<p>ಗಂಗಾವತಿ: ರೂ,16 ಕೋಟಿ ಮೊತ್ತದ ಬೃಹತ್ ಬಜೆಟ್ ಮಂಡಿಸಿದ ಬೆನ್ನಲ್ಲೆ ನಗರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಗುಡ್ಡೆಕಲ್ ಬಸಪ್ಪ ನಾಯಕ ಅವರ ಮೇಲೆ ಒತ್ತಡ ಆರಂಭವಾದ ಹಿನ್ನೆಲೆ ಗುರುವಾರ ತಮ್ಮ ಸ್ಥಾನಕ್ಕೆ ವಿದಾಯ ಹೇಳಿದರು. <br /> <br /> ಬುಧವಾರ ನಡೆದ ನಾಟಕೀಯ ಬೆಳವಣಿಗೆಯೊಂದರ ಪರಿಣಾಮ ಬಸಪ್ಪ ನಾಯಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿಕೊಂಡರು. ಅದಕ್ಕೂ ಮುನ್ನ ಸಹದ್ಯೋಗಿ ಸದಸ್ಯರು ಒಪ್ಪಂದದಂತೆ ಸ್ಥಾನ ಬಿಟ್ಟುಕೊಡಿ ಎಂದು ಅಧ್ಯಕ್ಷರಿಗೆ ತಿಳಿಸಿದರು. <br /> <br /> ಈ ಬಗ್ಗೆ ಹೈಕಮಾಂಡ್ ಹೇಳಿದ ಬಳಿಕವೇ ರಾಜೀನಾಮೆ ನೀಡುವುದಾಗಿ ಅಧ್ಯಕ್ಷ ಸ್ಪಸ್ಟಪಡಿಸಿದರು. ಈ ಹಿನ್ನೆಲೆ ಕಾಂಗ್ರೆಸ್ನ `ಒನ್ ಮ್ಯಾನ್ ಆರ್ಮಿ~ ಹೈಕಮಾಂಡ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದಲ್ಲಿ ಎರಡು ಮೂರು ಗಂಟೆಕಾಲ ಸಭೆ ನಡೆಯಿತು ಎನ್ನಲಾಗಿದೆ.<br /> <br /> ಒಪ್ಪಂದದಂತೆ: ಗಂಗಾವತಿ ನಗರಸಭೆಯ ಎರಡನೇ ಅವಧಿಯ 30 ತಿಂಗಳ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಈ ಹಿನ್ನೆಲೆ ಕಾಂಗ್ರೆಸ್ (ಆಗಿನ ಜೆಡಿಎಸ್) ಪಕ್ಷದಲ್ಲಿ ಕೇವಲ ಇಬ್ಬರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಯಾಗಿದ್ದರು.<br /> <br /> ಇದನ್ನು ಮನಗಂಡ ಹೈಕಮಾಂಡ್ `ಎಲ್ಲರಿಗೂ ಸಮಾನ ಅವಕಾಶ~ ನೀತಿಯಡಿ ಅಧಿಕಾರ ಅವಧಿಯನ್ನು ತಲಾ ಹದಿನೈದು ತಿಂಗಳು ಹಂಚುವ ನಿರ್ಧಾರ ಕೈಗೊಂಡು ಮೊದಲ ಅವಧಿಗೆ ಬಸಪ್ಪ ನಾಯಕ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಿತ್ತು. <br /> <br /> ಸೂಪರ್ಸೀಡ್ ಗುಮ್ಮ: ಅಧ್ಯಕ್ಷ ಅವಧಿ ಮೊದಲ ಹಂತ (ಹೈದಿನೈದು ತಿಂಗಳು) ಇನ್ನೇನು ಎರಡು ಮೂರು ತಿಂಗಳಲ್ಲಿ ಮುಗಿಯುತ್ತದೆ ಎಂಬ ಹಂತದಲ್ಲಿ ನಗರಸಭೆಯ ಆಡಳಿತ ಹಿಡಿದ ಕಾಂಗ್ರೆಸ್ ಧೋರಣೆ ಖಂಡಿಸಿ ಶಾಸಕ ಮುನವಳ್ಳಿ, ಸಂಸದ ಶಿವರಾಮಗೌಡ ಸೂಪರ್ಸೀಡ್ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. <br /> <br /> ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಬಸಪ್ಪ ನಾಯಕ್ ಸೂಪರ್ಸೀಡ್ ವಿರುದ್ದ ಕಾನೂನು ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ ಎರಡು ಮೂರು ತಿಂಗಳು ಕಾಲ ಹರಣವಾಯಿತು. ಈ ಹಿನ್ನೆಲೆ ಮತ್ತಷ್ಟು ಅವಧಿಗೆ ಮುಂದುವರೆಯುವುದಾಗಿ ಬಸಪ್ಪ ಇಂಗಿತ ವ್ಯಕ್ತಪಡಿಸಿದರು ಎನ್ನಲಾಗಿದೆ.<br /> <br /> ಈಗಾಗಲೆ ಎರಡು ತಿಂಗಳು ಹೆಚ್ಚುವರಿ ಅವಧಿ ಮೀರಿದ್ದರಿಂದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅನ್ಸಾರಿ ಸೂಚಿಸಿದರು. ರಾಜೀನಾಮೆಯಿಂದ ತೆರವಾಗಲಿರುವ ಸ್ಥಾನಕ್ಕೆ ಉಳಿದ ಕೊನೆಯ ಅವಧಿಗೆ ಪಾಪಣ್ಣ ನಾಯಕ ಅಧ್ಯಕ್ಷರಾಗುವ ಸಂಭವ ಇದೆ ಎಂದು ಪಕ್ಷದ ಮೂಲ ತಿಳಿಸಿವೆ.<br /> <br /> `ಹೈ~ ನಿರ್ಧಾರಕ್ಕೆ ಬದ್ಧ: ಕಳೆದ 20 ವರ್ಷಗಳ ಬಳಿಕ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಈ ಹಿನ್ನೆಲೆ ಅಧಿಕಾರ ಪಡೆಯುವಾಗ ಹೈಕಮಾಂಡ್ ನೀಡಿದ್ದ ಆದೇಶ ಸ್ವೀಕರಿಸಿದ್ದೆ. ಈಗಲೂ ಸಾಂಘಿ ಕ ನಿರ್ಧಾರಕ್ಕೆ ಬದ್ಧ ಎಂದು ಬಸಪ್ಪ ನಾಯಕ ಹೇಳಿದರು.<br /> <br /> ಗುರುವಾರ ಕೊಪ್ಪಳಕ್ಕೆ ತೆರಳಿ ಜಿಲ್ಲಾಧಿಕಾರಿಗೆ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ಸಲ್ಲಿಸಿದ ಬಳಿಕ ಮಾತನಾಡಿದರು. ಈ ಸಂದರ್ಭದಲ್ಲಿ ಮನೋಹರಸ್ವಾಮಿ, ಮೊಹಮ್ಮದ್ ಫಾರೂಖ್ಸಾಬ, ಆರ್. ಕಣ್ಣನ್, ಉಸ್ಮಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ರೂ,16 ಕೋಟಿ ಮೊತ್ತದ ಬೃಹತ್ ಬಜೆಟ್ ಮಂಡಿಸಿದ ಬೆನ್ನಲ್ಲೆ ನಗರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಗುಡ್ಡೆಕಲ್ ಬಸಪ್ಪ ನಾಯಕ ಅವರ ಮೇಲೆ ಒತ್ತಡ ಆರಂಭವಾದ ಹಿನ್ನೆಲೆ ಗುರುವಾರ ತಮ್ಮ ಸ್ಥಾನಕ್ಕೆ ವಿದಾಯ ಹೇಳಿದರು. <br /> <br /> ಬುಧವಾರ ನಡೆದ ನಾಟಕೀಯ ಬೆಳವಣಿಗೆಯೊಂದರ ಪರಿಣಾಮ ಬಸಪ್ಪ ನಾಯಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿಕೊಂಡರು. ಅದಕ್ಕೂ ಮುನ್ನ ಸಹದ್ಯೋಗಿ ಸದಸ್ಯರು ಒಪ್ಪಂದದಂತೆ ಸ್ಥಾನ ಬಿಟ್ಟುಕೊಡಿ ಎಂದು ಅಧ್ಯಕ್ಷರಿಗೆ ತಿಳಿಸಿದರು. <br /> <br /> ಈ ಬಗ್ಗೆ ಹೈಕಮಾಂಡ್ ಹೇಳಿದ ಬಳಿಕವೇ ರಾಜೀನಾಮೆ ನೀಡುವುದಾಗಿ ಅಧ್ಯಕ್ಷ ಸ್ಪಸ್ಟಪಡಿಸಿದರು. ಈ ಹಿನ್ನೆಲೆ ಕಾಂಗ್ರೆಸ್ನ `ಒನ್ ಮ್ಯಾನ್ ಆರ್ಮಿ~ ಹೈಕಮಾಂಡ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದಲ್ಲಿ ಎರಡು ಮೂರು ಗಂಟೆಕಾಲ ಸಭೆ ನಡೆಯಿತು ಎನ್ನಲಾಗಿದೆ.<br /> <br /> ಒಪ್ಪಂದದಂತೆ: ಗಂಗಾವತಿ ನಗರಸಭೆಯ ಎರಡನೇ ಅವಧಿಯ 30 ತಿಂಗಳ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಈ ಹಿನ್ನೆಲೆ ಕಾಂಗ್ರೆಸ್ (ಆಗಿನ ಜೆಡಿಎಸ್) ಪಕ್ಷದಲ್ಲಿ ಕೇವಲ ಇಬ್ಬರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಯಾಗಿದ್ದರು.