ಶಾಸಕ ಅಸಮಾಧಾನ: ಕೊಳವೆಮಾರ್ಗ ಒಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅಮರೇಗೌಡ ಬಯ್ಯಾಪುರ ಅವರು, ಒಳಚರಂಡಿ ಮಂಡಳಿ ಮತ್ತು ಪುರಸಭೆ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ಹೊರಹಾಕಿದರು. ಕಳೆದ ವರ್ಷವಷ್ಟೇ ₹ 3 ಕೋಟಿ ವೆಚ್ಚದಲ್ಲಿ ಮೋಟರ್ಪಂಪ್ಗಳನ್ನು ಒದಗಿಸಲಾಗಿದೆ. ನಿರ್ವಹಣೆ ವ್ಯವಸ್ಥೆ ಸರಿ ಇಲ್ಲ. ಮಂಡಳಿಗೆ ಪುರಸಭೆಯವರು ಸಮರ್ಪಕ ರೀತಿಯಲ್ಲಿ ನಿರ್ವಹಣೆ ವೆಚ್ಚದ ಬಾಕಿ ಪಾವತಿಸುತ್ತಿಲ್ಲ. ಮಂಡಳಿಯ ಎಂಜಿನಿಯರ್ಗಳು ಕೂಡ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುತ್ತಿಲ್ಲ. ಗಂಡ ಹೆಂಡತಿ ನಡುವೆ ಕೂಸು ಬಡವಾಯಿತು ಎನ್ನುವಂತೆ ಈ ಎರಡೂ ಸಂಸ್ಥೆಗಳ ಮಧ್ಯೆ ಪಟ್ಟಣದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದರು.