರ್‌ ಬಿಡುಗಡೆ
ಎಂ.ಬಿಗ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಕಾರ್ತಿಕ್  ನಿರ್ಮಿಸಿರುವ ‘ಹೈಪರ್’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್‍ನಲ್ಲಿ 23 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅರ್ಜುನ್ ಆರ್ಯ ಕಥೆ ಬರೆದಿರುವ ಈ ಚಿತ್ರವನ್ನು ಗಣೇಶ್ ವಿನಾಯಕ್ ನಿರ್ದೇಶಿಸಿದ್ದಾರೆ.

ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಗಣೇಶ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಕಾಲೇಜ್ ಲವ್ ಸ್ಟೊರಿ ಹಾಗೂ ಅಪ್ಪ- ಮಗಳ ಬಾಂಧವ್ಯದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಇಮ್ಮಾನ್ ಡಿ. ಹಾಗೂ ಎಲ್ವಿನ್ ಸಂಗೀತ ನೀಡಿದ್ದಾರೆ. ಅರ್ಜುನ್ ಆರ್ಯ, ಶೀಲಾ, ರಂಗಾಯಣ ರಘು, ಶೋಭರಾಜ್, ಬುಲೆಟ್ ಪ್ರಕಾಶ್, ಅಚ್ಯುತಕುಮಾರ್, ಶ್ರೀನಿವಾಸಪ್ರಭು, ಬ್ಯಾಂಕ್ ಜನಾರ್ದನ್, ವೀಣಾಸುಂದರ್, ಲಕ್ಷ್ಮೀ ಸಿದ್ದಯ್ಯ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT