<p><strong>ಕೊಪ್ಪಳ:</strong> ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಾಣಲು ಬಿ. ಶ್ರೀರಾಮುಲು ಕಾರಣ ಎನ್ನುವ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಹೇಳಿಕೆಗೆ</p><p>ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.ಶ್ರೀರಾಮುಲು ವಿರುದ್ಧ ಹೇಳಿಕೆ: ಜನಾರ್ದನ ರೆಡ್ಡಿಗೆ ವಾಲ್ಮೀಕಿ ಮುಖಂಡರ ಎಚ್ಚರಿಕೆ.<p>ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ, ಮುಖಂಡರಾದ ಸುರೇಶ ದೊಣ್ಣಿ, ಹನುಮಂತಪ್ಪ ಜೋಗದ ಹಾಗೂ ವೀರಭದ್ರಪ್ಪ ನಾಯಕ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಒಂದು ಚುನಾವಣೆಯಲ್ಲಿ ಒಬ್ಬರಿಂದಲೇ ಗೆಲ್ಲುವುದಿಲ್ಲ. ಸೋಲುವುದೂ ಇಲ್ಲ. ಪ್ರತಿ ಚುನಾವಣೆಯಲ್ಲಿ ಸಾಮೂಹಿಕ ಜವಾಬ್ದಾರಿ ಇರುತ್ತದೆ ಎಂದರು.</p><p>ರಾಮುಲು ವಿರುದ್ದ ಶಾಸಕ ಜನಾರ್ದನ ರೆಡ್ಡಿ ಮಾತನಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ರಾಜಕೀಯ ವಿಚಾರದಲ್ಲಿ ರಾಮುಲು ಅವರಿಗೆ ರೆಡ್ಡಿ ನೇರವಾಗಿ ಮಾತನಾಡಿದ್ದಾರೆ. ಸೋಲಿನ ಹೊಣೆ ಒಬ್ಬರ ಮೇಲೆಯೇ ಹೊರಿಸಿದ್ದು ರಾಮುಲು ಅವರಿಗೆ ಮಾಡಿದ್ದು ಅವಮಾನ ಎಂದರು.</p>.ಜನಾರ್ದನ ರೆಡ್ಡಿ vs ಶ್ರೀರಾಮುಲು | ‘ಮಾಜಿ’ ಗೆಳೆಯರ ‘ಸವಾಲ್–ಜವಾಬ್’.<p>ರಾಮುಲು ಇಲ್ಲದ ಹೋಗಿದ್ದರೆ, ನಾಯಕ ಸಮಾಜ ನಿಮ್ಮ ಜೊತೆಗೆ ನಿಲ್ಲದಿದ್ದರೆ ರೆಡ್ಡಿ ರಾಜಕೀಯವಾಗಿ ಎಲ್ಲಿರುತ್ತಿದ್ದರು? ರಾಮುಲು ಅವರ ಬಳಿ ಲಾಭ ತೆಗೆದುಕೊಂಡ ರೆಡ್ಡಿ ವಾಪಸ್ ಕೊಟ್ಟಿದ್ದೇನು? ಎಂದು ಪ್ರಶ್ನಿಸಿದರು. ಅಗರ್ವಾಲ್ ಹೇಳಿಕೆಯಿಂದ ರಾಮುಲು ಹಾಗೂ ನಾಯಕ ಸಮಾಜಕ್ಕೆ ಅವಮಾನವಾಗಿದೆ ಎಂದರು.</p><p>ನಮ್ಮ ಸಮಾಜದ ನಾಯಕನಿಗೆ ಅನ್ಯಾಯವಾದರೆ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು, ರೆಡ್ಡಿ ನಾಯಕ ಸಮಾಜದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.</p><p>2018ರ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರು ಸ್ಪರ್ಧೆ ಮಾಡಲು ಬಿಜೆಪಿಯಲ್ಲಿ ಯಾರೂ ಗಂಡಸರು ಇರಲಿಲ್ಲವೇ? ಆಗ ರಾಮುಲು ಬೇಕಾಯಿತೇ? ಈಗ ಯಾಕೆ ನಮ್ಮ ಸಮಾಜದ ನಾಯಕನಿಗೆ ಅವಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.</p> .ಸಣ್ಣವರೆಲ್ಲ ಅಧ್ಯಕ್ಷರಾಗಿದ್ದಕ್ಕೆ BJPಯಲ್ಲಿ ಚುನಾವಣೆ ನಡೆಯುತ್ತಿದೆ: ಶ್ರೀರಾಮುಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಾಣಲು ಬಿ. ಶ್ರೀರಾಮುಲು ಕಾರಣ ಎನ್ನುವ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಹೇಳಿಕೆಗೆ</p><p>ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.ಶ್ರೀರಾಮುಲು ವಿರುದ್ಧ ಹೇಳಿಕೆ: ಜನಾರ್ದನ ರೆಡ್ಡಿಗೆ ವಾಲ್ಮೀಕಿ ಮುಖಂಡರ ಎಚ್ಚರಿಕೆ.<p>ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ, ಮುಖಂಡರಾದ ಸುರೇಶ ದೊಣ್ಣಿ, ಹನುಮಂತಪ್ಪ ಜೋಗದ ಹಾಗೂ ವೀರಭದ್ರಪ್ಪ ನಾಯಕ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಒಂದು ಚುನಾವಣೆಯಲ್ಲಿ ಒಬ್ಬರಿಂದಲೇ ಗೆಲ್ಲುವುದಿಲ್ಲ. ಸೋಲುವುದೂ ಇಲ್ಲ. ಪ್ರತಿ ಚುನಾವಣೆಯಲ್ಲಿ ಸಾಮೂಹಿಕ ಜವಾಬ್ದಾರಿ ಇರುತ್ತದೆ ಎಂದರು.</p><p>ರಾಮುಲು ವಿರುದ್ದ ಶಾಸಕ ಜನಾರ್ದನ ರೆಡ್ಡಿ ಮಾತನಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ರಾಜಕೀಯ ವಿಚಾರದಲ್ಲಿ ರಾಮುಲು ಅವರಿಗೆ ರೆಡ್ಡಿ ನೇರವಾಗಿ ಮಾತನಾಡಿದ್ದಾರೆ. ಸೋಲಿನ ಹೊಣೆ ಒಬ್ಬರ ಮೇಲೆಯೇ ಹೊರಿಸಿದ್ದು ರಾಮುಲು ಅವರಿಗೆ ಮಾಡಿದ್ದು ಅವಮಾನ ಎಂದರು.</p>.ಜನಾರ್ದನ ರೆಡ್ಡಿ vs ಶ್ರೀರಾಮುಲು | ‘ಮಾಜಿ’ ಗೆಳೆಯರ ‘ಸವಾಲ್–ಜವಾಬ್’.<p>ರಾಮುಲು ಇಲ್ಲದ ಹೋಗಿದ್ದರೆ, ನಾಯಕ ಸಮಾಜ ನಿಮ್ಮ ಜೊತೆಗೆ ನಿಲ್ಲದಿದ್ದರೆ ರೆಡ್ಡಿ ರಾಜಕೀಯವಾಗಿ ಎಲ್ಲಿರುತ್ತಿದ್ದರು? ರಾಮುಲು ಅವರ ಬಳಿ ಲಾಭ ತೆಗೆದುಕೊಂಡ ರೆಡ್ಡಿ ವಾಪಸ್ ಕೊಟ್ಟಿದ್ದೇನು? ಎಂದು ಪ್ರಶ್ನಿಸಿದರು. ಅಗರ್ವಾಲ್ ಹೇಳಿಕೆಯಿಂದ ರಾಮುಲು ಹಾಗೂ ನಾಯಕ ಸಮಾಜಕ್ಕೆ ಅವಮಾನವಾಗಿದೆ ಎಂದರು.</p><p>ನಮ್ಮ ಸಮಾಜದ ನಾಯಕನಿಗೆ ಅನ್ಯಾಯವಾದರೆ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು, ರೆಡ್ಡಿ ನಾಯಕ ಸಮಾಜದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.</p><p>2018ರ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರು ಸ್ಪರ್ಧೆ ಮಾಡಲು ಬಿಜೆಪಿಯಲ್ಲಿ ಯಾರೂ ಗಂಡಸರು ಇರಲಿಲ್ಲವೇ? ಆಗ ರಾಮುಲು ಬೇಕಾಯಿತೇ? ಈಗ ಯಾಕೆ ನಮ್ಮ ಸಮಾಜದ ನಾಯಕನಿಗೆ ಅವಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.</p> .ಸಣ್ಣವರೆಲ್ಲ ಅಧ್ಯಕ್ಷರಾಗಿದ್ದಕ್ಕೆ BJPಯಲ್ಲಿ ಚುನಾವಣೆ ನಡೆಯುತ್ತಿದೆ: ಶ್ರೀರಾಮುಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>