<p><strong>ತಾವರಗೇರಾ:</strong> ಪಾಳು ಬಿದ್ದ ಬಸವಣ್ಣ ಕ್ಯಾಂಪ್ ಬಸ್ ತಂಗುದಾಣ ಸ್ಥಳೀಯ ಯುವ ಬ್ರಿಗೇಡ್ ಸದಸ್ಯರ ಶ್ರಮದಾನದಿಂದ ಹೊಸ ರೂಪ ಪಡೆದಿದೆ.</p>.<p>ತಾವರಗೇರಾ ಪಟ್ಟಣದ ಬಸವಣ್ಣ ಕ್ಯಾಂಪ್ನ ಬಸ್ ತಂಗುದಾಣದ ಸುತ್ತ ಗಿಡ–ಗಂಟಿ ಬೆಳೆದು ಸಾರ್ವಜನಿಕರು ಒಳಗೆ ಹೋಗದ ಪರಿಸ್ಥಿತಿ ಇತ್ತು.</p>.<p>ಯುವ ಬ್ರಿಗೇಡ್ ಸದಸ್ಯರು ಶನಿವಾರ ಶ್ರಮದಾನ ಮಾಡಿದರು. ಬಸ್ ನಿಲ್ದಾಣದ ಮುಂದೆ ಬೆಳೆದಿದ್ದ ಗಿಡ–ಗಂಟಿಗಳು ಮತ್ತು ಸುತ್ತಲೂ ಬೆಳೆದ ಮುಳ್ಳು ಗಿಡಗಳನ್ನು ತೆರವುಮಾಡಿದರು.</p>.<p>ಬಸ್ ನಿಲ್ದಾಣವನ್ನು ತೊಳೆದು ನಾಡ ಧ್ವಜದ ಬಣ್ಣಗಳನ್ನು ಬಳಿಯಲಾಯಿತು. ಸದಸ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.</p>.<p>ಪಟ್ಟಣದ ಚಂದ್ರಶೇಖರ ಸರನಾಳಗೌಡರ, ಮಂಜುನಾಥ ದರೋಜಿ ಬಸ್ ತಂಗುದಾಣ ಸ್ವಚ್ಚತೆಗೆ ಸಹಕಾರ ನೀಡಿದ್ದಾರೆ. ಉಚಿತವಾಗಿ ಬಣ್ಣ ನೀಡಿದ್ದಾರೆ.</p>.<p>‘ಪಟ್ಟಣದಲ್ಲಿ ಪಾಳು ಬಿದ್ದ ನರಹರಿ ದೇವಸ್ಥಾನ ಮತ್ತು ಕರಿವೀರಣ್ಣ ದೇವಸ್ಥಾನದ ಕಲ್ಯಾಣಿ ಸ್ವಚ್ಚತೆಗೊಳಿಸುವ ಮೂಲಕ ಸಾರ್ವಜನಿಕರಿಗೆ ಬಾವಿಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಿದ್ದೆವು. ಪ್ರತಿ ವಾರ ಪಟ್ಟಣದಲ್ಲಿ ಮಾಡುತ್ತಿದ್ದೇವೆ’ ಎಂದು ಯುವ ಬ್ರಿಗೇಡ್ನ ಭೀಮೇಶ ಭಂಡಾರಿತಿಳಿಸಿದರು.</p>.<p>ಯುವ ಬ್ರಿಗೇಡ್ ಸಂಘಟನೆಯ ಶ್ಯಾಮ್ ಬಂಗಿ, ನೀಲಕಂಠ, ಲಕ್ಷ್ಮಣ ವಗರನಾಳ, ಮಂಜು ಚಿನ್ನಾಪೂರ, ಭೀಮೇಶ ಭಂಡಾರಿ, ಲಕ್ಷ್ಮೀಕಾಂತ, ಪ್ರಶಾಂತ ಕಲಾಲ ಮತ್ತು ಸಂಘಟನೆಯ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾವರಗೇರಾ:</strong> ಪಾಳು ಬಿದ್ದ ಬಸವಣ್ಣ ಕ್ಯಾಂಪ್ ಬಸ್ ತಂಗುದಾಣ ಸ್ಥಳೀಯ ಯುವ ಬ್ರಿಗೇಡ್ ಸದಸ್ಯರ ಶ್ರಮದಾನದಿಂದ ಹೊಸ ರೂಪ ಪಡೆದಿದೆ.</p>.<p>ತಾವರಗೇರಾ ಪಟ್ಟಣದ ಬಸವಣ್ಣ ಕ್ಯಾಂಪ್ನ ಬಸ್ ತಂಗುದಾಣದ ಸುತ್ತ ಗಿಡ–ಗಂಟಿ ಬೆಳೆದು ಸಾರ್ವಜನಿಕರು ಒಳಗೆ ಹೋಗದ ಪರಿಸ್ಥಿತಿ ಇತ್ತು.</p>.<p>ಯುವ ಬ್ರಿಗೇಡ್ ಸದಸ್ಯರು ಶನಿವಾರ ಶ್ರಮದಾನ ಮಾಡಿದರು. ಬಸ್ ನಿಲ್ದಾಣದ ಮುಂದೆ ಬೆಳೆದಿದ್ದ ಗಿಡ–ಗಂಟಿಗಳು ಮತ್ತು ಸುತ್ತಲೂ ಬೆಳೆದ ಮುಳ್ಳು ಗಿಡಗಳನ್ನು ತೆರವುಮಾಡಿದರು.</p>.<p>ಬಸ್ ನಿಲ್ದಾಣವನ್ನು ತೊಳೆದು ನಾಡ ಧ್ವಜದ ಬಣ್ಣಗಳನ್ನು ಬಳಿಯಲಾಯಿತು. ಸದಸ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.</p>.<p>ಪಟ್ಟಣದ ಚಂದ್ರಶೇಖರ ಸರನಾಳಗೌಡರ, ಮಂಜುನಾಥ ದರೋಜಿ ಬಸ್ ತಂಗುದಾಣ ಸ್ವಚ್ಚತೆಗೆ ಸಹಕಾರ ನೀಡಿದ್ದಾರೆ. ಉಚಿತವಾಗಿ ಬಣ್ಣ ನೀಡಿದ್ದಾರೆ.</p>.<p>‘ಪಟ್ಟಣದಲ್ಲಿ ಪಾಳು ಬಿದ್ದ ನರಹರಿ ದೇವಸ್ಥಾನ ಮತ್ತು ಕರಿವೀರಣ್ಣ ದೇವಸ್ಥಾನದ ಕಲ್ಯಾಣಿ ಸ್ವಚ್ಚತೆಗೊಳಿಸುವ ಮೂಲಕ ಸಾರ್ವಜನಿಕರಿಗೆ ಬಾವಿಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಿದ್ದೆವು. ಪ್ರತಿ ವಾರ ಪಟ್ಟಣದಲ್ಲಿ ಮಾಡುತ್ತಿದ್ದೇವೆ’ ಎಂದು ಯುವ ಬ್ರಿಗೇಡ್ನ ಭೀಮೇಶ ಭಂಡಾರಿತಿಳಿಸಿದರು.</p>.<p>ಯುವ ಬ್ರಿಗೇಡ್ ಸಂಘಟನೆಯ ಶ್ಯಾಮ್ ಬಂಗಿ, ನೀಲಕಂಠ, ಲಕ್ಷ್ಮಣ ವಗರನಾಳ, ಮಂಜು ಚಿನ್ನಾಪೂರ, ಭೀಮೇಶ ಭಂಡಾರಿ, ಲಕ್ಷ್ಮೀಕಾಂತ, ಪ್ರಶಾಂತ ಕಲಾಲ ಮತ್ತು ಸಂಘಟನೆಯ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>