<br /> <br /> ಇದನ್ನು ಮನಗಂಡ ಹೈಕಮಾಂಡ್ `ಎಲ್ಲರಿಗೂ ಸಮಾನ ಅವಕಾಶ~ ನೀತಿಯಡಿ ಅಧಿಕಾರ ಅವಧಿಯನ್ನು ತಲಾ ಹದಿನೈದು ತಿಂಗಳು ಹಂಚುವ ನಿರ್ಧಾರ ಕೈಗೊಂಡು ಮೊದಲ ಅವಧಿಗೆ ಬಸಪ್ಪ ನಾಯಕ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಿತ್ತು. <br /> <br /> ಸೂಪರ್ಸೀಡ್ ಗುಮ್ಮ: ಅಧ್ಯಕ್ಷ ಅವಧಿ ಮೊದಲ ಹಂತ (ಹೈದಿನೈದು ತಿಂಗಳು) ಇನ್ನೇನು ಎರಡು ಮೂರು ತಿಂಗಳಲ್ಲಿ ಮುಗಿಯುತ್ತದೆ ಎಂಬ ಹಂತದಲ್ಲಿ ನಗರಸಭೆಯ ಆಡಳಿತ ಹಿಡಿದ ಕಾಂಗ್ರೆಸ್ ಧೋರಣೆ ಖಂಡಿಸಿ ಶಾಸಕ ಮುನವಳ್ಳಿ, ಸಂಸದ ಶಿವರಾಮಗೌಡ ಸೂಪರ್ಸೀಡ್ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. <br /> <br /> ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಬಸಪ್ಪ ನಾಯಕ್ ಸೂಪರ್ಸೀಡ್ ವಿರುದ್ದ ಕಾನೂನು ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ ಎರಡು ಮೂರು ತಿಂಗಳು ಕಾಲ ಹರಣವಾಯಿತು. ಈ ಹಿನ್ನೆಲೆ ಮತ್ತಷ್ಟು ಅವಧಿಗೆ ಮುಂದುವರೆಯುವುದಾಗಿ ಬಸಪ್ಪ ಇಂಗಿತ ವ್ಯಕ್ತಪಡಿಸಿದರು ಎನ್ನಲಾಗಿದೆ.<br /> <br /> ಈಗಾಗಲೆ ಎರಡು ತಿಂಗಳು ಹೆಚ್ಚುವರಿ ಅವಧಿ ಮೀರಿದ್ದರಿಂದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅನ್ಸಾರಿ ಸೂಚಿಸಿದರು. ರಾಜೀನಾಮೆಯಿಂದ ತೆರವಾಗಲಿರುವ ಸ್ಥಾನಕ್ಕೆ ಉಳಿದ ಕೊನೆಯ ಅವಧಿಗೆ ಪಾಪಣ್ಣ ನಾಯಕ ಅಧ್ಯಕ್ಷರಾಗುವ ಸಂಭವ ಇದೆ ಎಂದು ಪಕ್ಷದ ಮೂಲ ತಿಳಿಸಿವೆ.<br /> <br /> `ಹೈ~ ನಿರ್ಧಾರಕ್ಕೆ ಬದ್ಧ: ಕಳೆದ 20 ವರ್ಷಗಳ ಬಳಿಕ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಈ ಹಿನ್ನೆಲೆ ಅಧಿಕಾರ ಪಡೆಯುವಾಗ ಹೈಕಮಾಂಡ್ ನೀಡಿದ್ದ ಆದೇಶ ಸ್ವೀಕರಿಸಿದ್ದೆ. ಈಗಲೂ ಸಾಂಘಿ ಕ ನಿರ್ಧಾರಕ್ಕೆ ಬದ್ಧ ಎಂದು ಬಸಪ್ಪ ನಾಯಕ ಹೇಳಿದರು.<br /> <br /> ಗುರುವಾರ ಕೊಪ್ಪಳಕ್ಕೆ ತೆರಳಿ ಜಿಲ್ಲಾಧಿಕಾರಿಗೆ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ಸಲ್ಲಿಸಿದ ಬಳಿಕ ಮಾತನಾಡಿದರು. ಈ ಸಂದರ್ಭದಲ್ಲಿ ಮನೋಹರಸ್ವಾಮಿ, ಮೊಹಮ್ಮದ್ ಫಾರೂಖ್ಸಾಬ, ಆರ್. ಕಣ್ಣನ್, ಉಸ್ಮಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>