ಕೊಪ್ಪಳ: ‘ವಿಜಯನಗರ ನೂತನ ಜಿಲ್ಲೆಗೆ ಮೂಲಸೌಕರ್ಯಕ್ಕಾಗಿ ಸರ್ಕಾರ ₹ 1,600 ಕೋಟಿ ಅನುದಾನ ನೀಡಿದೆ’ ಎಂದು ಸಚಿವಆನಂದ ಸಿಂಗ್ ಹೇಳಿದರು.
ಕೊಪ್ಪಳದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂಪ್ಲಿ ಸೇರಿದಂತೆ ಇತರೆ ತಾಲ್ಲೂಕುಗಳವರು ನೂತನ ಜಿಲ್ಲೆಗೆ ಸೇರಲು ಮಾಡುತ್ತಿರುವ ಹೋರಾಟ ಅವರ ಸಂವಿಧಾನ ಬದ್ಧ ಹಕ್ಕು. ಇದನ್ನು ನಮ್ಮ ಸರ್ಕಾರ ಪರಿಶೀಲಿಸಲಿದೆ’ ಎಂದು ತಿಳಿಸಿದರು.